Friday, July 18, 2008

ಅನ್ನಪೂರ್ಣೇಶ್ವರಿ ಸೂರಮ್ಮ ಇನ್ನಿಲ್ಲ


ತೊಂಬತ್ತೆರಡರ ಅತ್ತೆ ಗುರುವಾರ ಇಹಲೋಕದ ಜಂಜಡಗಳನ್ನು ತೊರೆದಳು. ದಪ್ಪಗೆ ದಿಂಡಗೆ ಇದ್ದ ಅತ್ತೆ ಸಣ್ಣ ಕಡ್ದಿಯಂತಾಗಿ ಇದು ಅತ್ತೆಯಾ...? ಎಂಬಂತಾಗಿದ್ದಳು. ತಲವಾಟದ ಗೋವಿಂದ ಭಟ್ಟ ದಂಪತಿಗಳ ಆರು ಜನ ಮಕ್ಕಳಲ್ಲಿ ಒಬ್ಬಳಾಗಿ ಪ್ರಸ್ತುತ ಲಿಂಗನಮಕ್ಕಿ ಆಣೆಕಟ್ಟಿನಲ್ಲಿ ಮುಳುಗಡೆಯಾದ ಗಿಂಡಿಮನೆ ಎಂಬ ಊರಿನ ರಾಮಚಂದ್ರಪ್ಪ ಪಟೇಲ್ರ ಹೆಂಡತಿಯಾಗಿ ಸೇರಿ ನಂತರ ಅಲ್ಲಿ ಒಂಬತ್ತು ಮಕ್ಕಳ ತಾಯಿಯಾಗಿ ಗಿಂಡಿಮನೆ ಎಂಬ ಊರು ಮುಳುಗಡೆಯಾದನಂತರ ಮುಂಡಗೋಡು ತಾಲ್ಲೂಕಿನ ಕಂಚಿಕೊಪ್ಪ ಎಂಬ ಊರಿಗೆ ಹೋಗಿ ನೆಲೆನಿಂತ ಸೂರಮ್ಮ ನೆಂಬ ಅತ್ತೆ ಸಾಕ್ಷಾತ್ ಅನ್ನಪೂರ್ಣೆಶ್ವರಿ. ಅವಳು ಅದೆಷ್ಟು ಜನರಿಗೆ ಊಟ ಹಾಕಿದಳೋ..? ಅದೆಷ್ಟು ಜನರಿಗೆ ಆತಿಥ್ಯ ಮಾಡಿದಳೋ ಲೆಕ್ಕ ಇಟ್ಟರೆ ದೊಡ್ಡ ಪುಸ್ತಕ ಬೇಕಾಗಿತ್ತು.
ಆಕೆ ಮೊನ್ನೆ ತನ್ನ ತೊಂಬತ್ತೆರಡರ ಹರೆಯದಲ್ಲಿ ದೇಹ ತ್ಯಜಿಸಿದಳು. ಆಕೆಯ ಹತ್ತಿರದವರಿಗೆ ನೆನಪು ಶಾಶ್ವತ. ಅತ್ತೆಗೆ ಸ್ವರ್ಗ ಗ್ಯಾರಂಟಿ . ನಾನು ಬ್ಲಾಗಿನಲ್ಲಿ ಇಷ್ಟು ಮಾತ್ರಾ ಬರೆಯುವುದು ಶ್ರದ್ಧಾಂಜಲಿಗಾಗಿ. ಆಕೆಯ ಪರಿಚಯ ನಿಮಗೆ ಇಲ್ಲದಿದ್ದರೂ ಒಂದು ಶುಭ ಹಾರೈಕೆ ಹಾಕಿಬಿಡಿ.