Thursday, December 31, 2009

ಕಂಡೀರಾ... ನಮ ಸಾಂಬಾಶಿವನ


ಸಾಕ್ಷತ್ ಗುರುವರನಾ... ಕಂಡೀರಾ... ನಮ ಸಾಂಬಾಶಿವನ, ಉರಿಗಣ ಬಿಟ್ಟ ಮನ್ಮಥ ಸುಟ್ಟ..." ಎಂಬ ಲಯಬದ್ಧವಾದ ಹಾಡು, ಲಡ ಲಡ ಲಡ ಎಂಬ ಡಮರುಗದ ಶಬ್ಧ ಹಾಗೂ ಗಂಟಾನಾದದೊಂದಿಗೆ ಒಂದು ಬರೊಬ್ಬರಿ ಆಶಿರ್ವಾದ ಇವಿಷ್ಟು ಅಡಿಕೆ ಶ್ರಾಯದಲ್ಲಿ ಮೈಲಾರ ಕುಂಡಿಗೆ ಎಂಬ ಜನರು ಮನೆಬಾಗಿಲೆಗೆ ಬಂದು ಮಾಡುವ ಕ್ರಿಯೆ. ಮಲೆನಾಡಿನ ಭಾಗದ ಓದುಗರು ನೀವಾಗಿದ್ದರೆ ಒಮ್ಮೆ ಹಳೇ ನೆನಪಿಗೆ ಜಾರಿ ಖಂಡಿತಾ ಮಜ ಅನುಭವಿಸುತ್ತೀರಿ ಇಷ್ಟೊತ್ತಿಗೆ. ಬಯಲು ಸೀಮೆಯ ಈ ಮೈಲಾರಕುಂಡಿಗೆ(ಹಾಗೆಯೇ ಇರಬೇಕು ಅವರ ಹೆಸರು) ಜನಾಂಗ ಭಿಕ್ಷುಕರಲ್ಲ. ಎಲ್ಲಾ ಅವರ ಜೀವನಕ್ಕೆ ಸಾಕಾಗುವಷ್ಟು ಇರುವವರೇ. ಆದರೆ ಅವರದು ಇದೊಂದು ಪದ್ದತಿ. ಸಂಭಾವನೆ ಭಟ್ಟರ ತರಹ. ಹಾಗೆಯೇ ಜನರೂ ಕೂಡ ಅವರನ್ನು ಗೌರವದಿಂದ ನಡೆಯಿಸಿಕೊಳ್ಳುತ್ತಾರೆ. ಓಂದು ಉಟ್ಟ ಬಟ್ಟೆ ಒಂದು ಹೊಸಬಟ್ಟೆ ಕೊಟ್ಟು ಸಿಕ್ಕಾಪಟ್ಟೆ ಲಡ ಲಡ ಲಡ ಶಬ್ಧದ ತಮಟೆಯೊಂದಿಗೆ ಆಶೀರ್ವಾದ ಪಡೆದುಕೊಂಡರೆ ಮನೆಯವರಿಗೂ ಅದೇನೋ ಒಂಥರಾ ನೆಮ್ಮದಿ.
ನಾನು ಸಣ್ಣಕ್ಕಿದಾಗಿನಿಂದ (ಸುಮಾರು ಮೂವತ್ತು ವರ್ಷದ ಹಿಂದಿನಿಂದ) ಅವರದೇ ಆದ ಒಂದೇ ಕುಟುಂಬದ ತಂಡ ಬರುತ್ತಲೇ ಇದೆ. ಮತ್ತು " ಅಯ್ಯಾ ಇದು ನಮ್ಮ ಕಾಲಕ್ಕೆ ಮುಗೀತು ಇನ್ನು ಮುಂದಿನ ವರ್ಷದಿಂದ ಯಾರೂ ಬರೋದಿಲ್ಲ ಸೋಮಿ, ಕೈಬಿಚ್ಚಿ ದಾನ ಮಾಡಿ" ಎಂಬ ಡೈಲಾಗ್ ಕೇಳುತ್ತಾ ಬಂದಾಗಿದೆ. ಹಾಗೂ ಅಂದು ಒಂದೇ ಇದ್ದ ತಂಡ ಇಂದು ಹಿಸೆಯಾಗಿ ನಾಲ್ಕಾಗಿದೆ. ಆದರೆ ಡಮರುಘ ದ ಶಬ್ಧದಲ್ಲಿ ಏನೋ ಮಜ ಇದೆ. ಬೆಂಗಳೂರಿನ ಡಕ್ಕಣಕ ಡಕ್ಕಣಕ ಶಬ್ಧದ ತರಹ.

Friday, December 4, 2009

ತ್ಯಾಂಕ್ಸ್ ಹೇಳಿದರೆ ಅದೆಷ್ಟು ಖುಷಿ ಗೊತ್ತಾ?

ನಾವು ಸರ್ಕಾರಿ ಸ್ವಾಮ್ಯದ ಹಲವಾರು ಸಂಸ್ಥೆಗಳೊಂದಿಗೆ ದಿನನಿತ್ಯ ವ್ಯವಹರಿಸುತ್ತೇವೆ. ಅದು ಕರೆಂಟಿನ ಕೆಇಬಿ ಯಿಂದ ಹಿಡಿದು ಮೊಬೈಲ್ ನ ಬಿ ಎಸ್ ಎನ್ ಎಲ್ ನವರೆಗೂ ಕೆ ಎಸ್ ಆರ‍್ ಟಿಸಿ ಒಳಗೊಂಡಂತೆ ಹತ್ತಾರು ಹಲವಾರು. ಹಾಗೆ ವ್ಯವಹರಿಸುವಾಗೆಲ್ಲ ನಮ್ಮದು ಗೊಣಗಾಟ ಸರ್ವೇ ಸಾಮಾನ್ಯ. ಅಂತಿಮವಾಗಿ ಸರ್ಕಾರಿ ಸೇವೆ ಎಂದರೆ "ರಗಳೆ" ಎಂಬ ಲಂಚಬಾಕತನ ಎಂಬ ವರಾತ. ಆದರೆ ಇಲ್ಲಿ ನಮ್ಮದೂ ಒಂದಿಷ್ಟು ತಪ್ಪಿರುತ್ತದೆ ಅಂತ ನನಗೆ ಮೊನ್ನೆಯಷ್ಟೇ ತಿಳಿಯಿತು. ಅದು ಹೀಗಾಯ್ತು.
ನನ್ನ ವಿಲ್ ಪೋನ್ ಗೆ ಇಂಟರ್ ನೆಟ್ ಹಾಕಿಸಿಕೊಂಡು ಮೂರು ವರ್ಷ ಸಂದವು. ಆವಾಗಾವಾಗ ನೆಟ್ ಕೈಕೊಡುವುದು ಸರ್ವೇ ಸಾಮಾನ್ಯ. ಹಾಗಾದಾಗಲೆಲ್ಲ ಶಿವಮೊಗ್ಗ ಕಂಪ್ಲೇಂಟ್ ನಂಬರ್ ಗೆ ಫೋನ್ ಮಾಡಿ ದೂರುತ್ತಿದೆ. ಅವರಾದರೋ ಅಲ್ಲಿಂದ ದಾರವಾಡಕ್ಕೆ ಪೋನ್ ಹಚ್ಚಿ ದುರಸ್ತಿ ಮಾಡುತ್ತಿದ್ದರು. ಒಮ್ಮೊಮ್ಮೆ ೨ ದಿವಸ ಸರಿ ಆಗದೇ ಇದ್ದಾಗ ಸ್ವಲ್ಪ ಜೋರಾಗಿಯೇ ರಗಳೆ ಮಾಡಿದ್ದು ಇದೆ. ಆದರೆ ಕಳೆದ ಸೋಮವಾರದಿಂದ ಅರೆಕ್ಷಣವೂ ನೆಟ್ ಕೈಕೊಡಲಿಲ್ಲ. ಹೀಗೇ ನೆಟ್ ನಲ್ಲಿ ನೋಡುತ್ತಾ ಕುಳಿತವನಿಗೆ "ಅರೆ ಹೌದು ನಾವು ಕೆಟ್ಟಾಗ ಪೋನ್ ಮಾಡುತ್ತೇವೆ ಸರಿ ಇದ್ದಾಗ ಸುದ್ದಿಯೇ ಹೇಳುವುದಿಲ್ಲವಲ್ಲ. ಅವರುಗಳ ಕೆಲಸಕ್ಕೆ ಸಂಬಳ ಪಡೆಯುತ್ತಿರಬಹುದು ಆದರೆ ಮನುಷ್ಯನ ಮನಸ್ಸಿನ ಮೂಲೆಯಲ್ಲಿ ನಾವು ಮಾಡುತ್ತಿರುವ ಕೆಲಸಕ್ಕೆ ಒಂದು ಹೊಗಳಿಕೆ ಜನರಿಂದ ಬರಲಿ ಅಂಬ ಆಸೆ ಇರಬಹುದಲ್ಲ" ಎಂದೆನಿಸಿ ಕಂಪ್ಲೇಂಟ್ ನಂಬರ್ ಗೆ ಫೋನ್ ಹಚ್ಚಿದೆ. ಹಾಗೂ ವಾರ ಪೂರ್ತಿ ಸರಿಯಿದ್ದ ನೆಟ್ ಬಗ್ಗೆ ಕಂಗ್ರಾಟ್ಸ್ ಹೇಳಿದೆ. ಕಂಪ್ಲೇಟ್ ರಿಸೀವ್ ಮಾಡಿದ ಮೇಡಂ ಗೆ ಮಹದಾಶ್ಚರ್ಯ. ಯಾರೂ ಹೀಗೆಲ್ಲ ವ್ಯವಸ್ಥೆ ಸರಿ ಇದ್ದದನ್ನು ಹೇಳುವುದೇ ಇಲ್ಲವಂತೆ. ಅವರು ಸಂಭ್ರಮದಿಂದ ಮತ್ತೊಬ್ಬ ಮೇಲಾಧಿಕಾರಿಯನ್ನು ಕರೆದು ಪೋನ್ ಕೊಟ್ಟರು, ಅವರದ್ದೂ ಅದೇ ಖುಷಿ.
ಹೀಗೆಲ್ಲಾ ಇದೆ ನಿಮಗೂ ಇಂತಹ ಅನುಭವ ಆಗಿರಬಹುದು ಆಗಿಲ್ಲದಿದ್ದರೆ ಇವತ್ತೇ ಅನುಭವ ಮಾಡಿಕೊಳ್ಳಬಹುದು.

Friday, October 30, 2009

ರತ್ನಾದ ಮಣಿ ಮಂಟಪಾಕೆ ...........

"ರತ್ನಾದ ಮಣಿ ಮಂಟಪಾಕೆ ಸ್ವಾಮಿ ಪ್ರತ್ಯಕ್ಷವಾಗಿ ನೀ ಬಾರಯ್ಯ..." ಹೀಗೊಂದು ಹಾಡು ನನ್ನ ಅಕ್ಕಂದಿರು ಸುಶ್ರಾವ್ಯವಾಗಿ ಹಾಡತೊಡಗಿದರೆಂದರೆ ಅದು ಚೌತಿ ಹಬ್ಬದ ಅಥವಾ ಮತ್ಯಾವುದೋ ದೇವರ ಕಾರ್ಯದ ಮಂಗಳಾರತಿ ಸಮಯ ಅಂತ. ನನ್ನ ಎರಡು ಅಕ್ಕಂದಿರ(ನನಗೆ ಮೂವರು ಅಕ್ಕಂದಿರು, ಅದರಲ್ಲಿ ಇಬ್ಬರು ಸಂಗೀತದ ಪೆಟ್ಟಿಗೆ, ಇಲ್ಲಿ ಹೆಸರನ್ನು ಉದ್ದೇಶಪಟ್ಟೇ ದಾಖಲಿಸುತ್ತಿಲ್ಲ, ಯಾವ ಇಬ್ಬರಿಗೂ ನಾವೇ ಅಂದಾಗಲಿ ಅರ್ಥ...! ಸುಮ್ಮನೆ ಮೂರನೆಯವರಿಗೆ ಬೇಜಾರು ಯಾಕೆ?) ಹಿಟ್ ಹಾಡುಗಳಲ್ಲಿ ಇದೂ ಒಂದು. ಇವತ್ತು ಮೂರು ಸಂಜೆ ಹೊತ್ತಿನಲ್ಲಿ ತುಳಸಿಪೂಜೆಯನ್ನು ಅಜ್ಜ ಮೊಮ್ಮಗ ಶ್ರದ್ಧೆಯಿಂದ ಮಾಡುತ್ತಿರಬೇಕಾದಾಗ ನನ್ನವಳು ಅದೇ ಹಾಡನ್ನು ಗೊಣಗುಟ್ಟಿದಳು. ಅಮ್ಮ ಅದಕ್ಕೆ ದನಿ ಸೇರಿಸಿದಳು. ಆದರೂ ಆ ಹಾಡಿನ ಗತ್ತು ಬರಲಿಲ್ಲ. ನನ್ನ ಮಗ ನನಗೆ ಅವನ ವಯಸ್ಸಿನಲ್ಲಿ ಹೇಗೆ ಶ್ರದ್ಧೆ ಇತ್ತೋ ಅದೇ ಆಸಕ್ತಿಯಿಂದ ತುಳಸಿ ಗಿಡಕ್ಕೆ ಅಲಂಕಾರ ಮಾಡಿ ನೆಲ್ಲಿ ಚಂಡೆ ತಂದು ಸಿಗಿಸಿದ್ದ. ಮತ್ತು ಸಿಕ್ಕಾಪಟ್ಟೆ ಶ್ರದ್ಧೆಯಿಂದ ಕಾರ್ತಿಕ ದೀಪ ಹಚ್ಚುತ್ತಿದ್ದ. ಅಪ್ಪಯ್ಯ ಈಗ ಇಪ್ಪತ್ತೈದು ವರ್ಷದ ಹಿಂದಿನ ಅದೇ ಶ್ರಧ್ದೆಯಿಂದ ಪೂಜೆ ಮಾಡುತ್ತಿದ್ದ.
ಅಮ್ಮ ಹೆಂಡತಿ ಕೂಡ ತನ್ಮಯರಾಗಿದ್ದರು.
ನನಗೆ ಮಾತ್ರಾ ಇವೆಲ್ಲ ಸಣ್ಣ ಮಕ್ಕಳ ಆಟದಂತೆ ಭಾಸವಾಗುತ್ತಿತ್ತು. ಹೌದು ಅದೇಕೋ ನನಗೆ ಅಲ್ಲಿ ತೊಡಗಿಸಿಕೊಳ್ಳಲಾಗುತ್ತಿಲ್ಲ. ಹಾಗಾಗಿ ಕಳೆದುಕೊಳ್ಳುವುದೇ ಹೆಚ್ಚು. ಭಕ್ತಿಯ ಭಾವ ಮೂಡಿಬರಲೂ ಪುಣ್ಯ ಮಾಡಿರಬೇಕು....!. ಆದರೆ ನಾನು ಒಂದೆರಡು ಕ್ಷಣ ಬಾಲ್ಯಕ್ಕೆ ಜಾರಿದೆ. ದೊಡ್ಡ ದೊಡ್ಡ ಅಕ್ಕಂದಿರು "ರತ್ನಾದ......" ಹಾಡುತ್ತಿದ್ದರು ನಾನು ಚಡ್ಡಿ ಹಾಕಿಕೊಂಡು ದೀಪ ಹಚುತ್ತಿದ್ದೆ ಆದರೆ ಆಗಿನ ಚಡ್ಡಿ ಈಗಿನಂತೆ ಮೊಳಕಾಲಿನ ವರೆಗೆ ಬರುತ್ತಿರಲಿಲ್ಲ ಇನ್ನೂ ಬಹಳ ಮೇಲೆಯೇ ಇರುತ್ತಿತ್ತು.....!
ಬೇಕು ಬೇಕು ಇವೆಲ್ಲಾ ಬೇಕು ಹಳೆಯ ಸುಮಧುರ ನೆನಪು ಮರುಕಳಿಸಲಾದರೂ ಬೇಕು. ಮಜ ಇರುವುದೇ ಅಲ್ಲಿ.
ನಿಮಗೂ ನೆನಪಾಗಿರಬೇಕು ಅಲ್ಲ್ವಾ..? ಆಗಲಿಲ್ಲವಾ ನೀವು ನತದೃಷ್ಟರು ಬಿಡಿ. ನಿಮ್ಮ ಮಕ್ಕಳಿಗಾದರೂ
ಸುನೇರೇ ಫಲ್ ಗಳನ್ನು ಕಲ್ಪಿಸಿಕೊಡಿ. ದೊಡ್ಡವರಾದಮೇಲೆ ಹೀಗೆ ಕೊರೆಯುತ್ತಾರೆ. ಆವಾಗ ಹೀಗಿತ್ತು ಮಜ ಇತ್ತು........



ಹಬ್ಬದ ಇಲಾಡಿಯ "ಸೋಬೇಟೆ"




ದೀಪಾವಳಿ, ಭೂಮಿಹುಣ್ಣಿಮೆಯ ಹಬ್ಬಗಳೆಂದರೆ ಭೂತಾಯಿಯ ಮಕ್ಕಳಾದ ರೈತರಿಗೆ ವಿಶೇಷದ ದಿನಗಳು. ಕೃಷಿ ಕೆಲಸಗಳು ಮುಗಿದಿರುತ್ತವೆ. ಫಸಲು ಕಣ್ಣೆದುರಿಗೆ ನಳನಳಿಸುತ್ತಿರುತ್ತದೆ. ಪ್ರಕೃತಿಯ ಮಳೆಗಾಲದ ಅಬ್ಬರದಿಂದ ಉಳಿಸಿಕೊಂಡ ತೆನೆಭರಿತ ಫಸಲನ್ನು ೨-೩ ತಿಂಗಳುಗಳ ಕಾಲ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಂಡರೆ ವರ್ಷಪೂರ್ತಿ ಗೆದ್ದಂತಯೇ. ಆ ರಕ್ಷಣೆಯ ಕೆಲಸ ಹಗಲುರಾತ್ರಿಯದು. ಅಲ್ಲಿ ಸ್ವಲ್ಪ ಏರುಪೇರಾದರೂ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗುತ್ತದೆ. ಇದಕ್ಕೆ ಉಪಾಯವಾಗಿಯೇ ಹಬ್ಬದ ಮಾರನೇ ದಿವಸಗಳನ್ನು ಮಲೆನಾಡಿನ ರೈತರುಗಳು ಸೋಬೇಟೆ ಗಾಗಿ ಮೀಸಲಿಡುತ್ತಾರೆ. ಮೋಜು ಮಜದ ಜತೆಗೆ ಒಂದೇ ಕಲ್ಲಿನಲ್ಲಿ ಮೂರ್ನಾಲ್ಕು ಹಕ್ಕಿ ಹೊಡೆದ ಹಾಗಿನ ಕೆಲಸ ಈ ಸೋಬೇಟೆ.
ಏನಿದು ಸೋಬೇಟೆ? ಎಂಬ ಪ್ರಶ್ನೆಗೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ಸೋಸಿ ಆಡುವ ಬೇಟೆ ಎಂದರ್ಥ. ಭೂಮಿ ಹುಣ್ಣಿಮೆ ಹಾಗೂ ದೀಪಾವಳಿಯ ಮಾರನೇ ದಿನ ಕೃಷಿಕರು ಇಲಾಡಿ(ರಜ) ವನ್ನು ಆಚರಿಸುತ್ತಾರೆ. ಅಂದು ಊರಿನ ಯುವಕರು ನಡುವಯಸ್ಕರು ಸೇರಿ ಸೋಬೇಟೆಗೆ ಹೊರಡುತ್ತಾರೆ. ನೂರು ಅಡಿ ಉದ್ದದ ಬಲೆ, ಈಟಿ ಯೊಂದಿಗೆ ಇಪ್ಪತ್ತು ಮೂವತ್ತು ಜನರ ತಂಡ ಊರಿನಿಂದ ದೂರದ ಕಾಡಿನ ತಪ್ಪಲಿಗೆ ತೆರಳುತ್ತದೆ. ಗದ್ದೆ ಬದುವಿನ ಮೇಲ್ಬಾಗದಲ್ಲಿ ಕಾಡು ಪ್ರಾಣಿಗಳು ಇಳಿಯುವ ಜಾಗದಲ್ಲಿ ಮರದ ಗೂಟ ನೆಟ್ಟು ಅದಕ್ಕೆ ಬಲೆಯನ್ನು ಕಟ್ಟಲಾಗುತ್ತದೆ. ಅಲ್ಲಿ ಮೂರ್ನಾಲ್ಕು ಜನ ಈಟಿಯನ್ನು ಹಿಡಿದುಕೊಂಡು ಕಾವಲುಕಾಯುತ್ತಾ ನಿಲ್ಲುತ್ತಾರೆ. ಈಗ ಅರ್ದ ಕೆಲಸ ಮುಗಿದಂತೆ. ಇನ್ನುಳಿದ ತಾಕತ್ತಿನ ಕೆಲಸ ಯುವಕರದ್ದು. ಬಲೆ ಇರುವ ಜಾಗದ ಮತ್ತೊಂದು ಕಡೆಯಿಂದ ಮಿಕ್ಕುಳಿದ ಜನರ ತಂಡ ಕಾಡನ್ನು ಪ್ರವೇಶಿಸುತ್ತದೆ. ಕಾಡಿನೊಳಗಿನಿಂದ ದೊಡ್ಡದಾಗಿ "ಹುಯ್...ಹುಯ್" ಎಂದು ಕೂಗುತ್ತಾ ಒಂದುಕಡೆಯಿಂದ ಕಾಡನ್ನು ಸೋಸುತ್ತಾ ಬಲೆಯಿರುವೆಡೆ ಬರುತ್ತಾರೆ. ಕಾಡಿನ ಗಾತ್ರಕ್ಕನುಗುಣವಾಗಿ ಬೇಟೆಯ ಸಮಯ ತಗಲುತ್ತದೆ. ಒಮ್ಮೊಮ್ಮೆ ೧೦ ತಾಸುಗಳನ್ನು ತೆಗೆದುಕೊಳ್ಳುವುದೂ ಉಂಟು. ಹಾಗೆ ಕಾಡನ್ನು ಸೋಸುತ್ತಾ ಬಲೆಯ ಕಡೆ ಸಾಗುವಾಗ ಕಾಡಿನಲ್ಲಿರುವ ಕಾಡುಹಂದಿ, ಕಾಡುಕುರಿ, ಬರ್ಕ ಮುಂತಾದ ಪ್ರಾಣಿಗಳನ್ನು ಬೆದರಿಸುತ್ತಾರೆ. ಅವು ಬಲೆಯತ್ತ ಹೋಗಿ ಅಲ್ಲಿಂದ ಸಿಕ್ಕಿಬಿದ್ದ ತಕ್ಷಣ ಅಲ್ಲಿದ್ದವರು ಈಟಿಯಿಂದ ಇರಿದು ಪ್ರಾಣಿಯನ್ನು ಕೊಲ್ಲುತ್ತಾರೆ. ಅಲ್ಲಿಗೆ ಸೋಬೇಟೆಯ ಕಾರ್ಯಾಚರಣೆ ಮುಗಿದಂತೆ.ಮುಂದಿನದು ಸೋಬೇಟೆಯ ವಿಜಯೋತ್ಸವ ಎಂದರೆ ಕೊಂದಪಾಪ ತಿಂದು ಪರಿಹಾರ. ಅಕಸ್ಮಾತ್ ಬೇಟೆಯ ಸಮಯದಲ್ಲಿ ಅಜಾಗರೂಕತೆಯಿಂದ ಪ್ರಾಣಿಯನ್ನು ತಪ್ಪಿಸಿಕೊಳ್ಳಲು ಬಿಟಲ್ಲಿ ಅದಕ್ಕೆ ಕಾರಣೀಕರ್ತರಾದವರ ಮೇಲೆ ಆರೋಪಗಳೂ ಇರುತ್ತವೆ. ಈ ಆರೋಪದ ಭರಾಟೆ ಒಮ್ಮೊಮ್ಮೆ ಅತಿರೇಕಕೆ ಹೋಗಿ ದೊಡ್ಡಮಟ್ಟದ ಗಲಾಟೆಯಾಗುವುದೂ ಉಂಟು.

ಆದರೆ ಇಂದಿನ ವಾತಾವರಣದಲ್ಲಿ ಹಳ್ಳಿಗಾಡಿನಲ್ಲಿ ಈ ಸೋಬೇಟೆಯ ಸಾಹಸ ಕಡಿಮೆಯಾಗುತ್ತಿವೆ. ಕಾಡು ಕಾಡಿನ ಪ್ರಾಣಿಗಳು ಕಡಿಮೆಯಾಗಿದ್ದು ಒಂದೆಡೆಯಾದರೆ ಹಳ್ಳಿಗಳಲ್ಲಿನ ಯುವಕರ ಪಟ್ಟಣ ವಲಸೆಯಿಂದಾಗಿ ಸೋಬೇಟೆಗಾರರು ಇಲ್ಲವಾಗುತ್ತಿದ್ದಾರೆ. ಆದರೂ ಸಂಪ್ರದಾಯ ಬಿಡಲೊಲ್ಲದ ಸಾಗರ-ಸಿದ್ದಾಪುರ-ಸೊರಬ ತಾಲ್ಲೂಕಿನ ರೈತರು ಪ್ರಾಣಿಗಳು ಸಿಗಲಿ ಬಿಡಲಿ "ಸೋಬೇಟೆ" ಯ ಆಚರಣೆಯನ್ನಂತೂ ಪ್ರತೀವರ್ಷ ಮಾಡುತ್ತಾರೆ. ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ ಎನ್ನುವ ಅಭಿಪ್ರಾಯ ಕೆಲವರದ್ದು ಇದೆ.
ಕಾಡು ಪ್ರಾಣಿಗಳಿಂದ ಫಸಲು ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು ಪರೋಕ್ಷ ಉದ್ದೇಶ ಮಾಂಸದ್ದಾಗಿದೆ. ಸೋಬೇಟೆ ಯಶಸ್ವೀಯಾಗಬೇಕೆಂದರೆ ಕಾಡು ಕೂಡ ಹೇರಳವಾಗಿರಬೇಕಾಗಿದೆ. ಕಾಡಿದ್ದರೆ ನಾಡು ಎಂಬುದು ನಾಣ್ಣುಡಿಗೆ ಸೀಮಿತವಾಗಿರದೆ ಅನುಷ್ಠಾನಕ್ಕೆ ಪೂರ್ಣಪ್ರಮಾಣದಲ್ಲಿ ಬಂದಲ್ಲಿ ಸೋಬೇಟೇಯಂತಹ ಸಾಹಸ ಉಳಿಯುತ್ತದೆ

Tuesday, October 27, 2009

ಜೇನು ಹುಳುಗಳ ಶತ್ರುಬೇಟೆ


ಜೇನುನೊಣಗಳದ್ದು ಒಂದು ಅದ್ಬುತ ಪ್ರಪಂಚ. ಮನುಷ್ಯನ ಜೀವನಕ್ಕೆ ಹೋಲುವ ಹಲವಾರು ಸಂಗತಿಗಳನ್ನು ಅವುಗಳಿಗೆ ಪ್ರಕೃತಿ ನೀಡಿದೆ. ಯಂತ್ರಗಳ ಬಳಕೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಜೇನಿನ ಪ್ರಪಂಚದಲ್ಲಿ ಹಾಸುಹೊಕ್ಕಾಗಿವೆ. ಅಂತಹ ಒಂದು ಪ್ರಕರಣ ಶತ್ರುಬೇಟೆ. ತನ್ನ ಗೂಡಿನ ಹುಳುಗಳನ್ನು ರಕ್ಷಿಸಿಕೊಳ್ಳಲು ಆಕ್ರಮಣ ಮಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುವ ಜೇನಿನ ವಿಧಾನ ಮೈನವಿರೇಳಿಸುತ್ತದೆ. ಅಂತಹ ಅಪರೂಪದ ಒಂದು ಯುದ್ಧ ನನಗೆ ಕಾಣಿಸಿದ್ದು ಅಚಾನಕ್ಕಾಗಿ ಅದನ್ನು ನಿಮ್ಮಮುಂದೆ ತೆರೆದಿಡುತ್ತಿದ್ದೇನೆ.
ಜೇನಿನ ಶತ್ರುಗಳಲ್ಲಿ ಕಣಜದ ಹುಳು ಪ್ರಮುಖವಾದದ್ದು. ಬಂಡಾರು ಬಡ್ಚಿಗೆ ಎಂಬ ಮಲೆನಾಡು ಗ್ರಾಮ್ಯ ಭಾಷೆಯಲ್ಲಿ ಕರೆಯಿಸಿಕೊಳ್ಳುವ ಕಣಜ ಮಾಂಸಾಹಾರಿ ಕೀಟ. ಗಾತ್ರದಲ್ಲಿ ತುಡುವೆ ಜೇನು ಹುಳುಗಳಿಗಿಂತ ಸುಮಾರು ಹತ್ತು ಪಟ್ಟು ದೊಡ್ಡದಾಗಿರುವ ಅರಿಶಿನ ಬಣ್ಣದ ಮೇಲ್ಮೈ ಹೊಂದಿರುವ ಕಣಜ ದಿನವೊಂದಕ್ಕೆ ಹತ್ತಿಪ್ಪತ್ತು ಜೇನುನೊಣಗಳನ್ನು ಬೇಟೆಯಾಡಿಬಿಡಬಲ್ಲದು. ಜೇನುಗೂಡಿನ ಬಳಿ ಜೊರ್ರನೆ ಹಾರಾಡುತ್ತ ಪಕ್ಕನೆ ಧಾಳಿ ಮಾಡಿ ಆಹಾರ ತರಲು ಹೊರ ಹೊರಡುವ ಜೇನುಹುಳುಗಳನ್ನು ಕಚ್ಚಿಕೊಂಡು ತನ್ನ ಗೂಡಿನಲ್ಲಿನ ಮರಿಗಳಿಗೆ ಆಹಾರವಾಗಿ ನೀಡುತ್ತದೆ. ಗಾತ್ರದಲ್ಲಿ ದೊಡ್ಡದಾಗಿರುವ ಶತ್ರುವನ್ನು ಮಣಿಸಲು ಜೇನು ಹುಳುಗಳಿಗೆ ಬಹಳ ಕಷ್ಟಕರ ಕೆಲಸ. ಆದರೂ ಅಪರೂಪಕ್ಕೊಮ್ಮೆ ಯುದ್ಧ ಘೋಷಿಸಿ ಗೆದ್ದುಬಿಡುತ್ತವೆ. ಇದು ಅಂತಹ ಒಂದು ಪ್ರಕರಣ.
ಮಳೆಗಾಲ ಹಾಗೂ ಮಳೆಗಾಲದ ನಂತರದ ಒಂದೆರಡು ತಿಂಗಳುಗಳವೆರೆಗೆ ಜೇನುಪೆಟ್ಟಿಗೆಗೆ ಕಣಜದ ಕಾಟ ಅತಿ ಹೆಚ್ಚು. ದಿನಾಲು ಬೆಳಿಗ್ಗೆ ಜೇನುಪೆಟ್ಟಿಗೆ ಇಟ್ಟುಕೊಂಡವರಿಗೆ ಕಣಜ ಓಡಿಸುವುದು ಒಂದು ಕೆಲಸ. ಅದೇ ರೀತಿ ಕಣಜವೇನಾದರೂ ಬಂದಿರಬಹುದಾ ಎಂದು ಪೆಟ್ಟಿಗೆಯ ಬಳಿ ನಿಂತಿದ್ದೆ. ನಾನು ನಿಂತ ಕೆಲಕ್ಷಣಗಳಲ್ಲಿ ಜೊರ್ರನೆ ಸದ್ದು ಮಾಡುತ್ತಾ ಕಣಜವೊಂದು ಹಾರಿ ಬಂತು. ಅದಕ್ಕೆ ನನ್ನ ಇರುವು ಅರಿವಾಯಿತಿರಬೇಕು ಮತ್ತೆ ತಟ್ಟನೆ ಮಾಯವಾಯಿತು. ಅಷ್ಟರಲ್ಲಿ ನನಗೆ ಜೇನುಗೂಡಿನ ಬಳಿ ಹಾರಾಡುವ ಕಣಜದ ಫೋಟೋ ತೆಗೆಯುವ ಆಲೋಚನೆ ಬಂದು ಕ್ಯಾಮೆರಾ ತರಲು ಒಳಗೆ ಹೋದೆ. ಮತ್ತೆ ವಾಪಾಸು ಬರುವಷ್ಟರಲ್ಲಿ ಯಥಾಪ್ರಕಾರ ಕಣಜ ಜೇನುಪೆಟ್ಟಿಗೆಯನ್ನು ಸುತ್ತುವರೆಯುತಿತ್ತು. ಹಾಗೆಯೇ ಒಂದೆರಡು ಫೋಟೋ ಕ್ಲಿಕ್ಕಿಸಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ನಾನು ಶಟರ್ ಬಟನ್ ಒತ್ತುವುದಕ್ಕೂ ಕಣಜ ಬೆರೆಡೆ ಹಾರಿಬಿಡುತ್ತಿತು. ಎಲ್ಲಾದರೂ ಕುಳಿತುಕೊಂಡಾಗ ಫೋಟೋ ತೆಗೆದರಾಯಿತೆಂದು ಸುಮ್ಮನೆ ಅಲ್ಲಿಯೇ ನಿಂತೆ. ಜೇನುಪೆಟ್ಟಿಗೆಯ ಸುತ್ತ ಕಣಜದ ಹಾರಾಟದ ಸುಳಿವು ಜೇನುಪೆಟ್ಟಿಗೆಯೋಳಗೆ ತಲುಪಿತ್ತಿರಬೇಕು. ಬಾಗಿಲ ಬಳಿ ಮಿಲಿಟರಿ ಜೇನುಹುಳುಗಳ ರಭಸ ಜೋರಾಗತೊಡಗಿತು. ಅಂತಹ ಅವಕಾಶವನ್ನು ಕಣಜ ಸದುಪಯೋಗಪಡಿಸಿಕೊಳ್ಳುತ್ತದೆ. ಹಾಗೆ ವ್ಯಗ್ರವಾಗಿ ಜೇನುಗೂಡಿನ ಬಾಗಿಲಬಳಿ ಕುಳಿತುಕೊಳ್ಳುವ ಜೇನುಗಳೇ ಕಣಜದ ಬಲಿ. ಆದರೆ ಈ ಕ್ಷಣ ಮಾತ್ರಾ ಬೇರೆಯೇ ಆಗಿತ್ತು.
ನನ್ನ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳುತ್ತಿರುವ ಕಣಜ ರೊಯ್ಯನೆ ಹಾರಿ ಬಂದು ಜೇನುಪೆಟ್ಟಿಗೆಯ ಬಾಗಿಲಬಳಿ ಹಾರಿ ಬಂದು ಕುಳಿತುಕೊಂಡಿತು. ಸಾಮಾನ್ಯವಾಗಿ ಕಣಜ ಹಾರಿಬಂದು ಜೇನುಗೂಡಿನ ಬಾಗಿಲಬಳಿ ಕುಳಿತ ಮರುಕ್ಷಣ ಒಂದು ಜೇನುನೊಣ ಬಲಿಯಾಯಿತೆಂದೇ ಅರ್ಥ. ಆದರೆ ಇಲ್ಲಿ ಹಾಗಾಗಲಿಲ್ಲ. ಕುಳಿತ ಕಣಜದ ಫೋಟೋ ತೆಗೆಯಲು ಬಟನ್ ಒತ್ತಿದೆ, ನನ್ನ ದುರಾದೃಷ್ಟ ಕ್ಯಾಮೆರಾದ ಬ್ಯಾಟರಿ ಟಿನ್ ಎಂದು ಶಬ್ಧಮಾಡಿ ಸ್ತಬ್ದವಾಯಿತು. ತಥ್ ಎನ್ನುತ್ತಾ ಲಗುಬಗೆಯಿಂದ ಒಳಗೆ ಹೋಗಿ ಬ್ಯಾಟರಿ ಬದಲಾಯಿಸಿಕೊಂಡು ಬಂದೆ. ನಾನು ವಾಪಾಸು ಜೇನುಗೂಡಿನ ಬಳಿ ಬರುವುದಕ್ಕೂ ಜೇನುನೊಣಗಳು ಕಣಜವನ್ನು ಆಕ್ರಮಿಸಿಕೊಳ್ಳುವುದಕ್ಕೂ ಸರಿಯಾಯಿತು. ಪ್ರತೀ ಬಾರಿಯೂ ವಿಜಯೋತ್ಸಾಹದಿಂದ ಬಲಿ ತೆಗೆದುಕೊಂಡು ಹೋಗುತ್ತಿದ್ದ ಕಣಜಕ್ಕೆ ಇದು ಅನಿರೀಕ್ಷಿತ ಆಘಾತ. ಕ್ಷಣವೊಂದರಲ್ಲಿ ಮೂವತ್ತು ನಲವತ್ತು ಜೇನು ನೊಣಗಳು ಒಟ್ಟಾಗಿ ಕಣಜವನ್ನು ಮುತ್ತಿಕೊಂಡವು. ಕಣಜಕ್ಕೆ ಮಿಸುಕಾಡಲೂ ಆಗದಂತೆ ಅದರ ಸುತ್ತ ಉಂಡೆಯಾಕಾರದಲ್ಲಿ ಸೆಕೆಂಡಿನ ಅಂತರದಲ್ಲಿ ನೂರಾರು ಜೇನು ಮುತ್ತಿದವು. ಹೀಗೆ ಮುತ್ತಿದ ಜೇನು ನೊಣಗಳು ಕಣಜವನ್ನು ಚುಚ್ಚುವುದಿಲ್ಲ. ಜೇನಿಗಿಂತ ಹತ್ತು ಪಟ್ಟು ಶಕ್ತಿಯುತವಾದ ಕಣಜವನ್ನು ಜೇನುಗಳು ಉಪಾಯದಿಂದ ಕೊಲ್ಲುತ್ತವೆ. ಹೀಗೆ ಒಮ್ಮಿಂದೊಮ್ಮೆಲೆ ನೂರಾರು ನೊಣಗಳು ಮುತ್ತುವುದರಿಂದ ಒಳಗಡೆ ತಾಪಮಾನ ಹೆಚ್ಚುವುದರ ಜತೆ ಕಣಜಕ್ಕೆ ಉಸಿರಾಡಲೂ ಆಗದ ಸ್ಥಿತಿ ತಲುಪಿ ಸಾವನ್ನಪ್ಪುತ್ತದೆ.
ಸುಮಾರು ಹತ್ತು ನಿಮಿಷಗಳ ಕಾಲ ಕಣಜವನ್ನು ಮುತ್ತಿದ ಜೇನುನೊಣಗಳು ಅದರ ಸಾವು ಖಚಿತವಾದನಂತರ ಒಂದೊಂದಾಗಿ ಗೂಡಿನೊಳಗಡೆ ಸೇರಿಕೊಂಡವು. ಕಣಜದ ಸಾವಿನ ಅಪರೂಪದ ಕ್ಷಣಗಳನ್ನು ಜೇನಿನ ಮಿಲಿಟರಿ ಪಡೆಯ ವಿಜಯೋತ್ಸಾಹವನ್ನು ಕ್ಯಾಮೆರಾದಲ್ಲಿ ದಾಖಲಿಸಿಕೊಂಡು ನಾನು ಕಂಪ್ಯೂಟರ್ನತ್ತ ಸಾಗಿದೆ.

Monday, October 26, 2009

ಕೇಸರಿಯಿ೦ದ ಸುಪರ್ ಮೇಲ್

ನನ್ನ ಮನಮುಟ್ಟಿದ ಸಂದೇಶ
ಹೊರಗಿನಿಂದ ಬಂದವರು ಕನ್ನಡ ಕಲಿತರೆ ಅವರಿಗೇ ಲಾಭ. ಅದಲ್ಲದೆ, ಈಗಲೂ ನಮ್ಮ ಆಂಗ್ಲ ಮಾಧ್ಯಮದ ಕೆಲವು ಮಕ್ಕಳು (ಈಗ ಕೆಲವರು ದೊಡ್ಡವರು ) ಕನ್ನಡ ಮಾತನಾಡಲು ಹಿಂಜರಿಕೆ ತೋರುತ್ತಾ ಇದ್ದಾರೆ. ನಾನು ಜಯನಗರದ ಒಂದು ಅಂಗಡಿಯಲ್ಲಿ ಒಂದು ಸುಂದರವಾದ ಫಲಕ ನೋಡಿದೆ.
Dear Customer,If you have spent more than six months in Karnataka, please try to communicate with us in Kannada. Please do not worry about grammar. We shall understand what you mean and we shall assist you to converse in Kannada while you shop with us. namaskaara!
ಈ ಪಲಕವು ನನಗೆ ಇಡೀ ಬೆಂಗಳೂರಿನಲ್ಲೇ ನನಗೆ ಅತೀ ಸುಂದರವಾದ ಫಲಕ ಅನ್ನಿಸಿತು.ವಂದನೆಗಳು.
ಕೇಸರಿ
Pejathaya S M

Friday, October 23, 2009

ನಾಯಿಯ ದ್ವೇಷ ೧೨ ವರುಷ .....!


ನಮ್ಮ ಮನೆಯ ಬೆಕ್ಕು ನಾಯಿ ಸಿಕ್ಕಾಪಟ್ಟೆ ದೋಸ್ತ್. ಯಾವಾಗಲೂ ಆಟ ಆಡುತ್ತಲೇ ಇರುತ್ತವೆ. ಏನೀ ವೈಚಿತ್ರ್ಯ, ಪರಮ ದ್ವೇಷಿಗಳಾಗಿದ್ದ ಅವು ಹೀಗೇಕೆ ಆಪ್ತಮಿತ್ರರಾದವು ಅಂತ ಬಹಳ ಸಾರಿ ನಾನು ಯೋಚಿಸಿದ್ದಿದೆ. ಆಮೇಲೆ ಟಿವಿ ನೈನ್ ಹಾಗೂ ತರಂಗ ನೋಡಿದಮೇಲೆ ತಿಳಿಯಿತು...! ೨೦೧೨ ಇಸವಿಯಲ್ಲಿ ಪ್ರಳಯ ಆಗುತ್ತಾದ್ದರಿಂದ ಅವು ದ್ವೇಷವನ್ನು ಮರೆತು ಒಂದಾಗಿವೆ. ಇಲ್ಲದಿದಲ್ಲಿ ಹೀಗೆ ಬೆಕ್ಕು ನಾಯಿ ಒಂದಾಗಲು ಸಾಧ್ಯವೇ?. ಇಲ್ಲ .
ನಿಮಗೆ ಟಿವಿ೯ ರವರು ಸಿಕ್ಕಿದರೆ ಅವರಿಗೆ ಹೇಳಿಬಿಡಿ. ಹೀಗೆ ಒಂದು ಅರ್ದ ಘಂಟೆ ಆಟ ಆಡಿದ್ದನ್ನು ಶೂಟಿಂಗ್ ಮಾಡಿ "ನಾಯಿಯ ದ್ವೇಷ ೧೨ ವರುಷ ದ ತನಕ " ಅಂತ ಒಂದು ಅರ್ದ ಗಂಟೆ ಕಾರ್ಯಕ್ರಮ ಮಾಡಬಹುದು.
ಸಿಕ್ಕದಿದ್ದರೆ ಬಿಡಿ ಹೇಗೂ ಆಗುವುದು ಆಗುತ್ತೆ ಹೋಗುವುದು ಹೋಗುತ್ತೆ.

Thursday, October 22, 2009

ಹೀಡತ್ತರಿಗಿಣ ತಾಗಿಣ ತಾ....


ಅಂತ ಹೇಳಿದರೆಂದರೆ ಕೋಲಾಟ ಮುಗಿಯಿತು ಅಂತ ಅರ್ಥ. ದೀಪಾವಳಿಯ ನಂತರ ನಾಲ್ಕುದಿನಗಳ ಕಾಲ ನಮ್ಮೂರ ಹುಡುಗರ ತಂಡ ಎಲ್ಲರ ಮನೆಯಂಗಳಕೆ ಹೋಗಿ ಕೋಲಾಟದ ಮನರಂಜನೆಯನ್ನು ನೀಡುತ್ತದೆ. "ನಗರಾ ಪಟ್ಟಣದಲ್ಲಿ ನಖನೆಂಬ ಗೊಲ್ಲ.....ಕುರಿಕಾಯಕೋಗಿ ಕುರಿ ಕದನಲ್ಲ" , " ನಮ್ಮೂರ ಗಣಪತಿ ಮುಂದೇನು ತಿರುಪತಿ" ಎಂಬಂತಹ ಸ್ವರಚಿತ ಹಾಡನ್ನು ಹಾಡುತ್ತಾ ಟಕ ಟಕ ಕೋಲು ಸದ್ದು ಮಾಡುತ್ತಾ ಸುತ್ತ ತಿರುಗುತ್ತಾ ಕೋಲಾಟ ಒಳ್ಳೆಯ ಮನರಂಜನೆ. ರೂಪಾಯಿ ಕಾಯಿನ್ ನೆಲದ ಮೇಲೆ ಹಾಕಿದರೆ ಕೋಲಾಡುತ್ತಲೇ ಬಗ್ಗಿ ಹಣೆಯಿಂದ ಕಾಯಿನ್ ಹೆಕ್ಕುವುದು, ಕಾಲಿನ ಬೆರಳಿನಲ್ಲಿ ಕಾಯಿನ್ ಆರಿಸಿಕೊಳ್ಳವುದು ನೋಡುವುದೇ ಮಜ. ಈ ಕಾಯಿನ್ ಹೆಕ್ಕುವ ಭರಾಟೆಯಲ್ಲಿ ಕೋಲಾಟದ ಕೋಲು ವ್ಯತ್ಯಯ ಆಗುವಂತಿಲ್ಲ. ಹಾಗೇನಾದರೂ ಆದರೆ ಮತ್ತೊಂದು ಕೋಲಾಟ ಉಚಿತ.
ಹೋಳಿಗೆ ಕಾಯಿ ಒಂದಿಷ್ಟು ಹಣ ಸಂಭಾವನೆ ಲೆಕ್ಕದಲ್ಲಿ ಸಂದಾಯ ಮಾಡಿದರೆ ಪುಲ್ ಕುಷ್ ಹುಡುಗರು. ಹೀಗೊಂದು ಹಬ್ಬದ ಇಲಾಡಿಯ ಕೋಲಾಟದ ಪದ್ದತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವಕಾಶ ಸಿಕ್ಕಾಗ ನೀವೂ ನೋಡಿ
ಈಗ ಫೊಟೋ ನೋಡಿ ಬಾಯ್ ಬಾಯ್

Saturday, October 17, 2009

ದೀಪದಿಂದ ದೀಪ ಹಚ್ಚೇ ದೀಪಾವಳಿ ಎಂಬ ದೊಡ್ಡ ಹಬ್ಬ.








ಬೆಳಕಿನ ಹಬ್ಬ ದೀಪಾವಳಿ ನಮ್ಮ ಮನೆಯಲ್ಲಿ ಬೂರೆ ನೀರು ತುಂಬುವುದರೊಂದಿಗೆ ಆರಂಭವಾಗುತ್ತದೆ. ಬಾವಿಯಿಂದ ಒಂದು ಬಿಂದಿಗೆ ನೀರನ್ನು ಎತ್ತುವ ಅಮ್ಮ ಘನಗಂಭೀರ ಮುಖಾರವಿಂದ ದೊಂದಿಗೆ ಶ್ರದ್ಧಾಭಕ್ತಿಯೊಂದಿಗೆ ಪೂಜೆ ಮಾಡುತ್ತಾಳೆ. ಆರತಿ ಪ್ರಸಾದದ ನಂತರ ಬಿಂದಿಗೆ ನೀರು ಹೊತ್ತು ಮನೆಯನ್ನು ಒಂದು ಸುತ್ತು ಹಾಕಿ ಜಗುಲಿಯ ಬಾಗಿಲ ಮೂಲಕ ದೇವರ ಮನೆಗೆ ಬರುತ್ತದೆ. ಅಲ್ಲಿ ಅಪ್ಪಯ್ಯನ "ರುದ್ರ"....!( ಹೇಳುತ್ತಾ) ಪೂಜೆ ನಡೆಯುತ್ತಿರುತ್ತದೆ. ಅಲ್ಲಿಗೆ ಅಮ್ಮನ ಮೂಲಕ ಬಂದ ಗಂಗೆ ದೇವರ ಪೀಠವನ್ನಲಂಕರಿಸುತ್ತದೆ. ಸಂಜೆ ಬೆಳ್ಳಿ ಚೊಂಬಿನ ಬಲಿಯೇಂದ್ರನಿಗೆ ಅದೇ ನೀರು. ನಾಳೆ ರಾತ್ರಿ ಹಬ್ಬಕ್ಕೆ ಕಕ್ಕಡದೊಂದಿಗೆ ವಿದಾಯ.
ಇದು ಶಾರ್ಟಾಗಿ ದೀಪದಿಂದ ದೀಪ ಹಚ್ಚೇ ದೀಪಾವಳಿ ಎಂಬ ದೊಡ್ಡ ಹಬ್ಬ. ಹೋಳಿಗೆ ಮುಂತಾದ್ದೆಲ್ಲ ಹೇಗೂ ಹೇಳುವುದೇ ಬೇಡ. ಬನ್ನಿ ಹಬ್ಬಕ್ಕೆ ಮರೆಯದೆ. ಇದೇ ಕರೆಯ.

ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.


ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ದೀಪಾವಳಿ ಎಲ್ಲರ ಬಾಳಿನಲ್ಲಿ ಶುಭ ತರಲಿ ಎಂದು ಹಾರೈಸುವ
- ಅಮ್ಮ -ಅಪ್ಪಯ್ಯ- ಆರ್.ಶರ್ಮಾ ತಲವಾಟ-ಕವಿತಾ ಶರ್ಮಾ-ಸುಮಂತ ಶರ್ಮಾ

Tuesday, October 13, 2009

ನಮ್ಮ ಪೆಜತ್ತಾಯರ ಕಾಗದದ ದೋಣಿ ಮತ್ತು ಬೇಳೂರು ಸುದರ್ಶನರ ಮಾತು

ಬದುಕನ್ನು ಬಂದ ಹಾಗೆ ಸ್ವೀಕರಿಸುವುದು, ಸ್ವೀಕರಿಸಿದ್ದನ್ನು ಸಿಂಗರಿಸುವುದು, ನಾವೂ ಆನಂದಿಸುವುದು, ಇನ್ನೊಬ್ಬರಿಗೂ ಆನಂದ ಕೊಡಲು ಮನಸಾರೆ ಯತ್ನಿಸುವುದು, ಸುತ್ತಮುತ್ತ ಇರುವ ಸಹೃದಯ ಜೀವಗಳನ್ನು ಗೌರವಿಸುವುದು…. ಒಪ್ಪಿಕೊಂಡಿರುವ ಸತ್ಯ ಬದಲಾದಾಗ ಬದಲಾವಣೆಯನ್ನೂ ಪ್ರಾಂಜಲವಾಗಿ ಒಪ್ಪಿಕೊಳ್ಳುವುದು – ಇವೆಲ್ಲ ಮನುಕುಲವೆಂಬ ಬಳಗದ ಎಲ್ಲ ಸದಸ್ಯರಲ್ಲಿ ಇರಬೇಕಾದ ಗುಣಗಳು. ಈ ಗುಣಗಳು ಇರಬೇಕೆಂದು ಹೇಳುವುದು ಸುಲಭ, ಸ್ವತಃ ಆಚರಿಸುವುದು ಕಷ್ಟ!

pejathaya-mitramaadhyama

ಮೂರು ವಾರಗಳ ಹಿಂದೆ ಮಿಂಚಂಚೆ ಮೂಲಕ, ಆಮೇಲೆ ದೂರವಾಣಿ ಮೂಲಕ ಪರಿಚಯವಾದ ಎಸ್ ಎಂ ಪೆಜತ್ತಾಯ ಇಂಥ ಮಾತುಗಳನ್ನು ಚಾಚೂ ತಪ್ಪದೆ ತಮ್ಮ ಜೀವನದ ಉದ್ದಕ್ಕೂ ಆಚರಿಸುತ್ತಿರುವ ಕೆಲವೇ ಚೇತನಗಳಲ್ಲಿ ಒಬ್ಬರು ಎಂದು ನನಗೆ ಅನ್ನಿಸಿದ್ದು ಅವರು ಪ್ರೀತಿಯಿಂದ ಕಳಿಸಿದ `ಕಾಗದದ ದೋಣಿ’ ಪುಸ್ತಕವನ್ನು ಓದಿದಾಗ.

ಅನನ್ಯ ಜೀವನಾನುಭವದ ನೆನಪಿನ ಬುತ್ತಿ ಎಂಬ ವಿಶೇಷಣಗಳನ್ನು ಹೊತ್ತು ತಂದ ಮುಖಪುಟವನ್ನು ಬದಿಗೆ ಸರಿಸಿಂ ಓದಿದರೂನೂ ಅವರ ಜೀವನಪ್ರೀತಿಯನ್ನು ಎಲ್ಲ ಪುಟಗಳಲ್ಲಿ ಕಾಣಬಹುದು. ನಿಜಕ್ಕೂ ಅನನ್ಯ ಜೀವನ ಎಂದು ಒಪ್ಪಿಕೊಳ್ಳಬಹುದು!

ಈ ಪುಸ್ತಕದಲ್ಲಿ ಇರುವುದೆಲ್ಲ ಅವರ ಜೀವನದಲ್ಲಿ ನಡೆದ ಹಲವು ಘಟನೆಗಳು; ಅವರು ಕಂಡ ಹಲವು ವ್ಯಕ್ತಿತ್ವಗಳು. ೨೮೩ ಪುಟಗಳಲ್ಲಿ ಹರಡಿರುವ ಈ ೫೫ ಕಥೆಗಳು ಒಂದಿಲ್ಲೊಂದು ರೀತಿಯಲ್ಲಿ ಕಾಡುವ ಕಥೆಗಳು. ಕೆಲವು ವೈಯಕ್ತಿಕ ಘಟನೆಗಳ ನಿರೂಪಣೆಯಾಗಿದ್ದರೆ, ಕೆಲವು ಅವರು ಕಂಡ ವ್ಯಕ್ತಿತ್ವಗಳ ಪರಿಚಯ, ಯಾವುದಕ್ಕೂ ಅಂಥ ವಿಶೇಷಣಗಳೇನೂ ಇಲ್ಲ. ಮೊದಲು ಆತ್ಮಕಥೆಯಂತೆ ಆರಂಭವಾಗುವ ಈ ಪುಸ್ತಕ ಕೊನೆಗೆ ಬದುಕಿನ ಹಲವು ಅನುಭವಗಳನ್ನು ಕಟ್ಟಿಕೊಡುವ ಸಾಮಾಜಿಕ ದಾಖಲೆಯಾಗಿ ಪರಿವರ್ತಿತವಾಗುತ್ತವೆ. ಪೆಜತ್ತಾಯರು ಬಾಲ್ಯದಲ್ಲಿ ಅನುಭವಿಸುತ್ತಿದ್ದ ಬೇಸಗೆ ರಜಾಕಾಲದ ಅನುಭವದಿಂದ ಆರಂಭವಾಗುವ ಈ ಪುಸ್ತಕ `ನನಗೂ ಹೃದಯದ ಶಸ್ತ್ರಚಿಕಿತ್ಸೆ ಆಯಿತು’ ಎಂಬ ಖಾಸಗಿ ಬ್ಲಾಗ್‌ನೊಂದಿಗೆ ಮುಗಿಯುತ್ತದೆ. ತಮ್ಮ ಮಒದಲ ಲೇಖನದಲ್ಲಿ `ಯಾವ ಊರಿಗೂ ಹೋಗದೆ, ಯಾವ ಸಮ್ಮರ್ ಕ್ಯಾಂಪಿಗೂ ಹೋಗದೆ ಬೇಸಗೆ ರಜಾ ಕಳೆಯುತ್ತಿದ್ದ’ ಪೆಜತ್ತಾಯರು ಬದುಕಿನ ಹಲವು ಮಜಲುಗಳನ್ನು ದಾಟಿದ ಮೇಲೆ `ಪಥ್ಯದ ಆಹಾರ ಸೇವನೆ ಮತ್ತು ಡಾಕ್ಟರುಗಳು ಹೇಳಿದಷ್ಟು ವ್ಯಾಯಾಮಗಳನ್ನು ತಪ್ಪದೇ ಮಾಡುತ್ತಾ, ನಾನು ನನ್ನ ಮುಂದಿನ ಜೀವಿತವನ್ನು ಕಳೆಯುವ ನಿರ್ಧಾರ ಮಾಡಿದ್ದೇನೆ’ ಎಂಬ ಹೇಳಿಕೆಯೊಂದಿಗೆ ಪುಸ್ತಕವನ್ನು ಮುಗಿಸಿದ್ದಾರೆ. ಬದುಕು ಎಷ್ಟೆಲ್ಲ ಕಲಿಸುತ್ತದೆ ಅಲ್ಲವೆ?

ದಕ್ಷಿಣ ಕನ್ನಡದಲ್ಲಿ ಹುಟ್ಟಿ ಚಿಕ್ಕಮಗಳೂರಿನಲ್ಲಿ ಕೃಷಿ ಮಾಡಿ ಈಗ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀನಿವಾಸ ಮಧುಸೂಧನ ಪೆಜತ್ತಾಯರದು ಸ್ನೇಹಪ್ರಿಯ ವ್ಯಕ್ತಿತ್ವ. ಆದ್ದರಿಂದಲೇ ಅವರಿಗೆ ಬಾಲ್ಯದಿಂದಲೂ ಹಲವು ಹಿರಿಯ ಗೆಳೆಯರು ಸಿಕ್ಕಿದ್ದಾರೆ; ಅವರಿಗೆ ಬದುಕಿನ ಪಾಠ ಕಲಿಸಿದ್ದಾರೆ. ಸಾಮಾನ್ಯವಾಗಿ ಈ ಎಲ್ಲ ಪ್ರಬಂಧಗಳಲ್ಲೂ ಅವರು ಅತ್ಯಂತ ಮುಕ್ತ ಮನಸ್ಸಿನಿಂದ ತಾವು ಕಲಿತ ಸಂಗತಿಗಳನ್ನು ಪಟ್ಟಿ ಮಾಡಿ, ಕಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಲ್ಲೂ ಆಧುನಿಕ ಸಾಹಿತ್ಯದ ಕ್ಲೀಷೆಗಳನ್ನು ಬಳಸದೆ, ತಮಗೆ ಬಂದ ಭಾಷೆಯಲ್ಲಿ ಸರಳವಾಗಿ ಕಥೆ ಹೇಳಿದ್ದರಿಂದಲೇ ಪೆಜತ್ತಾಯ ಅದ್ಭುತ ಸಾಹಿತಿಯಾಗಿ ರೂಪುಗೊಂಡಿದ್ದಾರೆ. ಅನುಭವ ಅವರನ್ನು ಮಾಗಿಸಿದೆ. ಉತ್ಪ್ರೇಕ್ಷೆ ಇಲ್ಲದ, ವಿಶೇಷಣಗಳಿಲ್ಲದ, ಈ ಕಥೆಗಳಲ್ಲಿ ಪೆಜತ್ತಾಯರು ಕಂಡ ದೃಶ್ಯಗಳಿವೆ. ಅನುಭವಗಳನ್ನು ಇಷ್ಟು ಸರಳವಾಗಿ ಬರೆಯಬಹುದೇ ಎಂಬುದಕ್ಕೆ ಈ ಪುಸ್ತಕ ಒಂದು ಮಾದರಿಯಾಗಿದೆ.

ಈ ಪುಸ್ತಕವನ್ನು ಓದುವಾಗ ನನಗೆ ಫಕ್ಕನೆ ನೆನಪಾಗಿದ್ದು ಬೆಳಗೆರೆ ಕೃಷ್ಣಶಾಸ್ತ್ರಿಯವರ `ಮರೆಯಲಾದೀತೇ?’ ಪುಸ್ತಕ. ಅಲ್ಲೂ ವ್ಯಕ್ತಿಚಿತ್ರಣಗಳಿವೆ. ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ ಅನುಭಾವಿಗಳನ್ನು ಕುರಿತ ಅನುಭವದ ಲೇಖನಗಳಿವೆ. ಇಲ್ಲಿ ಪೆಜತ್ತಾಯರು ಅಲೌಕಿಕವಾದದ್ದೇನನ್ನೂ ಹೇಳುವುದಿಲ್ಲ. ಅವರು ಎಲ್ಲವನ್ನೂ ಹೇಳಿದ ಮೇಲೆ ಈ ಬದುಕು ಎಷ್ಟೆಲ್ಲ ಸಾಧ್ಯತೆಗಳನ್ನು ಒಳಗೊಂಡಿದೆ ಎಂಬ ಭಾವ ಆವರಿಸುತ್ತದೆ.
ಸಾಹಿತ್ಯ ರಚನೆ ಮಾಡಿ ಬದುಕನ್ನು ಕಾಲ್ಪನಿಕ ಘಟನೆಗಳಲ್ಲಿ ವಿವರಿಸುವುದಕ್ಕಿಂತ ಬದುಕನ್ನು ಅನುಭವಿಸಿ ಸತ್ಯ ಘಟನೆಗಳನ್ನೇ ಸರಳ ಭಾಷೆಯಲ್ಲಿ ಬರೆದರೆ ಅದೇ ಬಹುದೊಡ್ಡ ಸಾಹಿತ್ಯಕೃತಿಯಾಗಬಹುದು ಎನ್ನುವುದಕ್ಕೆ ಪೆಜತ್ತಾಯರದು ಹೊಸ ಉದಾಹರಣೆ ಅಷ್ಟೆ.

ಈ ಪುಸ್ತಕ ಬಹುಶಃ ಇತ್ತೀಚೆಗೆ ಬಂದ ಆತ್ಮಕಥನಗಳಲ್ಲೇ ಅತ್ಯಂತ ಸರಳ ನಿರೂಪಣೆಯದು. ನನ್ನ ಅತಿಪ್ರಿಯ ಕನ್ನಡ ಪುಸ್ತಕಗಳಲ್ಲಿ ಇದೂ ಒಂದಾಗಿದೆ. ನೀವೂ ಓದಿ ಎಂದು ಮನಸಾರೆಯಾಗಿ ಶಿಫಾರಸು ಮಾಡುತ್ತಿರುವೆ!

-ಮಿತ್ರಮಾಧ್ಯಮದ ಬೇಳೂರು ಸುದರ್ಶನರಿಂದ


Monday, October 12, 2009

ತಲೆ ಅಂದ್ರೆ ತಲೆ ಕಣ್ರೀ......

http://funzu.com/index.php/crazy-video/fantasy-tale-explains-everything-09102009.html

ವೈದ್ಯರು "ಎರಡು ರೂಪಾಯಿ" ಎಂದು ಹೇಳಿದರು.

ಮುನ್ನಾಭಾಯಿ ಎಂ.ಬಿ.ಬಿ.ಎಸ್ ನೀವು ನೋಡಿದ್ದೀರಿ. ಅದರಲ್ಲಿನ ಹೃದಯಹೀನ ವೈದ್ಯರು ಮಾಡಲಾಗದ್ದನ್ನು ಹೃದಯವಂತ ರೌಡಿ ಮಾಡಿ ಮುಗಿಸುತ್ತಾನೆ. ಎಲ್ಲೆಡೆ ಬೇಕುಬೇಕಂತ ರೋಗಿಗೂ ತನಗೂ ಸಿಕ್ಕಾಪಟ್ಟೆ ಗ್ಯಾಪ್ ಇಟ್ಟುಕೊಂಡು ಸ್ಟೈಲ್ ಹೊಡೆಯುವ ಡಾಕ್ಟರ್ ಗಳ ಬದಲು ಮುನ್ನಾಭಾಯಿಯ ಹೃದಯವಂತಿಕೆಯ ಚಿಂಕಿಯ ಹಾಗೂ ಅವಳಪ್ಪನ ಬುದ್ದಿವಂತಿಕೆಯ ಹೃದಯವಂತ ವೈದ್ಯರೇ ಇದ್ದುಬಿಟ್ಟಿದ್ದರೆ ಏನಾಗುತ್ತಿತ್ತು.? ಎಂಬ ಪ್ರಶ್ನೆ ನಿಮಗೆ ಒಮ್ಮೆಯಾದರೂ ಕಾಡಿರಬಹುದು. ಹಾಗಿರಲು ಸಾಧ್ಯವಿಲ್ಲ ಬಿಡಿ. ಒಮ್ಮೆ ಹಾಗಿದ್ದರೇ ಆಗುವುದು ಎಂದರೆ ಮುನ್ನಾಭಾಯಿ ಸಿನೆಮಾ ಹುಟ್ಟುತ್ತಿರಲಿಲ್ಲ ಹಾಗೂ ಅದಕ್ಕೆ ಅರ್ಥವೂ ಇರುತ್ತಿರಲಿಲ್ಲ ಏನಂತೀರಿ?. ಇರಲಿ ಬಿಟ್ಟಾಕಿ ವೈದ್ಯರ ಕುರಿತು ಬರೆಯಬೇಕು ಎಂದು ಹೊರಟ ನನಗೆ ಇದು ಹೇಗೋ ನೆನಪಾಗಿಬಿಟ್ಟಿತು ಅದನ್ನು ಸುಮ್ಮನೆ ದಾಖಲಿಸಿದ್ದೇನೆ, ಬಿಟ್ಟಾಕಿ ಬಿಟ್ಟಾಕಿ ಬಿಟ್ಟಾಕಿ.
ಈಗ ( ಸಿನೆಮಾದಲ್ಲಿ ಹೇಳುವಂತೆ....!) ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ನನ್ನ ಅಕ್ಕ ಕೊಪ್ಪ ಪೋಸ್ಟ್ ಆಪೀಸ್ ನಲ್ಲಿ ನೌಕರಿಯಲ್ಲಿದ್ದಳು . ನಾನು ಹೈಸ್ಕೂಲ್ ನವರಾತ್ರಿ ರಜಕ್ಕೆ ಅಲ್ಲಿಗೆ ಹೋಗಿ ಹದಿನೈದು ದಿನ ಜಾಂಡಾ ಹೊಡೆಯುತ್ತಿದ್ದೆ. ಅಲ್ಲಿನ ಪೋಸ್ಟ್ ಮಾಸ್ಟರ್ ಮೊಮ್ಮಗನೊಬ್ಬ ನನ್ನ ಹಾಗೆಯೇ ಸ್ಕೂಲ್ ರಜಕ್ಕೆ ಬರುತ್ತಲಿದ್ದ. ನಾನೂ ಅವನು ಸೇರಿ ಅದೂ ಇದೂ ಸಣ್ಣಪುಟ್ಟ ಆಟಗಳನ್ನು ಆಡುತಿದ್ದೆವು. ಹೀಗೆ ಅವನ ಬಳಿ ಸ್ಕೋಪ್ ತೆಗೆದುಕೊಳ್ಳಲು ಹಳ್ಳಿಯ ಹಲವಾರು ವಿಷಯಗಳನ್ನು ನನ್ನದೇ ಆದ ಗತ್ತಿನಲ್ಲಿ ವಿವರಿಸುತ್ತಿದ್ದೆ. ಮಜ ಎಂದರೆ ಅವನಿಗೆ ಕನ್ನಡ ಬಾರದು ಹಿಂದಿ ಹುಡುಗ ಆತ. ನನಗೆ ಹಿಂದಿ ಬಾರದು ಕನ್ನಡದ ಹುಡುಗ ನಾನು. ಆದರೂ ಇಬರ ನಡುವೆ ಅದು ಹೇಗೋ ಸಾಮರಸ್ಯ ಬೆಳೆದಿತ್ತು. ಮತ್ತು ಸಂಭಾಷಣೆ ನಡೆಯುತ್ತಿತ್ತು ಅರ್ಥವೂ ಆಗುತ್ತಿತ್ತು. ಹೀಗೆ ಅದೂ ಇದೂ ಸ್ಕೋಪಿನ ವಿಚಾರಗಳನ್ನು ಅರುಹುತ್ತಿರಬೇಕಾದರೆ ಕಳ್ಳಿಗಿಡ(ಪೋಸ್ಟ್ ಆಪೀಸ್ ಆವರಣದಲ್ಲಿತ್ತು ಅಂತ ಹೊಸತಾಗಿ ಹೇಳಬೇಕಾಗಿಲ್ಲ ತಾನೆ?) ಕಾಣಿಸಿತು. ಹಿಂದಿ ಹುಡುಗನ ಬಳಿ ಸಿಕ್ಕಾಪಟ್ಟೆ ಸ್ಕೋಪ್ ತೆಗೆದುಕೊಳ್ಳಲು ಹೊಸ ವಿಷಯ ನನಗೆ ಪಕಪಕನೆ ತಲೆಯಲ್ಲಿ ಮಿಂಚಿತು. ತಕ್ಷಣ ಕಳ್ಳಿ ಎಲೆಯೊಂದನ್ನು ಮುರಿದು ಉಪ್ ಅಂತ ಊಬಿ ಪುರುಪುರು ಗುಳ್ಳೆಗಳನ್ನು ಮಾಡಿ ಹಿಂದಿಹುಡುಗನಿಗೆ ತೋರಿಸಿದೆ. ಆತನ ಕಣ್ಣುಗಳಲ್ಲಿ ಮಹದಾಶ್ಚರ್ಯ. ಮತ್ತೆ ಮತ್ತೆ ಎಲೆಗಳನ್ನು ಕಿತ್ತು ಊಬಿದೆ, ಗುಳ್ಳೆಗಳ ರಾಶಿಯನ್ನೇ ಸೃಷ್ಟಿಸಿ ಹಿಂದಿಯವನನ್ನು ಆಶ್ಚರ್ಯಗೊಳಿಸಿದೆ. ಅವನು ವಾವ್ ವಾವ್ ಹೇಳುತ್ತಿದ್ದಂತೆ ನನ್ನ ಏರುವಿಕೆ ಹೆಚ್ಚಾಯಿತು. ಆತ ನಾನೂ ಊಬುತ್ತೇನೆ ಎಂದ " ಇಲ್ಲ ಅದರ ಹಯ ಡೇಂಜರ್ ಕಣ್ಣಿಗೆ ಹೋದರೆ ಕಣ್ಣು ಕುರುಡಾಗುತ್ತದೆ" ಎಂದೆ. ಮತ್ತಷ್ಟು ಎಲೆ ಕಿತ್ತು ಗುಡ್ಡೆ ಹಾಕಿ ಊಬತೊಡಗಿದೆ. ಆತ ಮೆಟ್ಟಿಲುಗಳ ಮೇಲೆ ಕುಳಿತು ಬೆರೆಗುಗಣ್ಣಿನಿಂದ ನೋಡುತ್ತಿದ್ದ. ನನಗೋ ನನ್ನ ಲೆವಲ್ ಹೆಚ್ಚಾಯಿತೆಂಬ ಭ್ರಮೆಯಲ್ಲಿ ಊಬಿಯೇ ಊಬಿದೆ. ಆಗಲೆ ಒಂದು ದೊಡ್ಡಗುಳ್ಳೆ ಪಟ್ ಎಂದು ಊಬುತ್ತಿದ್ದಂತೆ ಒಡೆಯಿತು. ಒಂದು ಹನಿ ಕಳ್ಳಿ ಹಂಯ ಬಲಗಣ್ಣಿಗೆ ಸೇರಿತು. ಉರಿ ಪ್ರಾರಂಭವಾಗಿ ಕಣ್ಣು ಕೆಂಪೇರತೊಡಗಿತು. ಹಿಂದಿ ಹುಡುಗ ಪೋಸ್ಟ್ ಆಪೀಸಿನ ಒಳಗೆ ಓಡಿಹೋಗಿ ಇಷ್ಟು ಹೊತಿನ ತನಕ ಮಜ ಅನುಭವಿಸುತ್ತಿದ್ದವನು ಈಗ ಕಣ್ಣಿಗೆ ಹಂಯ ಬಿದ್ದ ಕತೆ ಹೇಳಿ ಸ್ಕೋಪ್ ತೆಗೆದುಕೊಳ್ಳತೊಡಗಿದ. ಮರುಕ್ಷಣ ಅಕ್ಕನ ದುಗುಡದ ಮುಖದೊಂದಿಗೆ ಸೆಂಟ್ರಲ್ ಗವರ್ನ್ಮೆಂಟ್ ಸ್ಟ್ಪಾಪ್ ನನ್ನ ಸುತ್ತ ನೆರೆಯಿತು. ಆಳಿಗೊಂದು ಕಲ್ಲು ಬೀಳತೊಡಗಿತು. ನಾನು ತೆಪ್ಪಜ್ಜಿ ಮುಖಮಾಡಿಕೊಂಡು ಕಣ್ಣಮೇಲೆ ಕೈಯಿಟ್ಟು ನಿಂತೆ. ಒಂದಿಷ್ಟು ಚರ್ಚೆಯ ನಂತರ ಕಣ್ಣಿನ ವಿಷಯವಾದ್ದರಿಂದ ಡಾ . ಬಳಿ ಕರೆದುಕೊಂಡು ಹೋಗುವಿದೆಂದು ತೀರ್ಮಾನಿಸಿ ಹತ್ತಿರದಲ್ಲಿದ್ದ ಡಾ ಬಳಿ ಕರೆದುಕೊಂಡೂ ಹೋದರು.
ಡಾಕ್ಟರ್ ಬರಿಗಣ್ಣಿನಿಂದ ಒಮ್ಮೆ ನೋಡಿ ನಂತರ ಒಳಗೆ ಮಂಚದಮೇಲೆ ಮಲಗಿಸಿದರು. ಅದೆಂತದದೋ ಹತ್ತಾರು ಉಪಕರಣಗಳಿಂದ ಒಂದಾದ ನಂತರ ಒಂದು ಟೆಸ್ಟ್ ಮಾಡತೊಡಗಿದರು. ಪಕ್ಕದಲ್ಲಿಯೇ ಇದ್ದ ಅಕ್ಕನಿಗೆ ತಮ್ಮನ ಕಣ್ಣಿನ ಚಿಂತೆ ಒಂದೆಡೆ ಸಿಕ್ಕಾಪಟ್ಟೆ ಟೆಸ್ಟ್ ಮಾಡುತ್ತಿರುವ ಡಾಕ್ಟರ್ ಬಿಲ್ ಎಷ್ಟಾಗುತ್ತೋ ಎನ್ನುವುದು ಇನ್ನೊಂದೆಡೆ. ಒಟ್ಟಿನಲ್ಲಿ ಆತಂಕವೋ ಆತಂಕ. ಹೀಗೆ ಒಂದು ಘಂಟೆಗಳ ಕಾಲ ಪರೀಕ್ಷೆ ಮಾಡಿ ಅಂತಿಮವಾಗಿ ಒಂದು ಡ್ರಾಪ್ಸ್ ಕಣ್ಣಿಗೆ ಬಿಟ್ಟು ಏನೂ ಆಗಿಲ್ಲ ಎಂದು ವೈದ್ಯರಬಾಯಿಂದ ಬಾಂದಾಗ ಅರ್ದ ಆತಂಕ ಮಾಯ. ಇನ್ನು ಉಳಿದದ್ದು ಬಿಲ್ ಕಥೆ. ಕನಿಷ್ಟವೆಂದರೂ ಮುನ್ನೂರೋ ನಾನೂರೋ (ಆಗ ಅಕ್ಕನ ಸಂಬಳ ೭೦೦ ರೂ) ಖರ್ಚಿಗೆ ಬಂತು ಎಂದು ವೈದ್ಯ ರ ಮುಂದೆ ಸಣ್ಣ ಮುಖ ಮಾಡಿ ಎಷ್ಟು? ಎಂದಳು.
ವೈದ್ಯರು "ಎರಡು ರೂಪಾಯಿ" ಎಂದು ಸಹಜವಾಗಿ ಹೇಳಿದರು.
ನಮಗೆ ನಂಬಲಾಗದ ಸತ್ಯ . ಅಕ್ಕ ಇಷ್ಟೆಲ್ಲಾ ಕೆಲಸಕ್ಕೆ ಅದು ಅತೀ ಕಡಿಮೆಯಾಯಿತೆಂದು ಇಪ್ಪತ್ತು ರೂಪಾಯಿ ಕೊಟ್ಟು ಹೊರಡಲನುವಾದಳು. ಆದರೆ ವೈದ್ಯರು ನನ್ನ ಕೆಲಸಕ್ಕೆ ನಾನು ಬಿಲ್ ಮಾಡುವುದು ನೀವಲ್ಲ ಎಂದು ಹೇಳಿ ಮಿಕ್ಕ ಹದಿನೆಂಟು ವಾಪಾಸು ಕೊಟ್ಟು ನೆಕ್ಸ್ಟ್ ಎಂದರು.
ಅಕಸ್ಮಾತ್ ಈಗಿನ ಕಾಲದಲ್ಲಿ ಹೀಗಾಗಿದ್ದರೆ..ಕನಿಷ್ಟವೆಂದರೂ....? ಎಂಬ ರಾಗದ ಪ್ರಶ್ನೆ ನಿಮಗೆ ಹುಟ್ಟುತ್ತದೆ ಎಂದು ನನಗೆ ಗೊತ್ತು. ಇಲ್ಲ ಈಗಲೂ ಅಂತಹ ಸಿದ್ಧಾಂತಕ್ಕೆ ಜೋತುಬಿದ್ದ ವೈದ್ಯರು ಇದ್ದಾರೆ. ಡಾ ದೀಪಕ್ ಎಂಬ ಹರೆಯದ ವೈದ್ಯ. ಅವರ ಬಗ್ಗೆ ಮುಂದೆ ಎಂದಾದರೂ ಬರೆಯುತ್ತೇನೆ.

Sunday, October 11, 2009

What happens when desi returns from USA ?

Tries to use Credit Card in road side Hotel.
Drinks and carries Mineral Water and always speaks of Health. (proving to be very health conscious).
Sprays DEO such so that he doesn't need to take bath.
Sneezes and says 'Excuse me'..
Says "Hey" instead of "Hi".
Says "Yogurt" instead of "Curds"..
Says "Cab" instead of "Taxi".
Says "Candy" instead of "Chocolate".
Says "Cookie" instead of "Biscuit"..
Says "Free Way" instead of "Highway".
Says "Got To Go" instead of "Have To Go".
Says "Oh" instead of "Zero", (for 704, says Seven Oh Four Instead of Seven Zero Four)
Doesn't forget to crib about air pollution. Keeps cribbing every time he steps out.
Says all the distances in Miles (Not in KiloMeters), and counts in Millions.(Not in Lakhs)
Tries to figure all the prices in Dollars as far as possible (but deep down the heart multiplies by 43 times).
Tries to see the % of fat on the cover of a milk pocket.
When need to say Z (zed), never says Z (Zed), repeats "Zee" several times, if the other person unable to get, then says X, Y, Zee (but never says Zed).
Writes date as MM/DD/YYYY & on watching traditional DD/MM/YYYY, says "Oh! British Style!!!!"
Makes fun of Indian Standard Time and Indian Road Conditions.
Even after 2 months, complaints about "Jet Lag".

Avoids eating more chili (hot) stuff.
Tries to drink "Diet Coke", instead of Normal Coke.
Tries to complain about any thing in India as if he is experiencing it for the first time..
Pronounces "schedule" as "skejule", and "module" as "Mojule".
Looks suspiciously towards Hotel/Dhaba food.
Few more important stuff:-
From the luggage bag, does not remove the stickers of Airways by which he traveled back to India, even after 4 months of arrival.
Takes the cabin luggage bag to short visits in India, tries to roll the bag on Indian Roads.
And The Ultimate One:-
Tries to begin conversation with "In US ...." or "When I was in US..."

Friday, October 9, 2009

ಏರು ಏರು ಎಂಟಾಣೆ


ಎಂಟಾಣೆ ಎಂದು ನಮ್ಮಲ್ಲಿ ಕರೆಯಿಸಿಕೊಳ್ಳುವ ಈ ಜೀವಿ ಅಪ್ರತಿಮ ಬಕಾಸುರ. ನಿಧಾನವಾಗಿ ಚಲಿಸುವ ಇದು ಹಿತ್ತಲ ಗಿಡಗಳನ್ನು ಹಠಹೊತ್ತು ದಿನಪೂರ್ತಿ ಕಾರ್ಯನಿರ್ವಹಿಸಿ ಭಕ್ಷಿಸಿಬಿಡುತ್ತದೆ. ಹಸಿರು ಬಣ್ಣದ ಇದು ಅರಿಶಿನ ಬಣ್ಣದ ಗಿಡ ತಿಂದರೆ ಅದೇ ಬಣ್ಣಕ್ಕೆ ತಿರುಗುತ್ತದೆ. ಅಕಸ್ಮಾತ್ ಮೈಗೆ ತಗುಲಿಸಿಕೊಂಡಿರೋ ತುರಿಕೆ ಶುರು. ಈಗ ಇದು ಸೂಜಿಮೆಣಸಿನ ಗಿಡಕ್ಕೆ ಗಂಟುಬಿದ್ದಿದೆ.

Tuesday, October 6, 2009

ಹಳೆ ಕಥೆ - ಹೊಸ ಕತೆ

ಹಳೆ ಕಥೆ

ಒಂದನೊಂದು ಊರಲ್ಲಿ ಒಂದು ದೇವಸ್ಥಾನ ಇತ್ತು. ಅಲ್ಲಿ ಸನ್ಯಾಸಿಯೊಬ್ಬರು ಇದ್ದರು. ಅವರು ದೇವರಲ್ಲಿ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ್ದರು. ಒಂದು ದಿವಸ ಅ ಊರಿಗೆ ಪ್ರವಾಹ ಬಂತು. ಊರಿನ ಜನರೆಲ್ಲ ಗುಳೆ ಹೊರಟರು .ಹಾಗೆ ಹೊರಟಾಗ ಊರಿನ ಜನರು ಸನ್ಯಾಸಿಯ ಬಳಿ "ಬನ್ನಿ ಸ್ವಾಮಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತೀರ" ಎಂದರು.

ಆಗ ಸನ್ಯಾಸಿ " ಇಲ್ಲ ನೀವೆಲ್ಲ ಹೋಗಿ ಬದುಕಿಕೊಳ್ಳಿ, ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಎಂದು ಧ್ಯಾನದಲ್ಲಿ ಕುಳಿತರು. ಪ್ರವಾಹ ಹೆಚ್ಚುತ್ತಾ ಹೋಯಿತು ದೇವಸ್ಥಾನ ಮುಳುಗುತ್ತಾ ಬಂತು. ಸನ್ಯಾಸಿ ದೇವಸ್ಥಾನದ ನೆತ್ತಿಯ ಮೇಲೆ ಕುಳಿತು ದೇವರ ಧ್ಯಾನ ಮುಂದುವರೆಸಿದರು. ಆಗ ಒಂದು ದೋಣಿಯಾತ ಬಂದು 'ಬನ್ನಿ ಸ್ವಾಮಿ " ಎಂದು ಕರೆದ. ಆಗಲೂ ಸನ್ಯಾಸಿ ಬರಲೊಲ್ಲೆ ಎಂದರು. ನೀರು ದೇವಸ್ಥಾನದ ನೆತ್ತಿಯನ್ನೂ ಮುಳುಗಿಸತೊಡಗಿತು ಆಗ ಬಂದದ್ದು ಹೆಲಿಕ್ಯಾಪ್ಟರ್ ಆಗಲೂ ಸನ್ಯಾಸಿಯ ಉತ್ತರ ಅಷ್ಟೆ "ಇಲ್ಲ ನನ್ನನ್ನು ಕರೆದೊಯ್ಯಲು ಭಗವಂತ ಬರುತ್ತಾನೆ" ಆ ಉತ್ತರದ ನಂತರ ಪ್ರವಾಹ ಹೆಚ್ಚಿ ಸನ್ಯಾಸಿ ಅಲ್ಲಿ ಮುಳುಗಿ ಹೋದರು.
ದೇಹ ಬಿಟ್ಟ ಸನ್ಯಾಸಿಯ ಆತ್ಮ ದೇವರ ಬಳಿ ಸೇರಿತು. ಮತ್ತು ಸಿಟ್ಟಿನಿಂದ ಕೇಳಿತು " ಹೇ ಭಗವಂತಾ ನಾನು ನಿನ್ನನ್ನು ಅನವರತ ಭಜಿಸುತ್ತಿದ್ದೆ , ಆದರೂ ನೀನು ನನ್ನ ದೇಹವನ್ನು ಪ್ರವಾಹದಿಂದ ಕಾಪಾಡಲು ಬರಲಿಲ್ಲವೇಕೆ?"

ಭಗವಂತ ಯಥಾಪ್ರಕಾರ ಮುಗುಳ್ನಗುತ್ತಾ ಉತ್ತರಿಸಿದ, " ನಾನು ನಿನ್ನನ್ನು ರಕ್ಷಿಸಲು ಮೊದಲು ಜನರನ್ನು ನಂತರ ದೋಣಿಯನ್ನು ಅಂತಿಮವಾಗಿ ಹೆಲಿಕ್ಯಾಪ್ಟರ್ ನ್ನು ಕಳುಹಿಸಿದೆ, ಆದರೆ ನೀನು ಅದನ್ನು ಅರಿತುಕೊಳ್ಳಲಿಲ್ಲ ನೀನು ನಾನೇ ಬರಬೇಕೆಂದು ಹಠ ಹಿಡಿದೆ ಆದರಿಂದ ನೀನು ದೇಹವನ್ನು ಕಳೆದುಕೊಳ್ಳಬೇಕಾಯಿತು., ಭಗವಂತನಾದ ನಾನು ನಿಮ್ಮಗಳಿಗೆ ಹಲವಾರು ರೂಪದಲ್ಲಿ ಕಾಣಿಸಿಕೊಳ್ಳುತ್ತೇನೆ ಅದನ್ನು ಅರಿತುಕೊಳ್ಳುವ ಚೈತನ್ಯ ನಿಮಗಿರಬೇಕು, ಆಗಲಿ ನಿನ್ನ ಗಟ್ಟಿ ಮನಸ್ಸಿನಿಂದ ಹಠದ ಸ್ವಭಾವದಿಂದ ಅಥವಾ ಅಜ್ಞಾನದಿಂದ ನೀನು ದೇಹವನ್ನು ಕಳೆದುಕೊಂದಿರಬಹುದು ಆದರೆ ಮನುಷ್ಯರ ದೃಷ್ಟಿಯಲ್ಲಿ ಮಹಾತ್ಮನಾಗಿದ್ದೀಯ ನೋಡಲ್ಲಿ ಎಂದು ಭಗವಂತ ಸನ್ಯಾಸಿಗಳಿಗೆ ಅವರು ದೇವಸ್ಥಾನದ ನೆತ್ತಿಯಲ್ಲಿ ಬಿಟ್ಟು ಬಂದ ದೇಹವನ್ನು ತೋರಿಸಿದ. ಅಲ್ಲಿ ಪ್ರವಾಹ ಇಳಿದಿತ್ತು. ಸನ್ಯಾಸಿಯ ದೇಹದ ಸುತ್ತ ಸಾವಿರಾರು ಜನ ಸೇರಿದ್ದರು ಮತ್ತು ಅವರಿಗೆ ಮಹಾತ್ಮನ ಪಟ್ಟ ಕಟ್ಟಿದ್ದರು. ಉಘೇ ಉಘೇ ಎನ್ನುತಿದ್ದರು.
ನಂತರದ ವರ್ಷಗಳಲ್ಲಿ ಅದು ಪುಣ್ಯ ಕ್ಷೇತ್ರವಾಯಿತು.
ಹೊಸ ಕತೆ

ಅದೇ ಪುಣ್ಯಕ್ಷೇತ್ರದಲ್ಲಿ ನೂರಾರು ವರ್ಷದ ನಂತರ ಮತ್ತೆ ಪ್ರವಾಹ ಬಂತು. ಆಗಲೂ ಅಲ್ಲೊಬ್ಬರು ಸನ್ಯಾಸಿಗಳಿದ್ದರು. ಅವರಿಗೆ ಈ ಹಿಂದಿನ ಕಥೆ ಗೊತ್ತಿತ್ತು. ಅವರಿಗೂ ಭರ್ಜರಿ ಮಹಾತ್ಮನಾಗುವ ಆಸೆ ಇತ್ತು ಆದರೆ ಆಗಿರಲಿಲ್ಲ.
ಪ್ರವಾಹದ ನೀರು ದೇವಸ್ಥಾನದ ಆವರಣಕ್ಕೆ ಬರುತ್ತಿದ್ದಂತೆ ಅವರಬಳಿ ಕಾರೊಂದು ಬಂತು. ನೂರಾರು ಭಕ್ತರು ಪ್ರವಾಹದ ಭಯದಲ್ಲಿ ಅತ್ತಿಂದಿತ್ತ ಓಡಾಡುತಿದ್ದರೂ ಸನ್ಯಾಸಿಗಳು ಅದನ್ನು ಲೆಕ್ಕಿಸದೆ "ಭಗವಂತ ನನ್ನನ್ನು ಬದುಕಿಸಲು ಕಾರನ್ನು ಕಳುಹಿಸಿದ್ದಾನೆ" ಎಂದು ಕಾರನ್ನೇರಿದರು. ಆದರೆ ಕಾರು ಹೆಚ್ಚು ದೂರ ಹೋಗಲಿಲ್ಲ. ನೀರು ಹೆಚ್ಚಿದ ಕಾರಣ ರಸ್ತೆ ಇಲ್ಲದೆ ಮತ್ತೆ ದೇವಸ್ಥಾನಕ್ಕೆ ವಾಪಾಸು ಬಂತು. ಪ್ರವಾಹದ ನೀರು ದೇವಸ್ಥಾನದ ಒಳಗೆ ಬಂತು. ಸನ್ಯಾಸಿಗಳು ಮಹಡಿ ಏರಿದರು. ಅಲ್ಲೂ ಬಂತು ಸನ್ಯಾಸಿಗಳು ದೇವರು ಕಳುಹಿಸುವ ದೋಣಿಗಾಗಿ ಹುಡುಕಿದರು, ದೋಣಿ ಬಂತು, ದೇವಸ್ಥಾನದ ಮಹಡಿಯಲ್ಲಿ ಸೇರಿದ್ದ ನೂರಾರು ಜನರನ್ನು ಮರೆತು ಸನ್ಯಾಸಿಗಳು ಅದನ್ನು ಏರಿದರು. ಆದರೆ ದೋಣಿ ಹೆಚ್ಚು ದೂರ ಸಾಗಲಿಲ್ಲ . ನೀರಿನ ರಭಸಕ್ಕೆ ತೇಲುತ್ತಾ ತೇಲುತ್ತಾ ಮತ್ತೊಂದು ಕಟ್ಟಡದ ನೆತ್ತಿಯವರೆಗೆ ಬಂತು. ಸನ್ಯಾಸಿಗಳು ಅಲ್ಲಿ ಇಳಿದುಕೊಂಡು ಭಗವಂತ ಕಳುಹಿಸುವ ಕೆಲಿಕ್ಯಾಪ್ಟರ್ ಗಾಗಿ ಆಕಾಶ ನೋಡತೊಡಗಿದರು. ಅರೆ ಎಂಥಾ ಆಶ್ಚರ್ಯ ಕ್ಷಣ ಮಾತ್ರದಲ್ಲಿ ಅದೂ ಹಾರಿಕೊಂಡು ಬಂದು ಸನ್ಯಾಸಿಯಿದ್ದ ಕಟ್ಟಡದಲ್ಲಿ ಇಳಿಯಿತು. ಲಗುಬಗೆಯಿಂದ ಸನ್ಯಾಸಿ ಪೀಠ, ಗಂಟು ಮೂಟೆಯೊಡನೆ ಹೆಲಿಕ್ಯಾಪ್ಟರ್ ಹತ್ತಿ ಕುಳಿತರು. ಇನ್ನೂ ಹತ್ತೆಂಟು ಜನ ಅಲ್ಲಿದ್ದರು. ಸನ್ಯಾಸಿಗಳು ಅವರನ್ನು ಕಣ್ಣೆತ್ತಿಯೂ ನೋಡಲಿಲ್ಲ. ಗಂಟೆಯೊಳಗೆ ಸನ್ಯಾಸಿಗಳನ್ನು ದೂರದ ಸುರಕ್ಷಿತ ಜಾಗಕ್ಕೆ ಇಳೀಸಿದರು. ಅಲ್ಲಿ ಟಿವಿ ೯ ನವರು ಮೈಕ್ ನ್ನು ಸನ್ಯಾಸಿಗಳ ಮುಂದೆ ಹಿಡಿದು ಪ್ರವಾಹದ ಬಗ್ಗೆ ಕೇಳಿ ನಂತರ " ಪ್ರವಾಹದಲ್ಲಿ ಸಿಲುಕಿರುವ ನೂರಾರು ಭಕ್ತರ ಕಥೆ ಏನು? " ಎಂದು ಕೇಳಿದರು. ಅದಕ್ಕೆ ಸನ್ಯಾಸಿಗಳು " ನೀರು ನೀರು ಎಲ್ಲೆಲ್ಲಿಯೂ ನೀರು, ಉಳಿದ ಭಕ್ತರು ಅಲ್ಲಿ ಇದ್ದಾರೆ , ಅದೇನು ಅಂತಹಾ ದೊಡ್ಡ ವಿಷಯವಲ್ಲ ನೀರಿಳಿದ ಮೇಲೆ ಎಲ್ಲಾ ಸುರಕ್ಷಿತ" ಎಂದರು.
ಪ್ರವಾಹ ತಗ್ಗಿತು. ಸನ್ಯಾಸಿಗಳು ಮತೆ ದೇವಸ್ಥಾನಕ್ಕೆ ವಾಪಾಸಾದರು ಮತ್ತು ಹತ್ತಾರು ವರ್ಷ ಬದುಕಿದ್ದರು ಆದರೆ ಅವರು ಮಹಾತ್ಮರಾಗಲಿಲ್ಲ. ಹಾಗೆಯೇ ಒಂದು ದಿನ ಸನ್ಯಾಸಿಗಳು ದೇಹ ತ್ಯಜಿಸಿದರು. ಸನ್ಯಾಸಿಯ ಆತ್ಮಕ್ಕೆ ತಾನು ಸಿಕ್ಕಾಪಟ್ಟೆ ದೊಡ್ಡ ಮಹಾತ್ಮನಾಗಲಿಲ್ಲ ಎಂಬ ಕೊರಗು ಇತ್ತು. ಭಗವಂತನ ಬಳಿ " ಅದೇನು ? ಆ ಪ್ರವಾಹದ ಸಮಯದಲ್ಲಿ ನೀನು ಕಳುಹಿಸಿದ ಎಲ್ಲಾ ವಾಹನಗಳನ್ನು ಉಪ ಯೋಗಿಸಿದೆ ನಾನು, ಆದರೂ ತದನಂತರ ನಾನು ಭರ್ಜರಿ ಮಹಾತ್ಮ ಆಗಲೇ ಇಲ್ಲ? " ಎಂದು ಕೇಳಿದರು.
ಯಥಾಪ್ರಕಾರ ಭಗವಂತ ಹಸನ್ಮುಖಿಯಾಗಿ ಉತ್ತರಿಸಿದ " ಅಯ್ಯಾ, ನಾನು ನೀನ್ನನ್ನು ಮಹಾತ್ಮನನ್ನಾಗಿಸಲು ನೀನಿದ್ದ ಜಾಗಕೆ ಪ್ರವಾಹ ಕಳುಹಿಸಿದೆ ಆದರೆ ನೀನು ಕಾರನ್ನೇರಿದೆ. ರಸ್ತೆಗೆ ಅಡ್ಡ ನೀರನ್ನು ಹರಿಸಿದೆ ನೀನು ದೇವಸ್ಥಾನದ ಮಹಡಿಯನ್ನೇರಿದೆ. ನಿನ್ನ ಜತೆಗಿದ್ದ ಭಕ್ತರನ್ನು ದೋಣಿಯಲ್ಲಿ ಏರಿಸು ಎಂದು ದೋಣಿ ಕಳುಹಿಸಿದೆ ನೀನೇ ಏರಿದೆ. ಅದನ್ನು ತೇಲಿಸಿದೆ ಆದರೆ ನೀನು ಮತ್ತೊಂದು ಕಟ್ಟಡ ಏರಿದೆ. ಕೊನೆಯಲ್ಲಿ ಉಳಿದ ನಾಲ್ಕಾರು ಜನರನ್ನಾದರು ಬದುಕಿಸಿ ನೀನು ಮಹಾತ್ಮನಾಗುತ್ತೀಯ ಎಂದು ಹೆಲಿಕ್ಯಾಪ್ಟರ್ ಕಳುಹಿಸಿದೆ ಆದರೆ ನಿನಗೆ ನಿನ್ನ ಜೀವವೇ ಹೆಚ್ಚಾಯಿತು. ಹೋಗಲಿ ದೂರದಲ್ಲಿರುವ ಭಕ್ತರಿಗೆ ನೀನು ನಾಲ್ಕು ಒಳ್ಳೆಯ ಮಾತನ್ನಾದರೂ ಆಡಲಿ ಎಂದು ಟಿವಿ ೯ ನ ವರದಿಗಾರನನ್ನು ಕಳುಹಿಸಿದೆ ಆದರೆ ಅಲ್ಲೂ ನೀನು ಸಂಕಷ್ಟದಲ್ಲಿರುವ ಜನರಿಗೆ ಒಳ್ಳೆಯ ಮಾತನಾಡಲಿಲ್ಲ ಆದರೂ ಪ್ರವಾಹ ಮುಗಿದ ನಂತರದ ವರ್ಷಗಳಲ್ಲಿ ನಿನ್ನನ್ನೂ ನಂಬುವ ಹುಂಬ ಭಕ್ತರನ್ನು ಇರಿಸಿದೆನಲ್ಲಾ ಅದಕ್ಕೆ ಖುಷಿ ಪಡು" ಎಂದ. ಸನ್ಯಾಸಿಗೆ ಆವಾಗ ಅರ್ಥವಾದಂತಾಯಿತು.
ಆದರೆ ಏನು ಪ್ರಯೋಜನ ಇತ್ತ ಭೂಮಿಯಲ್ಲಿ ಆ ಸನ್ಯಾಸಿಯ ಜಾಗದಲ್ಲಿ ಅರ್ಥವಾಗದ ಮತೊಬ್ಬ ಸನ್ಯಾಸಿ ಕುಳಿತಿದ್ದರು. ಭಕ್ತರ ಜಾಗದಲ್ಲಿ.......................ನಾವು ....... ನೀವು ....................?


ಭಾರತದವರ ಬಗ್ಗೆ ಹೀಗೆಲ್ಲ ಇದೆಯಂತೆ ನೋಡಿ

WHY ARE INDIANS EASY TO IDENTIFY
We are like this, so true, so very true..........
1. Everything you eat is savored in garlic, onion and tomatoes. 2. You try and reuse gift wrappers, gift boxes, and of course aluminum foil. 3. You are always standing next to the two largest size suitcases at the Airport. 4. You arrive one or two hours late to a party - and think it's normal. 5. You peel the stamps off letters that the Postal Service missed to stamp. 6. You recycle Wedding Gifts, Birthday Gifts and Anniversary Gifts. 7. You name your children in rhythms (example, Sita & Gita, Ram & Shyam, Kamini & Shamini...) 8. All your children have pet names, which sound nowhere, close to their real names. 9. You take Indian snacks anywhere it says 'No Food Allowed.' 10. You talk for an hour at the front door when leaving someone's house. 11. You load up the family car with as many people as possible. 12. HIGH PRIORITY ***** You use plastic to cover anything new in your house whether it's the remote control, VCR, carpet or new couch. ***** 13. Your parents tell you not to care what your friends think, but they won't let you do certain things because of what the other 'Uncles and Aunties' will think. 14. You buy and display crockery, which is never used, as it is for special occasions, which never happen. 15.You have a vinyl tablecloth on your kitchen table. 16 You use grocery bags to hold garbage. 17.You keep leftover food in your fridge in as many numbers of bowls as possible. 18. Your kitchen shelf is full of jars, varieties of bowls and plastic utensils (got free with purchase of other stuff) 19. You carry a stash of your own food whenever you travel (and travel means any car ride longer than 15 minutes). 20. You own a rice cooker or a pressure cooker. 21. You fight over who pays the dinner bill. 22. You live with your parents and you are 40 years old. (And they prefer it that way). 23. You don't use measuring cups when cooking. 24. You never learnt how to stand in a queue. 25. You can only travel if there are 5 persons at least to see you off or receive you whether you are traveling by bus, train or plane. 26. If she is NOT your daughter, you always take interest in knowing whose daughter has run with whose son and feel proud to spread it at the velocity of more than the speed of light. 27. You only make long distance calls after 11p.m. 28. If you don't live at home, when your parents call, they ask if you've eaten, even if it's midnight. 29. You call an older person you never met before Uncle or Aunty. 30. When your parents meet strangers and talk for a few minutes, you discover you're talking to a distant cousin. 31. Your parents don't realize phone connections to foreign countries have improved in the last two decades, and still scream at the top of their lungs when making foreign calls. 32. You have bed sheets on your sofas so as to keep them from getting dirty. 33. Its embarrassing if you're wedding has less than 600 people. 34. All your Tupperware is stained with food color. 35. You have drinking glasses made of steel. 36. You have mastered the art of bargaining in shopping. 37. You have really enjoyed reading this mail - forward it to as many Indians as possible.
I STILL LOVE TO BE AN INDIAN

Wednesday, September 30, 2009

ಪಾರಂ ನಂ ...............!

ಹೆಸರು: ರಾಘವೇಂದ್ರ ಶರ್ಮ ಕೆ ಎಲ್
ಬ್ಲಾಗ್: ಶ್ರೀ.ಶಂ.ಬ್ಲಾಗ್ ಸ್ಪಾಟ್ ಡಾಟ್ ಕಾಮ್
ವಿಳಾಸ: ಕಡವಿನಮನೆ .ಅಂಚೆ:ತಲವಾಟ, ಸಾಗರ-ಶಿವಮೊಗ್ಗ ೫೭೭೪೨೧

ಚರಾಸ್ಥಿ: ಅಪ್ಪ(ಲಕ್ಷ್ಮೀನಾರಾಯಣ ಭಟ್)-ಅಮ್ಮ(ವಿಶಾಲಾಕ್ಷಿ)-ಹೆಂಡತಿ(ಕವಿತ) ಮಗ (ಸುಮಂತ)
ಮಾರುತಿ ೮೦೦(೯೬ ಮಾಡೆಲ್), ಸುಜುಕಿ ಬೈಕ್-(೦೮)-ಟಿವಿಎಸ್ ಸ್ಕೂಟಿ-
೧ ಲಕ್ಷ ಡಿಪಾಸಿಟ್(ಕೆನರಾ ಬ್ಯಾಂಕ್)
೪೫ ಸಾವಿರ ಎಸ್.ಬಿ (ಕೆನರಾ ಬ್ಯಾಂಕ್)
೨ ಲಕ್ಷ ಇನ್ಷುರೆನ್ಸ್ ಪಾಲಿಸಿ
೭೫ ಸಾವಿರ ಸಾಲ (ವಿ.ಎಸ್.ಎನ್.ಬಿ. ಹಿರೇಮನೆ+ ಎಲ್.ಐ.ಸಿ)
ಸ್ಥಿರಾಸ್ಥಿ: ೩೩ ಗುಂಟೆ ಅಡಿಕೆ ಬಾಗಾಯ್ತು(ಹಳೆಯದು) ೩೮ ಗುಂಟೆ ಅಡಿಕೆ ಭಾಗಾಯ್ತು (ಹೊಸತು). ೭ ಎಕರೆ ಖುಷ್ಕಿ
ಬರಹ: ಒಂದು ಜೇನಿನ ಹಿಂದೆ ಪುಸ್ತಕ- ಪ್ರಕಟಿತ ೩೪ ಕಥೆಗಳು-ಬ್ಲಾಗ್ ಬರಹಗಳು
ವೀಕ್ ನೆಸ್: ತಂಬಾಕು ಅಗಿಯುವುದು, ಅನವಶ್ಯಕ ವಾಚಾಳಿತನ

ಈ ಮೇಲ್ಕಂಡದ್ದು ಈ ವರ್ಷದ ತನಕ ಸತ್ಯ ಎಂದು ಪ್ರಾಮಾಣಿಕರಿಸುತ್ತಾ ಡಿಕ್ಲರೇಷನ್ ಸಲ್ಲಿಸುತ್ತಿದ್ದೇನೆ . ಮುಂದಿನದು ಮುಂದಿನ ವರ್ಷ .

Tuesday, September 29, 2009

God Gave Me ...............!

When I Asked God for Strength
He Gave Me Difficult Situations to Face

When I Asked God for Brain & Brown
He Gave Me Puzzles in Life to Solve

When I Asked God for Happiness
He Showed Me Some Unhappy People

When I Asked God for Wealth
He Showed Me How to Work Hard

When I Asked God for Favors
He Showed Me Opportunities to Work Hard

When I Asked God for Peace
He Showed Me How to Help Others

God Gave Me Nothing I Wanted
He Gave Me Everything I Needed

Monday, September 21, 2009

ನಾ ಕದ್ದ ಕವನ

ದೂಧ್ ಸಾಗರ್
(ಲೋಂಡಾದಿಂದ ಗೊವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್
ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ
ಕಾಣುವ ಇದರೆದುರು ನಿಂತಾಗ....)

ಕ್ಷೀರ ಸಾಗರವ ಸುಮನಸ ವೃಂದ
ಬಾನಿಂ ಕಟ್ಟಿರೆ ಸಡಲಿತೆ ಬಂಧ?
ಓಹೋ ತಪ್ಪಿದೆ ತಪ್ಪಿದೆನಲ್ಲ
ದೈವಶಕ್ತಿಗನುಮಾನವೆ ಸಲ್ಲ.
ರಾಧೆಯು ಹೊತ್ತಿರೆ ಬಿಂದಿಗೆ ಹಾಲ
ಕೃಷ್ಣನು ಅಲ್ಲಿಗೆ ಹೊಡೆದನೆ ಕಲ್ಲ?
ಆದರೆ ಸಂದೆಯಮೊಂದುಂಟಲ್ಲ
ಕಾಣದು ರಾಧೆಯ ಕೆಂಪಿನ ಗಲ್ಲ!
ದೇವಧೇನುವಿನ ಕೆಚ್ಚಲ ಹಾಲೆ?
ಸಟೆ; ನಿಲ್ಲಳು ಅವಳೊಂದೆಡೆಯಲ್ಲೇ.
ರತ್ನಗರ್ಭನಿಗೆ ಅಮೃತದ ಪಾಲೆ?
ಕತೆಯದು ಮುಗಿದುದು ಕೃತಯುಗದಲ್ಲೇ.
ಉಪ್ಪಿನ ರಾಜಗೆ ಸಕ್ಕರೆ ಹಾಲೆ?
ಪ್ರಕೃತಿಯ ಪುತ್ರಿಗೆ ತಾಯ್ಮೊಲೆವಾಲೆ?
ಆವ ಹಾಲಿನದು ಈ ಘನ ಶರಧಿ?
ಕವಿಯ ಕಲ್ಪನೆಗದೆಲ್ಲಿದೆ ಪರಿಧಿ?
-ಜಿ.ಮೃತ್ಯುಂಜಯ

Friday, September 18, 2009

ಕಾಪ್ಯಾಂತು ಮರಣಾನ್ ಮುಕ್ತಿಃ



ಬೆಳಿಗ್ಗೆ ಮೊದಲ ಭೇಟಿಯ ಹಲೋ ನಂತರ "ಕಾಫಿ ಆಯ್ತಾ?" ಎಂಬ ಪ್ರಶ್ನೆಯೊಂದಿಗೆ ನಾವು ಮತ್ತೊಬ್ಬರನ್ನು ಮಾತನಾಡಿಸುತ್ತೇವೆ. ಅದೊಂದು ಡೈಲಾಗ್ ನೊಂದಿಗೆ ಕಾಫಿಗೆ ಮರ್ಯಾದೆ ಆರಂಭ. ಹುಡುಕು ಎನ್ನುವುದಕ್ಕೆ ಗೂಗಲ್ ಪರ್ಯಾಯವಾದ ಹಾಗೆ "ಹಲೋ" ಎನ್ನುವುದಕ್ಕೆ ಕಾಫ್ಹಿ ಆಯ್ತಾ ಎಂದು ಬೆಳಗಿನ ಸಮಯದಲ್ಲಿ ಬದಲಾಗಿದ್ದು ನಿಜ.

ಇರಲಿ ಈ ಕಾಪಿ ಎಂದು ನಮ್ಮ ಹಳ್ಳಿಗರ ಮುಖಾಂತರ ಕರೆಯಿಸಿಕೊಂಡಿರುವ ಕಾಫಿ ಅದ್ಯಾವುದೋ ರಾಜರ ಕಾಲದಲ್ಲಿ ವಿದೇಶದಿಂದ ಬಂದು ನಮ್ಮ ಭಾರತದಲ್ಲಿ ಮನೆಮಾತಾಯಿತಂತೆ. ಅವೆಲ್ಲ ಅಂತೆಕಂತೆಗಳ ಸಂತೆಯಾಯಿತು ಈಗ ವಾಸ್ತವಕ್ಕೆ ಬರೋಣ.

ಬೆಳಿಗ್ಗೆ ಎದ್ದಕೂಡಲೆ ಒಂದು ಲೋಟ ಕಾಪಿ..! ಕುಡಿಯದಿದ್ದರೆ ಬಹಳಷ್ಟು ಜನರಿಗೆ ದಿನವೇ ಆರಂಭವಾಗುವುದಿಲ್ಲ. ಇನ್ನು ಕೆಲವರಿಗೆ ರಾತ್ರಿ ಮಲಗುವ ಮುಂಚೆಯೂ ಕಾಫಿ ಬೇಕು. ದಿನಕೆ ಹತ್ತೆಂಟು ಲೋಟ ಕಾಫಿ ಕುಡಿಯುವವರೂ ಇದ್ದಾರೆ ಒಂದೇ ಲೋಟ ಕುಡಿದು " ಅಯ್ಯೋ ಹೀಟ್ ಆಗಿ ಬಾಯೆಲ್ಲಾ ಹುಣ್ಣಾಗೋಗ್ತ ಬ್ಯಾಡ" ಎನ್ನುವವರೂ ಇದ್ದಾರೆ. ಹಾಲಿಗೆ ಡಿಕಾಕ್ಷನ್ ಬೆರೆಸಿ ಲೈಟ್ ಕಾಫ್ಹಿ ಕುಡಿಯುವವರಿಂದ ಹಿಡಿದು ಡಿಕಾಕ್ಷನ್ ಗೆ ಹಾಲು ಬೆರೆಸಿ ಸ್ಟ್ರಾಂಗ್ ಕಾಫಿ ಕುಡಿಯುವ ಜನರ ವರೆಗೆ ಹತ್ತಾರು ಬಗೆ ಜನ ಈ ಕಾಪ್ಯಾಭಿಮಾನಿಗಳಿದ್ದಾರೆ. ಬೆಡ್ ಕಾಫಿ, ಬ್ರೆಡ್ ಕಾಫಿ, ಮುಂತಾದ ಬಗೆಯ ಜತೆ ಕಾಪಿ ತಿಂಡಿ ಆತನ ಎಂದು ಕರೆಯಿಸಿಕೊಳ್ಳುವ ರಾಜಾತಿಥ್ಯ ಕಾಫಿಗೆ.

ಕಾಫಿಯಲ್ಲಿ ಕೆಫಿನ್ ಎಂಬ ರಾಸಾಯನಿಕ ಇರುತ್ತದೆ ಅದು ಸಣ್ಣ ಪ್ರಮಾಣದ ಮಜ ಕೊಡುತ್ತದೆ ಎನ್ನುವ ಕಾರಣಕ್ಕೆ ಅದು ನಮ್ಮನಿಮ್ಮೆಲ್ಲರಿಗೆ ಅಡಿಕ್ಟ್ ಆಗಿದೆ. ( ಕಾಫಿಯಲ್ಲಿ ಕೆಫಿನ್ ಇದೆ ಹಾಗಾದರೆ ಟಿ ಯಲ್ಲಿ ಏನಿದೆ ? ಎಂದು ಮೇಷ್ಟು ಕೇಳಿದಾಗ ಟಿ ಯಲ್ಲಿ ಟಿಫಿನ್ ಇದೆ ಎಂದು ಗುಂಡ ಹೇಳಿದ ಎಂಬ ಒಂದು ಜೋಕ್ ಚಾಲ್ತಿಯಲ್ಲಿತ್ತು) ಆದರೆ ವಾಸ್ತವವಾಗಿ ಕಾಫಿಯಲ್ಲಿ ಡ್ರೌಜೀನೆಸ್ ತರಿಸಲು ಅದಕ್ಕೆ ಚಿಕೋರಿ ( ಚಕೋರಿ...!) ಎಂಬ ಗಡ್ಡೆಯ ಪುಡಿಯನ್ನು ಬೆರೆಸುತ್ತಾರೆ. ಆ ಗಡ್ಡೆ ನಮ್ಮನ್ನು ಕಾಫಿಗೆ ಅಡಿಕ್ಟ್ ಮಾಡಿಬಿಡುತ್ತದೆ . ಚಿಕೋರಿ (ಆ ಶಬ್ಧವೇ ಹಲವರಿಗೆ ಒಂಥರಾ ಅಮಲು ತರಿಸುತ್ತದೆ ಎನ್ನುವುದು ಗುಟ್ಟಿನ ವಿಚಾರ) ರಹಿತ ಕೇವಲ ಕಾಫಿಬೀಜವನ್ನು ಹುರಿದು ಪುಡಿ ಮಾಡಿಸಿ ಅದಕ್ಕೆ ಏನೂ ಮಿಶ್ರ ಮಾಡದೇ ಹಾಗೆಯೇ ಹಾಲು ಸಕ್ಕರೆ ಬೆರೆಸಿ ಕುಡಿದರೆ ಕಾಫಿಯ ಮಜ ಬೇರೆಯೇ ಇದೆ.

ಅವಕಾಶ ಸಿಕ್ಕರೆ ಚಿಕೋರಿ ರಹಿತ ಕಾಫಿ ಕುಡಿಯಿರಿ ಮತ್ತು ಅನುಭವ ಹೇಳಿರಿ. ಹ್ಯಾಪಿ ಕಾಫಿಡೆ...

Thursday, September 17, 2009

ಕದ್ದ ಕತೆ

ಹುಡುಗನೊಬ್ಬ ಪುಸ್ತಕವೊಂದನ್ನು ಓದುತ್ತಿದ್ದ . ಅದರಲ್ಲಿ ಹೀಗೊಂದು ಸಾಲು ಇತ್ತು. "ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ" . ಹುಡುಗನಿಗೆ ಖುಷಿಯಾಯಿತು. ಕಾರಣ ಆತನ ಬಳಿ ಒಂದು ರೂಪಾಯಿ ಇತ್ತು. ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂದಾದಮೇಲೆ ಮುಗಿಯಿತಲ್ಲ. ತಾನು ಬೇಕಷ್ಟು ರೂಪಾಯಿಗಳನ್ನು ಸಂಗ್ರಹಿಸಿಕೊಳ್ಳಬಹುದು ಎಂದು ಆಲೋಚಿಸಿ ಹೊರಟ. ಒಂದು ರೂಪಾಯಿಯನ್ನು ಕೈಯಲ್ಲಿ ಹಿಡಿದು ಊರೆಲ್ಲಾ ಸುತ್ತಾಡಿದ . ಆದರೆ ಸುತ್ತಾಡಿ ಸುಸ್ತಾಯಿತೇ ಹೊರತು ಹುಡುಗನ ರೂಪಾಯಿ ರೂಪಾಯಿಯನ್ನು ಸೆಳೆಯಲಿಲ್ಲ. ಹೀಗೆ ತಿರುಗಾಡಿ ತಿರುಗಾಡಿ ಆತ ಅಂತಿಮವಾಗಿ ಅಂಗಡಿಯೊಂದರ ಬಳಿ ಬಂದ. ಅಂಗಡಿಯಾತ ಗಲ್ಲದಲ್ಲಿ ಕುಳಿತು ಜಣಜಣ ಅಂತ ಹಣ ಎಣಿಸುತ್ತಿದ್ದ. ಹುಡುಗನಿಗೆ ಈಗ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂಬುದರಲ್ಲಿ ಸ್ವಲ್ಪ ನಂಬಿಕೆ ಬರತೊಡಗಿತು. ಹುಡುಗ ಅಂಗಡಿಯ ಹೊರಗಡೆ ನಿಂತು ತನ್ನ ಬಳಿಯಿದ ರೂಪಾಯಿಯನ್ನು ಹಿಡಿದುಕೊಂಡು ಹಿಂದೆ ಮುಂದೆ ತಿರುಗಿಸತೊಡಗಿದೆ. ಹೀಗೆ ಕೆಲಹೊತ್ತು ಕಳೆದರೂ ರೂಪಾಯಿ ರೂಪಾಯಿಯನ್ನು ಸೆಳೆಯಲಿಲ್ಲ. ಆನಂತರ ಹುಡುಗ ತನ್ನಬಳಿ ಇದ್ದ ರೂಪಾಯಿಯನ್ನು ಅಂಗಡಿಯ ಗಲ್ಲಪೆಟ್ಟಿಗೆಯತ್ತ ಎಸೆದ. ಹಾಗೆ ಮಾಡಿದಾಗ ತನ್ನ ರೂಪಾಯಿ ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಹೆಚ್ಚು ರೂಪಾಯಿಯನ್ನು ಎಳೆದುಕೊಂಡು ಬರುತ್ತದೆ ಎಂಬುದು ಹುಡುಗನ ಲೆಕ್ಕಾಚಾರ. ರೂಪಾಯಿಯನ್ನು ಗಲ್ಲಾಪೆಟ್ಟಿಗೆಯತ ಎಸೆದು ಗಂಟೆಗಳ ಕಾಲ ಅಂಗಡಿ ಮುಂದೆ ಕಾದರೂ ಹುಡುಗನ ರೂಪಾಯಿ ವಾಪಾಸು ಬರಲಿಲ್ಲ. ಆಗ ಹುಡುಗ " ಪುಸ್ತಕದಲ್ಲಿ ಸುಳ್ಳು ಬರೆದಿದ್ದಾರೆ" ಎಂದು ತನ್ನಷ್ಟಕೆ ಗೊಣಗಿಕೊಂಡ. ಹುಡುಗನ ಗೊಣಗಾಟ ಅಂಗಡಿಯಾತನಿಗೆ ಕೇಳಿಸಿತು. ಆತ ಏನು? ಎಂದು ವಿಚಾರಿಸಿದ. ಅದೇ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಅಂತ ಒಂದು ಪುಸ್ತಕದಲ್ಲಿ ಬರೆದಿತ್ತು ಅ ದನ್ನ ನಾನು ನಂಬಿ ಮೋಸ ಹೋದೆ, ಅದು ಸುಳ್ಳು " ಎಂದು ತಾನು ಗಲ್ಲಾಪೆಟ್ಟಿಗೆಯತ ರೂಪಾಯಿ ಎಸೆದದ್ದನ್ನು ಹೇಳಿದ

ಅದಕ್ಕೆ ಅಂಗಡಿಯಾತ ಹೇಳಿದೆ" ಅಯ್ಯೋ ಹುಡುಗಾ ಪುಸ್ತಕದಲ್ಲಿ ನಿಜವನ್ನೇ ಬರೆದಿದೆ, ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ ಎನ್ನುವುದು ನಿಜವಾಯಿತಲ್ಲೋ, ಇನ್ನು ನೀನು ಹೊರಡು" ಎಂದ.

ಹೌದು ಕಣ್ರೀ ರೂಪಾಯಿ ರೂಪಾಯಿಯನ್ನು ಸೆಳೆಯುತ್ತದೆ. ನಿಮ್ಮ ಬಳಿ ಎಷ್ಟಿದೆ ಅದಕ್ಕಿಂತ ಹೆಚ್ಚಿದ್ದವರ ಬಳಿ ಅದು ಸೇರುತ್ತದೆ. ಕತೆ ಚೆನ್ನಾಗಿದೆ ಅಲ್ವಾ?. ಅರ್ಥವಾಗದಿದ್ದರೆ ಮತ್ತೆ ಓದಿ ನನ್ನ ಅನ್ನಬೇಡಿ.

Wednesday, September 16, 2009

ಸನ್ಯಾಸಿಯ ಕತೆ

ಸನ್ಯಾಸ ಎಂದರೆ ಪ್ರವಾಹದ ವಿರುದ್ಧ ಈಜುವುದು ಅಂತ ಅನ್ನಬಹುದು. ಅಲ್ಲಿ ಎಷ್ಟರಮಟ್ಟಿಗಿನ ಮಾನಸಿಕ ಸ್ಥಿರತೆ ಇದೆಯೋ ಅಷ್ಟರ ಮಟ್ಟಿಗಿನ ಏರುಗತಿ ಸಾದ್ಯ. ಹಾಗಾಗಿ ಪ್ರಸ್ತುತಕ್ಕೆ ಒಂದು ಸ್ನ್ಯಾಸಿಯ ಕತೆಯತ್ತ ಹೊರಳೋಣ.

ಯಥಾಪ್ರಕಾರ ಒಂದಾನೊಂದು ಊರು ಅಲ್ಲೊಬ್ಬ ಸನ್ಯಾಸಿ ಇದ್ದ. ಆತ ಜಪ ತಪ ಗಳಲ್ಲಿ ಮುಳುಗೇಳುತ್ತಾ ಪಾಮರರಿಗೆ ಸನ್ಮಾರ್ಗ ತೋರಿಸುತ್ತ ತಾನೂ ಭಗವಂತನತ್ತ ಸಾಗುವ ಪಯಣದಲ್ಲಿ ಮಗ್ನನಾಗಿದ್ದ. ಹೀಗೆ ಇರಬೇಕಾದ ಒಂದು ದಿನ ಆ ಊರಿನಲ್ಲಿ ಘಟನೆಯೊಂದು ನಡೆಯಿತು. ಮದುವೆಯಾಗದ ಸುಂದರಿಯೊಬ್ಬಳು ಮಗುವಿಗೆ ಜನ್ಮ ನೀಡಿದಳು. ಜಡಭರಿತ ಊರಿನ ಜನರಿಗೆ ಮಾತನಾಡಲು ಭರ್ಜರಿ ವಿಷಯ. ಯಾರು? ಆಕೆಯ ಈ ಸ್ಥಿತಿಗೆ ತಂದವನು ಎಂಬ ಕುತೂಹಲದ ಮಾತುಗಳು ಹರಿದಾಡಲಾರಂಬಿಸಿತು. ಹೀಗೆಲ್ಲಾ ಆಗುವುದು ಎಂದರೆ ಊರಿನ ಮರ್ಯಾದೆ ಹರಾಜು ಎಂಬ ಲೆಕ್ಕಾಚಾರ ಹಿರಿಕರಿದ್ದಾದ್ದರಿಂದ ಸರಿ ಪಂಚಾಯ್ತಿ ಕಟ್ಟೆ ಸೇರಿಯಾಯಿತು. ಹಸುಗೂಸಿನ ತಾಯಿ ಮಗುವಿನ ಸಮೇತ ಪಂಚಾಯ್ತಿ ಕಟ್ಟೆ ಏರಿದಳು. ಪಂಚರ ಸಮ್ಮುಖದಲ್ಲಿ ವಿಚಾರಣೆ ಆರಂಭಗೊಂಡು ಅಂತಿಮವಾಗಿ ಆಕೆಯ ಬಳಿ ಈ ಕೂಸಿನ ತಂದೆ ಯಾರು? ಮತ್ತು ಆತನನ್ನು ದಂಡಿಸಬೇಕು ಎಂದು ಕೇಳಲಾಯಿತು. ಬಹಳ ಹೊತ್ತು ಸುಮ್ಮನಿದ್ದ ಆಕೆ ಕೊನೆಗೂ ಒತ್ತಡ ತಡೆಯಲಾರದೆ " ಈ ಕೂಸಿನ ಅಪ್ಪ ಅದೇ ಸನ್ಯಾಸಿ" ಎಂದು ಹೇಳಿದಳು.

ಒಮ್ಮೆಲೆ ಇಡೀ ಸಭೆ ಮೌನವಾಯಿತು. ಆತ ಹೇಳಿಕೇಳಿ ಮಹಾನ್ ಆಧ್ಯಾತ್ಮಿಕ ಮನುಷ್ಯ ಅವನನ್ನು ಶಿಕ್ಷಿಸುವುದು ಹೇಗೆ? ಎಂಬ ವಿಷಯ ಎಲ್ಲರಲ್ಲಿಯೂ. ಹೀಗೆ ಗಂಟೆಗಟ್ಟಲೆ ಜಿಜ್ಞಾಸೆ(ಈಗಿನ ಜಿಗ್ನಾಸೆ) ನಡೆದು ಅಂತಿಮವಾಗಿ "ಹಸುಗೂಸಿನ ಜನ್ಮಕ್ಕೆ ಸನ್ಯಾಸಿ ಕಾರಣ ಎಂದಾದಮೇಲೆ ಅದರ ಲಾಲನೆಗೂ ಅವನೇ ಜವಾಬ್ದಾರಿ" ಎಂದು ತೀರ್ಮಾನಿಸಿ ಆತನ ಬಳಿ ಹಸುಗೂಸನ್ನು ಒಯ್ದುಬಿಡಬೇಕು, ಹಾಗೂ ಆತನಿಗೆ ಊರಿನಲ್ಲಿ ಯಾರೂ ಬಿಕ್ಷೆ ನೀಡಬಾರದು " ಎಂಬ ಠರಾವಿನೊಂದಿಗೆ ಪಂಚಾಯ್ತಿ ಮುಗಿಯಿತು. ಸನ್ಯಾಸಿಯನ್ನು ಠಕ್ಕ ಕಪಟಿ ಮೋಸಗಾರ ಮುಂತಾದ ಶಬ್ಧಗಳೊಂದಿಗೆ ಬಯ್ಯುತ್ತಾ ಜನರು ಮನೆ ಸೇರಿದರು.

ದಿನತುಂಬಿದ ಕೂಸನ್ನು ಸನ್ಯಾಸಿಯಬಳಿ ಬಿಟ್ಟು ಊರ ಜನರು ದೂರ ನಡೆದರು. ಸನ್ಯಾಸಿ ಮುಗುಳ್ನಕ್ಕು ಮಗುವನ್ನು ಮುದ್ದಿಸಿದ. ಸ್ವಲ್ಪ ಸಮಯದ ನಂತರ ಮಗು ಹಸಿವಿಯಿಂದ ಅಳಲಾರಂಬಿಸಿತು. ಸನ್ಯಾಸಿಯ ತೀರ್ಥ ಗಳು ಮಗುವಿನ ಅಳುವನ್ನು ನಿಲ್ಲಿಸಲಿಲ್ಲ. ಸನ್ಯಾಸಿ ಈಗ ಅಧೀರನಾದ ತಾನು ಹೇಳಿಕೇಳಿ ಸನ್ಯಾಸಿ ಮಗುವಿನ ಹಸಿವೆ ನೀಗಿಸಲು ತನ್ನ ಬಳಿ ಏನಿಲ್ಲವಲ್ಲ ಈಗ ಏನಾದರೂ ಮಾಡಲೇಬೇಕು ಎಂದು ಅಳುವ ಮಗುವನ್ನು ಜೋಳಿಗೆಗೆ ಹಾಕಿಕೊಂಡು ಊರಮೇಲೆ ಹೊರಟ. ಮನೆಬಾಗಿಲಿನಲ್ಲಿ ಸನ್ಯಾಸಿಯನ್ನು ಕಂಡ ಜನ ಒಬ್ಬೊಬ್ಬರಾಗಿ ಠಪ್ಪಂತ ಬಾಗಿಲು ಹಾಕಿಕೊಂಡರು. "ನೀ ಮಾಡಿದ್ದು ನೀನೆ ಅನುಭವಿಸು" ಎಂದರು ಸನ್ಯಾಸಿ ಮುಗುಳ್ನಕ್ಕ ಮತ್ತು ಮುಂದಿನ ಮನೆಗೆ ಹೋಗಿ " ಮಗು ಹಸಿವೆಯಿಂದ ಅಳುತ್ತಿದೆ ಅದಕ್ಕೆ ಏನಾದರೂ ನೀಡಿ" ಎಂದ. ಅಲ್ಲೂ ಇದೇ ಬೈಗಳದ ಪುನರಾವರ್ತನೆ. ಆದರೂ ಸನ್ಯಾಸಿ ಎದೆಗುಂದಲಿಲ್ಲ ಆತನಿಗೆ ಭಗವಂತನ ಮೇಲೆ ಅಪಾರ ನಂಬಿಕೆ. ಹೀಗೆ ಸಾಗುತ್ತಾ ಸಾಗುತ್ತ ಆತ ಆ ಹಸುಗೂಸಿನ ತಾಯಿಯ ಮನೆಬಾಗಿಲಿಗೆ ಬಂದ ಮತ್ತು ಮಗುವಿನ ಹಸಿವೆಯ ಸುದ್ದಿ ಹೇಳಿ ಭಿಕ್ಷೆ ಕೇಳಿದ. ಈಗ ಅಚ್ಚರಿ ನಡೆಯಿತು. ಆ ತಾಯಿಯ ಮನೆಯವರು ಟಪ್ಪಂತ ಬಾಗಿಲು ಹಾಕಿದರೂ ಹಸುಗೂಸಿನ ತಾಯಿಗೆ ಮಾತ್ರಾ ಹಾಗೆ ಮಾಡಲಾಗಲಿಲ್ಲ. ಆಕೆ " ಸ್ವಾಮಿ ನನ್ನನ್ನು ಕ್ಷಮಿಸಿ" ಎಂದು ಸನ್ಯಾಸಿಯ ಕಾಲು ಹಿಡಿದು ಕೇಳಿಕೊಂಡು ನಂತರ ಮಗುವನ್ನು ಸನ್ಯಾಸಿಯಿಂದ ಎತ್ತಿಕೊಂಡು ಹಾಲುನೀಡಿ ಸಂತೈಸಿದಳು. ಮಗು ಅಳುವುದು ನಿಂತಮೇಲೆ ತಾಯಿ ಸನ್ಯಾಸಿಯ ಬಳಿ" ಸ್ವಾಮಿ ಈ ಮಗುವಿನ ತಂದೆ ನೀವಲ್ಲ , ಆದರೆ ಇದಕ್ಕೆ ಕಾರಣೀ ಕರ್ತನಾದವನ ಹೆಸರು ಹೇಳಿದರೆ ಆತನಿಗೆ ಘೋರ ಶಿಕ್ಷೆಯಾಗುತ್ತದೆಯೆಂಬ ಕಾರಣದಿಂದ ನಿಮ್ಮ ಹೆಸರು ಹೇಳಿದೆ, ನನ್ನ ತಪ್ಪನ್ನು ಮನ್ನಿಸಿ" ಎಂದು ಕಾಲಿಗೆ ಬಿದ್ದಳು. ಸನ್ಯಾಸಿ ಆಗಲೂ ಮುಗುಳ್ನಕ್ಕ ಅಷ್ಟೆ.

ಈ ಸುದ್ದಿ ಕ್ಷಣಮಾತ್ರದಲ್ಲಿ ಊರಿನಲ್ಲ್ಲೆಲ್ಲಾ ಹಬ್ಬಿತು . ತಕ್ಷಣ ಊರಿನ ಹಿರಿಕರಿಗೆ ತಮ್ಮ ತಪ್ಪಿನ ಅರಿವಾಗಿ ಸನ್ಯಾಸಿಯ ಕ್ಷಮೆಕೇಳಲು ಸ್ಥಳಕ್ಕೆ ಧಾವಿಸಿದರು. " ಅಯ್ಯಾ ಮಹಾತ್ಮರೆ ನೀವು ಈ ಮಗುವಿನ ಜನ್ಮಕ್ಕೆ ಕಾರಣ ಅಲ್ಲ ಅಂದಾದಮೇಲೆ ಆವಾಗ ಯಾಕೆ ಸುಮ್ಮನಿದ್ದೀರಿ ?. ನಮ್ಮಿಂದ ಅಪರಾಧವಾಯಿತು ಮನ್ನಿಸಿ " ಎಂದು ಕಾಲಿಗೆ ಬಿದ್ದರು. ಜನರೆಲ್ಲಾ " ಸನ್ಯಾಸಿ ಉಘೇ ಉಘೇ, ಇವರೇ ಮಹಾತ್ಮರು, ದೇವರು" ಎಂದೆಲ್ಲಾ ಜೈಕಾರ ಹಾಕತೊಡಗಿದರು. ಸನ್ಯಾಸಿ ಆವಾಗಲೂ ಮುಗಳ್ನಕ್ಕರು ಮತ್ತು ಹೇಳಿದರು. " ನೀವುಗಳು ಆವಾಗ ಆಪಾದನೆ ಹೊರಿಸಿದಾಗಲೂ ನನಗೆ ತಗುಲಲಿಲ್ಲ ಮತ್ತು ಈಗ ಜೈಕಾರ ಹಾಕಿದಾಗಲೂ ಅದು ತಗುಲಲಿಲ್ಲ"

ನೀತಿ: ರಗಳೆ ರಾಮಾಯಣದಿಂದ ದೂರವಿರಲು "ಐಪಿಲ್" ಬಳಸಿ.

Sunday, September 6, 2009

ಜೋಗದ ಜಲಪಾತ ಇಂದು


ಇದು ೬-೯-೦೯ ರ ಭಾನುವಾರದ ಜೋಗ ಜಲಪಾತ.ಸದ್ಯ ನೀರು ಇಷ್ಟಿದೆ. ಹೀಗೆ ಮಳೆ ಮುಂದುವರೆದರೆಇನ್ನು ೩-೪ ದಿನದಲ್ಲಿಲಿಂಗನಮಕ್ಕಿ ಜಲಾಶಯದ ಗೇಟ್ ಬಿಡುತ್ತಾರೆ. ಆಗ ನೀರೋ ನೀರು ಜೋಗ ಜಲಪಾತದಲ್ಲಿ. ಬಿಡುವು ಇದ್ದರೆ ಬರ್ರಲಾ....

Tuesday, August 25, 2009

ಪರ್ಜನ್ಯ ಎಂಬ ಕನ್ನಡ ಪ್ರಭ ದಲ್ಲಿ ಬಂದ ಕಥೆ

ಒಣಗಿ ನಿಂತ ಮರಗಳು, ಬಿರಿದ ನೆಲ, ಮೇವುಮೆಲಕು, ಕುಡಿಯಲು ನೀರು ಇಲ್ಲದೆ ಚಕ್ಕಳಹಿಡಿದ ಜಾನುವಾರುಗಳು, ಗಾಳಿ ಎಂದರೆ ಕೆಂಬಣ್ಣದ್ದ ಧೂಳಿನ ಅಬ್ಬರ ಎಂಬಂತಹ ವಿಪರೀತದ ವಾತಾವರಣ ಇಲ್ಲದಿದ್ದರೂ ಆಷಾಢ ಶುರುವಾಗಿದ್ದರೂ ಹದದ ಮಳೆ ಬಂದಿರಲಿಲ್ಲ. ಮಳೆಯ ಅಬ್ಬರಕ್ಕೆ ಕೆಸರು ನೀರಿನಲ್ಲಿ ಕೊಚ್ಚಿಹೋಗಿ ಮೂಡುಗಾಳಿ ಬೀಸಿ ಮರಗಿಡಗಳು ತೂಗಿ ಭೂಮಿ ಬಿರಿದು ಜುಳುಜುಳು ಅಂತ ಪಳಪಳ ಹೊಳೆಯುವ ಬೆಟ್ಟುಜಲ ಏಳಬೇಕಾದ ದಿನಗಳು ಬಂದಿದ್ದರೂ ಇನ್ನೂ ನೆಲದಲ್ಲಿ ಮೊದಲನೇ ಹಂತದ ಕೆಸರೂ ಆಗಿರಲಿಲ್ಲ. ಜಿರ್ರೋ ಅನ್ನುವ ಜೀರುಂಡೆ, ವಟರ್ರ್ ವಟರ್ರ್ ಎನ್ನುವ ಮಳೆಕಪ್ಪೆ ಗಂಟಲು ಬಿರಿಯುವಂತೆ ಕೂಗಿ ಇನ್ನೇನು ಕ್ಷಣಗಳಲ್ಲಿ ಮಳೆ ಬಂದೇ ಬಿಟ್ಟಿತು , ಮಳೆಗಾಲ ಹಿಡಿದೇ ಬಿಟ್ಟಿತು ಎಂದು ಜನ ಆಕಾಶ ನೋಡಿ ಅಂದಾಜಿಸುವಷ್ಟರಲ್ಲಿ ಮೋಡಗಳು ಬಂದಂತೆ ಮುಂದೋಡುತ್ತಿದ್ದವು. ಮಳೆ ಮಳೆ ಎಂದು ಹಲುಬುವ ಮಲೆನಾಡಿನ ಕತೆಯೇ ಇದಾದಮೇಲೆ ಇನ್ನು ಬಯಲುಸೀಮೆಯದು ಎಂಬ ಪ್ರಶ್ನೆ ಜನರನ್ನು ಕಾಡುತ್ತಿತ್ತು. ಅಡಿಕೆ ತೋಟದವರು ಮಳೆ ಬರಲಿ ಬಿಡಲಿ ತಮಗೇನು ನಾಟದು ಎಂಬ ನಿರುಮ್ಮಳ ಭಾವನೆಯಲ್ಲಿ ಇದ್ದಂತೆ ತೋರುತ್ತಿದ್ದರೂ ಒಳಗೊಳಗೆ ಮುಂದಿನ ದಿನಗಳಲ್ಲಿ ಬರುವ ಪವರ್ ಕಟ್ ಮುಂತಾದ
ಚಿಂತೆಗಳಲ್ಲಿ ಮುಳುಗಿದ್ದರು. ಆದರೆ ಭತ್ತದ ಬೇಸಾಯ ಮಾಡುವ ಮಂದಿಗೆ ದಿಕ್ಕೆ ತೋಚದಂತಾಗಿತ್ತು. ಬೇಸಾಯದ ಕೆಲಸ ಶುರುಮಾಡಲಾಗದೆ ಕಂಗಾಲಾಗಿದ್ದರು. ಹಿತ್ಲಗದ್ದೆಯ ಅಂಗಡಿ ಕಟ್ಟೆ, ದೇವಸ್ಥಾನದ ಚಿಟ್ಟೆಗಳಲ್ಲಿ ಮಳೆಯದ್ದೇ ಸುದ್ದಿ. ರಸ್ತೆಯಮೇಲೆ ಎದುರುಬದುರಾದ ಜನರು ತಾಸರ್ದ ತಾಸು, ಬಾರದ ಮಳೆಯ, ಬರುವ ಬರಗಾಲದ ಅವ್ಯಕ್ತ ಭಯದ ಮಾತುಗಳ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರ ಮಟ್ಟದಲ್ಲಿ ತೋಚಿದ ತೀರ್ಮಾನ ಹೇಳಿ ಆಕಾಶ ನೋಡುತ್ತಿದ್ದರು. " ಏನಾದರೂ ಮಾಡಬೇಕು, ಏನಾದರೂ ಮಾಡಬೇಕು" ಎಂಬ ಆಲೋಚನೆ ಎಲ್ಲರಲ್ಲಿಯೂ ಇತ್ತಾದರೂ ಇಂತದ್ದನ್ನೇ ಮಾಡಿದರೆ ಮಳೆ ಬರುತ್ತದೆ, ಹಾಗೆ ಮಾಡಬೇಕು ಎಂದು ಮುನ್ನುಗ್ಗುವವರಿರಲಿಲ್ಲ.
*******
ಹಿತ್ಲಗದ್ದೆಯ ಭರಮ ಮಳೆಬರುವಂತೆ ತನ್ನಿಂದ ಏನಾದರೂ ಮಾಡಲು ಸಾದ್ಯವಾ? ಎಂಬ ಪ್ರಶ್ನೆಯನ್ನು ತನ್ನಷ್ಟಕ್ಕೆ ಕೇಳಿಕೊಂಡು ಶಾಸ್ತ್ರಕ್ಕೆಂಬಂತೆ ಒಂದು ರೊಟ್ಟಿ ತಿಂದು ಬೆಳಿಗ್ಗೆ ಮನೆಬಿಟ್ಟಿದ್ದ. "ಇನ್ನು ಎಂಟು ದಿನ ಮಳೆ ಬರ್ಲಿಲ್ಲಾ ಅಂದ್ರೆ, ಹೊಟ್ಟೆಮೇಲೆ ತಣ್ಣೀರು ಬಟ್ಟೆ ಹಾಕ್ಕೋಳ್ಳೋಕು ನೀರು ಇರದಿಲ್ಲ" ಎಂದು ಹೆಂಡತಿ ಹೇಳಿದ ಮಾತು ಭರಮನ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು. ಅದು ತೀರಾ ಅತಿರೇಕದ ಮಾತು ಅಂತ ಭರಮನಿಗೆ ಒಮ್ಮೆ ಅನ್ನಿಸಿದರೂ ಗದ್ದೆಬೇಸಾಯದ ಕತೆ ನೆನಪಾದಕೂಡಲೆ ಹೆಂಡತಿಯ ಮಾತು ತೀರಾ ತಳ್ಳಿಹಾಕಲಾಗದು ಎಂಬ ಮನಸ್ಥಿತಿಗೆ ಬಂದು ತಲುಪಿದ್ದ. "ಅದು ಯಾಕೆ ಹಿಂಗಾತು?, ಆದ್ರಮಳೆ ಬ್ಯಾಡ, ಅಣ್ಣನ ಮಳೆಯೂ ಹೋಗ್ಲಿ, ತಮ್ಮನ ಮಳೆಯಾದ್ರೂ ಹೊಡೀಬೇಕಾಗಿತ್ತು. ಇಷ್ಟೊತ್ತಿಗೆ ಭತ್ತದ ಸಸಿ ನೀರುಬಿಟ್ಟೆದ್ದು ಆಲ ಹೊಡೆಯಲು ಬರಬೇಕಾಗಿತ್ತು, ನೀರು ಬಿಟ್ಟೇಳೋದು ಆಮೇಲಾತು, ಭೂಮೀನೇ ಬಿಡ್ಲಾರೆ ಅಂತ ಎಲ್ಲಾ ಬೀಜಾನೂ ಸುಟ್ಟು ಸತ್ತೋತು, ಬೋರ್ ಹಾಕ್ಸಿಕೊಂಡರ ಕತೆನೂ ಅಷ್ಟೆಯಾ, ಬುಸ್ ಬುಸ್ ಅಂತ ಗಾಳಿ ಬಿಟ್ರೆ ನೀರೇ ಇಲ್ಲ, ಭೂಮಿ ಬಿರಿಯುವಂತಹ ಮಳೆ ಬರಬೇಕಾದ ಮಲೆನಾಡಿನಲ್ಲಿ ಹಿಂಗಾದ್ರೆ ಇನ್ನು ಬಯಲುಸೀಮೆ ಗತಿ ಏನು?, ಈ ದಿವಸದಲ್ಲಿ ಹನಿಯೂ ಇಲ್ಲಾ ಅಂತಾದ್ರೆ ಬರದ ಕತೆ ಕೇಳಿದ್ದು ಸುಳ್ಳು, ಬಂದಿದ್ದು ನಿಜ ಅನ್ನೋದರಲ್ಲಿ ಯಾವ ಅನುಮಾನನೂ ಇಲ್ಲ, ಘೋರಾಂಡ್ಲ ಬರಾ ಬರೋದು ಖಂಡಿತಾನಾ? " ಅಂತ ಆಲೋಚಿಸುತ್ತಾ ಗದ್ದೆ ಬದುವಿನ ಹಾದಿ ಹಿಡಿದವನಿಗೆ ದೂರದಲ್ಲಿ ಪೂಜಾರಿ ತಾಮ್ರದ ಕೊಡದಲ್ಲಿ ನೀರು ತುಂಬಿ ಮಣ ಮಣ ಮಂತ್ರ ಪಠಿಸುತ್ತಾ ದೇವಸ್ಥಾನದತ್ತ ಹೋಗುತ್ತಿದ್ದುದು ಕಾಣಿಸಿ "ಮನದ ಕಳವಳ ನೀಗಲು ಇವರೇ ಸರಿ" ಅಂಬೋ ತೀರ್ಮಾನ ಮಾಡಿ ಅತ್ತ ದಾರಿ ಬದಲಿಸಿದ.
ಭರಮ ಗದ್ದೆಬದುವಿನ ಸುತ್ತು ದಾರಿ ಬಳಸಿ ದೇವಸ್ಥಾನದ ಹಜಾರ ತಲುಪುವಷ್ಟರಲ್ಲಿ ಅರ್ಚಕರು ಆಗಲೇ ಗರ್ಭಗುಡಿ ಪ್ರವೇಶಿಸಿಯಾಗಿತ್ತು.
"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: sಸೂಕ್ತವಾಚ: ಪೃಥಿವಿಮಾತರ್ಮಾಮಾ ಹಿಗುಂಸಿ ರ್ಮಧುಮನಿಷ್ಯೇ........." ಅರ್ಚಕರು ಭರಮನಿಗೆ ಅರ್ಥವಾಗದ ಭಾಷೆಯಲ್ಲಿ ಅಸ್ಕಲಿತ ಮಂತ್ರಪಠಣ ಮುಂದುವರೆಸಿದ್ದರು. ಭರಮನಿಗೆ ಅರ್ಚಕರ ಸ್ವರ ಕಿವಿಗೆ ಇಂಪುನೀಡುತ್ತಿದ್ದರೂ ಬರದ ಚಿಂತೆಯಿಂದಾಗಿ ಮನಸ್ಸಿನಲ್ಲಿ ಭಯದ ಭಾವ ಆವರಿಸಿದ್ದರಿಂದ ಭಕ್ತಿ ಹುಟ್ಟಲಿಲ್ಲ, ಮನಸ್ಸಿಗೆ ಹಿತವಾದ ಅನುಭವವನ್ನೂ ನೀಡಲಿಲ್ಲ. ಇರುವ ಎರಡು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯದಿದ್ದರೆ ಮುಂದಿನ ವರ್ಷದ್ದು ಇರಲಿ ಕೆಲವೇ ದಿನಗಳಲ್ಲಿ ಉಪವಾಸ ಬೀಳಬೇಕಾದ ಪರಿಸ್ಥಿತಿ. ಮಳೆ ಬಂದು ಹೂಟಿ ಮಾಡಿ ಬತ್ತ ಮೊಳಕೆಯಾಯಿತು ಎಂದರೆ ಹೊಟ್ಟೆಯೊಳಗಿನಿಂದ ಧೈರ್ಯ ತನ್ನಿಂದತಾನೆ ಹುಟ್ಟುತ್ತದೆ. ಈ ವರ್ಷ ಮೂವತ್ತು ಚೀಲ ಬತ್ತ ಬರುತ್ತದೆ, ಮಾರುಕಟ್ಟೆ ದರ ಇಂತಿಷ್ಟು, ಒಟ್ಟು ರೊಕ್ಕ ಅಷ್ಟಾಗುತ್ತದೆ ಎಂಬ ಲೆಕ್ಕಾಚಾರವನ್ನು ಗುಣಿಸಿ ಬಾಗಿಸಿ ಸಾಲ ಹುಟ್ಟಿಸಬಹುದು. ಆದರೆ ಮಳೆಯೇ ಬರದಿದ್ದರೆ ಆಸೆ ಕಮರುತ್ತದೆ, ಸಾಲ ನೀಡುವವರ ಬಳಿ ಹೇಳಲು ಲೆಕ್ಕ ಇಲ್ಲ, ಅವರಾದರೂ ಕೊಟ್ಟಾರು ಆದರೆ ಸಾಲದ ಊಟ ಮಾಡಲು ಧೈರ್ಯ ಹುಟ್ಟದು ಎಂಬಂತ ಜೀವನದ ವಿಷಯಗಳು ಭರಮನ ಕೊರೆಯುತ್ತಿದ್ದುದರಿಂದ ಮಳೆಯ ಬಗ್ಗೆ ಖಚಿತವಾದ ನಂಬಿಕೆ ಹುಟ್ಟುವಂತಹ ಮಾತುಗಳನ್ನು ಮನ ಬಯಸಿದ್ದರಿಂದ ಅರ್ಚಕರ ಪೂಜೆ ನೆಮ್ಮದಿ ತರುತ್ತಿರಲಿಲ್ಲ.
"ಏನೋ ಭರಮ , ಬೆಳಿಗ್ಗೆ ಮುಂಚೆ ದೇವಸ್ಥಾನಕ್ಕೆ ಬಂದ್ಯಲ?. ಏನ್ಸಮಾಚಾರ?." ಹಳೆ ಹೂವನ್ನು ಹೊರಗೆಸೆಯಲು ಪೂಜೆಯ ಮಧ್ಯೆ ಬಿಡುವು ಮಾಡಿಕೊಂಡು ಬಂದ ಅರ್ಚಕರು ಕೇಳಿದರು.
"ಅಯ್ಯೋ ನಮಸ್ಕಾರ ಸ್ವಾಮಿ, ಅದೇ ಮಳೆ ವಿಚಾರ ಕೇಳಾನ ಅಂತ ಬಂದೆ" ಗಡಿಬಿಡಿಯಿಂದ ಹೇಳಿದ ಭರಮ.
"ಕಾಲ ಕೆಟ್ಟೋಯ್ತು ಭರಮ, ಶಿವ ಏನುತಾನೆ ಮಾಡ್ಯಾನು? ಜನರಿಗೆ ದೇವರುದಿಂಡಿರು ಎಂಬ ಭಯ ಭಕ್ತಿ ಹೋಗಿದೆ, ಊರಿನಲ್ಲಿ ಬರೀ ಪಾರ್‍ಟಿ ಪಂಗಡ ಅಂತ ರಾಜಕೀಯವೇ ಹೊರತು, ಪೂಜೆ ಪುನಸ್ಕಾರ ಹೋಮ ಹವನ ಅಂತ ಯಾರೂ ತಲೆಕೆಡಿಸಿಕೊಳ್ಳೋರಿಲ್ಲ.ಹಾಗಾಗಿ ಶಿವ ಮುನಿದಿದಾನೆ"
"ಆಗಿದ್ದು ಆತಲ, ಈಗೇನು ಮಾಡ್ಬೇಕು?, ಏನು ಮಾಡಿದ್ರೆ ಮಳೆ ಬತ್ತದೆ , ಅದನ್ನ ಹೇಳಿ ಸ್ವಾಮೀ..."
"ನೋಡು ಭರಮ ಇಷ್ಟು ದೊಡ್ದ ಊರ್ನಾಗೆ ಯಾರೂ ನನ್ನ ಬಂದು ಕೇಳ್ಳಿಲ್ಲ, ಎಲ್ರೂ ತಮ್ಮನ್ನೆ ಬುದ್ದಿವಂತರು ಅಂದ ಅಂದ್ಕೊಂಡಿದಾರೆ, ನೀನಾರು ಬಂದ್ಯಲ, ಅದೇ ಸಮಾಧಾನ, ಈಗ ಮಳೆ ಮುಂಚಿನ ಹಾಗೆ ಹೊಯ್ಯಬೇಕು ಅಂದ್ರೆ ಮಾಡ್ಬೇಕಾದ್ದು ಪರ್ಜನ್ಯ, ಅದರ ಮೂಲಕ ಶಿವನನ್ನ ಮೆಚ್ಚಿಸಬಹುದು. ಮಳೆ ಬೆಳೆ ಎಲ್ಲಾ ತನ್ನಿಂದ ತಾನೆ ಸರಿ ಆಗುತ್ತೆ"
"ನೀವು ಅಡ್ದಗೊಡೆ ಮೇಲೆ ದೀಪ ಇಟ್ಟಂಗೆ ಹೇಳಿದ್ರೆ ಹೆಂಗೆ? ಪಜ್ರನ್ಯ ಅಂದ್ರೆ ಹ್ಯಾಂಗೆ ಮಾಡಾದು?"
"ಅಯ್ಯೋ ಅದು ಪಜ್ರನ್ಯ ಅಲ್ವೋ ಪರ್ಜನ್ಯ ಅಂತ, ಈಶ್ವರನ ಗರ್ಭಗುಡಿಯ ದ್ವಾರಕ್ಕೆ ಬಾಳೆಕಂಬ ಅಡ್ಡ ಇಟ್ಟು, ಪುಷ್ಕರಣಿಯಿಂದ ಊರೋರೆಲ್ಲಾ ಒಂದೊಂದೇ ಕೊಡ ನೀರು ತಂದು ತುಂಬಿಸಬೇಕು. ಈಶ್ವರ ಲಿಂಗ ನೀರಲ್ಲಿ ಮುಳುಗೋವರೆಗೂ ನೀರುಹೊಯ್ತಾನೆ ಇರಬೇಕು, ಹತ್ತಾರು ಪುರೋಹಿತರು ಶತರುದ್ರ ಹೇಳ್ಬೇಕು, ಲಿಂಗ ನೀರಿನಲ್ಲಿ ಮುಳುಗಿ ಅರ್ದ ಘಂಟೆಯೊಳಗೆ ಧೋ ಅಂತ ಮಳೆ ಬರುತ್ತೆ, ಭಕ್ತರ ಪ್ರಾರ್ಥನೆಗೆ ಈಶ್ವರ ಒಲಿದೇ ಒಲಿತಾನೆ. ಭಕ್ತಿಯಿಂದ ಒಬ್ಬರೇ ಪ್ರಾರ್ಥಿಸಿದರೆ ಆಗುತ್ತೇ ಇನ್ನೂ ಊರಿಗೆ ಊರೇ ಸೇರಿ ಪ್ರಾರ್ಥಿಸಿದರೆ ಮಳೆ ಬರದೇ ಇರುತ್ತಾ?. ಹಾಗೆ ಮಳೆ ಬರ್ಲಿಲ್ಲ ಅಂದ್ರೆ ನಾನು ಉಟ್ಟಬಟ್ಟೇಲಿ ಊರುಬಿಡ್ತೀನಿ"
ಅರ್ಚಕರ ಮಾತುಗಳನ್ನು ಕೇಳಿದ ಭರಮನ ಮೈಮೇಲೆ ಜುಂ ಅಂತ ಮುಳ್ಳುಗಳೆದ್ದವು, ಆಹಾ ಇಂತಹಾ ಸುಲಲಿತ ಮಾರ್ಗ ಇರಬೇಕಾದರೆ ಸುಮ್ನೆ ಯಾಕೆ ಜನ ಎಲ್ಲಾ ತಲೆ ಇಲ್ದೆ ಆಡ್ತಾವೆ ಅಂತ ಅನ್ನಿಸಿ "ಸ್ವಾಮಿ, ಹಂಗೆ ಆಗ್ಲಿ ನಾಳೇನೆ ಆ ಕೆಲ್ಸ ಮಾಡೋಣ" ಎಂದು ಮಳೆ ಬಂದೇ ಬಿಡ್ತು ಅನ್ನೋ ಭಾವದಲ್ಲಿ ಹೇಳಿದ ಭರಮ.
" ಅಯ್ಯೋ ಅದು ನೀನು ತಿಳಿದುಕೊಂಡಷ್ಟು ಸುಲಭ ಅಲ್ಲ ಭರಮ, ದೇವಸ್ಥಾನದ ಆಡಳಿತ ಕಮಿಟಿಯವರು ಒಪ್ಪಬೇಕು, ಜಾತಿ ಜನಿವಾರ ಅಂತ ಬೇಧಭಾವ ಇಲ್ಲದೆ ಊರಿನ ಪ್ರತಿಯೊಬ್ಬರೂ ಪರ್ಜನ್ಯಕ್ಕೆ ನೀರು ಹೊರಲು ಬರಬೇಕು, ಶತರುದ್ರ ಹೇಳಲು ಪುರೋಹಿತರಿಗೆ ದಕ್ಷಿಣೆ ಕೋಡಬೇಕು.." ಅರ್ಚಕರು ತಮ್ಮ ಬಾಯಿಂದ ಅಚಾನಕ್ಕಾಗಿ ಹೊರಟ " ಮಳೆ ಬಾರದಿದ್ರೆ ಉಟ್ಟಬಟ್ಟೇಲಿ ಊರುಬಿಡ್ತೀನಿ" ಎಂಬ ಮಾತು ಸ್ವಲ್ಪ ಹೆಚ್ಚಿನದು ಅಂತ ಅನಿಸಿ ನಡದೇಬಿಡಬಹುದಾದ ಪರ್ಜನ್ಯದ ಬಗ್ಗೆ ನಕಾರಾತ್ಮಕ ದನಿ ಹೊರಡಿಸಿದರು.
"ಅಯ್ಯ, ಅದ್ಯಾವ ಮಹಾ ಸ್ವಾಮಿ, ಮಳೆ ಇಲ್ಲ ಅಂತ ಜನ ಕಂಗೆಟ್ಟಿದಾರೆ, ಎಲ್ರೂ ಸೇರ್ತಾರೆ, ದೇವಸ್ಥಾನದ ಅಧ್ಯಕ್ಷರೂ ಒಪ್ಪೇ ಒಪ್ತಾರೆ." ದೃಢಮನಸ್ಸಿನಿಂದ ಭರಮ ಹೇಳಿದ.
"ಕಷ್ಟ, ದೇವಸ್ಥಾನದ ಅಧ್ಯಕ್ಷರಾದ ಸತೀಶಪ್ಪನೋರು, ಪುಟ್ಟೇಗೌಡರು, ಎಲ್ಲ ನೆಪಕ್ಕೆ ಮಾತ್ರಾ ಹುದ್ದೆಲಿದಾರೆ, ಅವ್ರ ಕೆಲ್ಸ ಕಾಣಿಕೆ ದಬ್ಬಿ ದುಡ್ಡು ಎಣಿಸೋದಷ್ಟೆ, ಅವರ ಹಿಂದೆ ಇರೋರು ಜಯರಾಮ ಹೆಗಡೆಯವರು, ಅವರು ನಾಸ್ತಿಕರು, ಇಂತಹ ನಂಬಿಕೆಯಿಂದ ಊರಿಗೆ ಒಳ್ಳೇದು ಆಗುತ್ತೇ ಅಂದ್ರೂ ಅವ್ರು ಒಪ್ಪೋದಿಲ್ಲ,ಊರಲ್ಲಿ ಎರಡು ಪಾರ್ಟಿ ಇರೋದ್ರಿಂದ ಇದು ಅಸಾದ್ಯ" ಅರ್ಚಕರು ದೇವಸ್ಥಾನದ ಹಿಂದಿರುವ ರಾಜಕೀಯದ ಎಳೆ ಬಿಚ್ಚಿಡತೊಡಗಿದರು.
ಆದರೆ ಭರಮ ಪರ್ಜನ್ಯದಿಂದ ಮಳೆ ಬಂದೇ ಬರುತ್ತದೆ ಎಂಬ ಅಚಲನಂಬಿಕೆಗೆ ಇಳಿದುಬಿಟ್ಟಿದ್ದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ. "ಒಡಿಯಾ ನಾನು ಊರಿನ ಜನರನ್ನು ಒಟ್ಟು ಸೇರಿಸ್ತೀನಿ, ಒಟ್ನಲ್ಲಿ ಶಿವನ ಕೋಪ ಮಾಯವಾಗಿ ಮಳೆ ಬಂದ್ರಾತು, ನೀವು ನಿಮ್ಕಡೆಯಿಂದ ತಯಾರಿ ಮಾಡಿ"
"ಆಯ್ತು ಅಡ್ಡಿಲ್ಲ ಇವತ್ತು ಸಂಜೆ ಊರಿನ ಸಮಸ್ತ ಜನರ ಸಭೆ ಸೇರ್ಸಿ ತೀರ್ಮಾನ ಮಾಡು, ಯಾಕಂದ್ರೆ ಒಂದಿಷ್ಟು ವಂತಿಗೇನೂ ಬೇಕು ಅದ್ಕೆ, ಮತೆ ಒಂದು ಮಾತು ನೆನಪಿಡು ಊರಿನ ಪ್ರತೀ ಮನೆಯವರೂ ಬಂದು ಈಶ್ವರನಿಗೆ ನೀರು ಹಾಕಿದಾಗ ಮಾತ್ರಾ ಮಳೆ ಬರುವುದು " ತಾವು ಹಿಂದೆ ಆಡಿದ್ದ ಮಾತುಗಳು ಅತಿಯಾಯಿತೇನೋ ಅಂತ ಅನಿಸಿದರೂ ಶಿವ ಕಾಯುತ್ತಾನೆ ಎಂಬ ಭರವಸೆಯೊಂದಿಗೆ ಪೂಜೆ ಮುಂದುವರೆಸಲು ದೇವಸ್ಥಾನದೊಳಕ್ಕೆ ನಡೆದರು.

********
ಬರದ ಸಮಸ್ಯೆ ಇಷ್ಟು ಸುಲಭವಾಗಿ ಪರಿಹಾರವಾಯಿತಲ್ಲ ಎಂದು ಅತ್ಯುತ್ಸಾಹದಲ್ಲಿ ದೇವಸ್ಥಾನದಿಂದ ಹೊರಟ ಭರಮ, ಪರ್ಜನ್ಯ ನಡೆಸಬೇಕಾದ ವಿಧಿವಿಧಾನ , ಹಣದ ವ್ಯವಹಾರ ಮುಂತಾದವುಗಳ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ಸಂಜೆ ಊರಿನ ಜನರ ಸಭೆ ಸೇರಿಸುವ ಸಲುವಾಗಿ ದೇವಸ್ಥಾನದ ಅಧ್ಯಕ್ಷರಾದ ಸತೀಶಪ್ಪನವರ ಭೇಟಿ ಮಾಡಿದ. ಅವರು "ಇವೆಲ್ಲಾ ಕಾರ್ಯದರ್ಶಿ ಪುಟ್ಟೇಗೌಡರ ಕೆಲಸ ಅದು ನನಗೆ ಗೊತ್ತಿಲ್ಲ" ಎಂದು ಕೈತಿರುಚಿದ್ದರಿಂದ ಪುಟ್ಟೇಗೌಡರ ಮನೆಯತ್ತ ತೆರಳಿದ. ಪುಟ್ಟೇ ಗೌಡರು ಭರಮನ ಮಾತು ಕೇಳಿ ಅದ್ಯಾರಿಗೋ ಪೋನ್ ಮಾಡಿ ನಂತರ "ಹಾಗೆಲ್ಲಾ ಸಭೆ ಕರೆಯಲು ನಮಗೆ ಬೈಲಾದಲ್ಲಿ ಅಧಿಕಾರ ಇಲ್ಲ" ಎಂದು ಮುಖದ ಮೇಲೆ ಹೊಡೆದಂತೆ ಹೇಳಿದ್ದರಿಂದ ಸ್ವಲ್ಪ ಹತಾಶ ಭಾವನೆ ಹೊಂದಿದನಾದರೂ ಬಾರದ ಮಳೆಯಬಗ್ಗೆ, ಜನರ ಬವಣೆ ಬಗ್ಗೆ ವಿವರಿಸಿ ಸಭೆ ಕರೆಯುವಂತೆ ಮನವಿ ಮಾಡಿದ. ಆದರೆ ಪುಟ್ಟೇಗೌಡರು ತಮ್ಮ ಬೈಲಾದ ನಿಯಮಕ್ಕೆ ಅಂಟಿಕೊಂಡಿದ್ದರಿಂದ ಫಲಕಾಣದೆ ಊರಿನ ಸಮಸ್ತ ಜನರ ಸಭೆ ಕರೆಯಲು ಬೇರೆದಾರಿ ಹುಡುಕಬೇಕು ಎಂಬ ಲೆಕ್ಕಾಚಾರದೊಂದಿಗೆ ಮನೆಯ ದಾರಿ ಹಿಡಿದವನಿಗೆ ಸೀಮೆಯ ಗುರಿಕ್ಕಾರ ರಮಾನಂದ ಹೆಗಡೆಯವರ ನೆನಪಾಗಿ ಅವರ ಮನೆಯತ್ತ ಹೋಗಿ ಪರಿಸ್ಥಿತಿ ವಿವರಿಸಿದ.
"ಹೌದು ಭರಮ ನಿನ್ನ ಯೋಜನೆ ಯೋಚನೆ ಸರಿಯಾಗಿದೆ, ಊರಿನ ಜನರ ಸಭೆ ಸೇರಿಸಲು , ದೇವಸ್ಥಾನದ ಕಮಿಟಿಯ ಅಪ್ಪಣೆ ಏನೂ ಬೇಕಾಗಿಲ್ಲ, ನೀನು ಮಾಡ ಹೊರಟಿರುವುದು ಲೋಕಕಲ್ಯಾಣ ಕಾರ್ಯ, ಮಳೆ ಬಂದರೆ ಬೆಳೆ, ಬೆಳೆ ಇದ್ದರೆ ಜೀವನ, ಜೀವನ ಇದ್ದರೆ ದೇವರು ದೇವಸ್ಥಾನ, ಹಾಗಾಗಿ ಇಂದು ಸಂಜೆ ದೇವಸ್ಥಾನಕ್ಕೆ ಬರುವಂತೆ ಊರಿನ ಎಲ್ಲಾ ಜನರಿಗೂ ನೀನೇ ಹೇಳು. ಇಂತಹ ಒಳ್ಳೆಯ ಕೆಲಸಕ್ಕೆ ಕಾನೂನು ಕಟ್ಟಳೆ, ರಾಜಕೀಯ ಎಲ್ಲಾ ಮಾಡಬಾರದು ಅಂತ ಅವರಿಗೆ ಗೊತ್ತಿಲ್ಲ. ಎಲ್ಲರಿಗೂ ಮಳೆ ಬೇಕು ಅದಕ್ಕೆ ಪರ್ಜನ್ಯವೇ ದಾರಿ " ಎಂದರು.
ಭರಮನಿಗೆ ನೂರಾನೆಯ ಬಲ ಬಂದಂತಾಯಿತು ಊರಿನ ಪ್ರತೀ ಮನೆಗೂ ಹೋಗಿ ಸಂಜೆ "ಪರ್ಜನ್ಯ" ದ ಸಭೆಗೆ ಬರುವಂತೆ ಮನವಿ ಮಾಡಿ ಮನೆ ಸೇರಿದ.
***********
ಸಂಜೆ ಪರ್ಜನ್ಯದ ಸಭೆ ಸೇರಿತು. ಊರಿನ ಬಹುಪಾಲು ಜನರು ಬಂದಿದ್ದರು. ದೇವಸ್ಥಾನದ ಅಧ್ಯಕ್ಷರು ಕಾರ್ಯದರ್ಶಿಗಳೂ ಸಭೆಗೆ ಬಂದಿದ್ದರಿಂದ ಭರಮ ಸಂತುಷ್ಟಗೊಂಡಿದ್ದ. ಅರ್ಚಕರು ಪರ್ಜನ್ಯ ಹೇಗೆ ಮಾಡಬೇಕು? ಅದರಿಂದ ಏನಾಗುತ್ತದೆ? ಈಶ್ವರ ಹೇಗೆ ಸಂಪ್ರೀತನಾಗುತ್ತಾನೆ? ಎಂಬಂತಹ ಧಾರ್ಮಿಕ ವಿಚಾರಗಳನ್ನು ಶ್ಲೋಕ ಸಮೇತ ವಿಷದಪಡಿದರು. ಸಾಮೂಹಿಕ ಪ್ರಾರ್ಥನೆಯಿಂದ ದೇವ ಕರಗಿ ನೀರಾಗುವ ಪರಿ ವಿವರಿಸಿದರು. ಬರದ ಛಾಯೆಯಿಂದ, ಬಾರದ ಮಳೆಯಿಂದ ನೊಂದಿದ್ದ ಬೇಸಾಯಗಾರರು ತನ್ಮಯತೆಯಿಂದ ತಲೆ ಆಡಿಸುತ್ತಿದ್ದರು. ಒಟ್ಟಿನಲ್ಲಿ ಪೂಜೆಯಿಂದಾದರೂ ಸರಿ ಪರ್ಜನ್ಯದಿಂದಾದರೂ ಸರಿ ಮಳೆಬಂದರೆ ಸಾಕು ಎಂಬ ಭಾವದ ಜನಸಾಮಾನ್ಯರು ಮನ:ಪೂರ್ವಕವಾಗಿ ಪರ್ಜನ್ಯಕ್ಕೆ ಮಾರನೇ ದಿನವನ್ನು ನಿಗದಿಪಡಿಸಿ ಹಣಕಾಸು ದೇಣಿಗೆ ನೀಡುವುದಕ್ಕೂ ಒಪ್ಪಿಗೆ ನೀಡಿ ದೇವಸ್ಥಾನದ ಅರ್ಚಕರಿಗೆ ಧಾರ್ಮಿಕ ಉಸ್ತುವಾರಿಯನ್ನೂ ಭರಮನಿಗೆ ಹಣಕಾಸಿನ ಉಸ್ತುವಾರಿಯನ್ನೂ ನೀಡಿದರು. ಇನ್ನೇನು ಸಭೆ ಮುಗಿಯಿತು ನಾಳೆ ಪರ್ಜನ್ಯ ಖಂಡಿತ ಎಂಬ ತೀರ್ಮಾನ ಹೊರಬೀಳುವಷ್ಟರಲ್ಲಿ ಜಯರಾಮ ಹೆಗಡೆಯವರ ಪ್ರವೇಶವಾಯಿತು
"ಇದು ಪ್ರಜಾಪ್ರಭುತ್ವ ವಿರೋಧಿ ನಿಲುವು, ಇದು ಹಣ ಮಾಡುವ ತಂತ್ರ, ಇಲ್ಲಿ ಬೈಲಾವನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ, ಹಾಗಾಗಿ ನಾಳೆ ಪರ್ಜನ್ಯ ದೇವಸ್ಥಾನದಲ್ಲಿ ನಡೆಸಲಾಗದು" ಎಂದು ಸಭೆಯನ್ನುದ್ದೇಶಿಸಿ ಹೇಳಿದರು. ಅಲ್ಲಿಯವರೆಗೆ ಎಲ್ಲವುದಕ್ಕೂ ಒಪ್ಪಿಗೆ ನೀಡಿದ್ದ ದೇವಸ್ಥಾನದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಕುಳಿತಲ್ಲಿಂದಲೇ ಸಣ್ಣ ರಾಗ ಆರಂಭಿಸಿದರು. ಸಭೆಯಲ್ಲಿ ಪಿಸುಮಾತುಗಳು ಹರಿದಾಡಲಾರಂಬಿಸಿತು. ನೋಡನೋಡುತ್ತಿದ್ದಂತೆ ಮಾತಿಗೆ ಮಾತು ಬೆಳೆಯತೊಡಗಿತು. "ದೇವಸ್ಥಾನ ಕಟ್ಟುವಾಗ ಎರಡು ವರ್ಷ ಜನರಲ್ ಬಾಡಿ ಕರೆಯಲಿಲ್ಲ" ಯಾರೋ ಕೂಗಿದರು. "ಈಗ ನೀವು ಎಂಟು ವರ್ಷ ಜನರಲ್ ಬಾಡಿ ಕರೆಯದೇ ದುಡ್ಡು ತಿಂತಾ ಇದೀರಿ, ಇದು ಪ್ರಜಾಪ್ರಭುತ್ವ ವಿರೋಧಿ ಅಲ್ಲವೇ". ಮತ್ಯಾರೋ ಇನ್ನೂ ದೊಡ್ಡ ದನಿಯಲ್ಲಿ ಕೂಗಿದರು. ಮಳೆ ಬೆಳೆ ಪರ್ಜನ್ಯ ಎಲ್ಲಾ ಮರೆತು ಪರಸ್ಪರ ದೋಷಾರೋಪಣೆಯಲ್ಲಿ ಜನರು ಮುಳುಗೇಳತೊಡಗಿದರು.
ಭರಮ ಎಲ್ಲರ ಬಳಿ ಕೈಮುಗಿಯುತ್ತಾ "ಅವೆಲ್ಲಾ ಇದಕ್ಕೆ ಸಂಬಂಧ ಇಲ್ಲ ಕೈಬಿಡಿ ನಮಗೆ ಈಗ ಮಳೆ ಬೇಕು ಅದಕ್ಕೆ ಪರ್ಜನ್ಯ ಬೇಕು" ಎಂದು ಎಲ್ಲರ ಬಳಿ ಕೇಳಿಕೊಳ್ಳತೊಡಗಿದ. ಆದರೆ ಹಲವಾರು ಜನ ಅವನ ಮಾತನ್ನು ಕೇಳುವ ಹಂತ ದಾಟಿದ್ದರು. ಕೆಲವರು ಕೇಳಿದರು ಆದರೆ ಅವರು ಗೌಣವಾಗಿದ್ದರು.ಪರ್ಜನ್ಯದ ಸಭೆ ಗೊಂದಲದಗೂಡಾಗಿ ಆಲದಮರದ ಕಾಗೆಗಳಹಿಂಡಿನಲ್ಲಿ ಹೊರಡುವ ಶಬ್ದದಂತೆ ಕಲರವದಿಂದ ತುಂಬಿಹೋಯಿತು. ಅರ್ಚಕರು ತಾನು ಭರಮನಿಗೆ ಇವೆಲ್ಲಾ ಆಗದು ಅಂತ ಮೊದಲೇ ಹೇಳಿದ್ದೆ ಆದರೆ ಅಂತ ಅವ ಕೇಳಲಿಲ್ಲ ಎಂದು ಅವರಿವರ ಬಳಿ ತಮ್ಮ ಮಾತು ಸತ್ಯವಾಗಿ ಗೆದ್ದ ಭಾವದಲ್ಲಿ ಹೇಳತೊಡಗಿದ್ದರು.
"ಇಲ್ಲಿಯವರೆಗಿನ ಎಲ್ಲಾ ತೀರ್ಮಾನಗಳೂ ಜನರ ಸಹಮತ ಇಲ್ಲದ್ದರಿಂದ ತಿರಸ್ಕಾರವಾಗಿದೆ ಎಂದು ಜಯರಾಮಹೆಗಡೆಯವರು ದೊಡ್ದದಾಗಿ ಕೂಗಿಹೇಳಿ ಊರನ್ನು ಗೆದ್ದ ವಿಜಯೋತ್ಸಾಹದಲ್ಲಿ ಹೊರನಡೆದರು.
**********

ಸಭೆಯಿಂದ ಜನರೆಲ್ಲಾ ಹೊರನಡೆಯುತ್ತಿದ್ದಂತೆ ಭರಮ ಹತಾಶನಾಗಿ ಕೈಮುಗಿದು ನಿಂತಿದ್ದವನು ಒಮ್ಮೇಲೆ ಕಣ್ಮುಚ್ಚಿಕೊಂಡು "ಹೋ" ಎಂದು ಕೂಗಿದ. ಹಾಗೆ ಕೂಗಿದ ಮರುಕ್ಷಣ ದೇವಸ್ಥಾನದ ಹಿಂದಿರುವ ಕುಂಬ್ರಿಗುಡ್ಡದತ್ತ ಓಡತೊಡಗಿದ. ಜನರೆಲ್ಲಾ ಒಮ್ಮೆ ಕಕ್ಕಾಬಿಕ್ಕಿಯಾಗಿ ಭರಮನತ್ತ ನೋಡಿ "ತಾನೇನೋ ಕಡಿತೇನೆ ಅಂತ ಹೊರಟ, ಈಗ ಆಯಿತಾ ಮಂಗಳಾರತಿ" ಎಂದು ಮಾತನಾಡಿಕೊಂಡರು. ಆದರೆ ಭರಮ ಜನರ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಭರಮ ಅದ್ಯಾವುದೋ ಮಹತ್ತರ ಗುರಿಯನ್ನು ಸಾಧಿಸುವವನಂತೆ ಬಿರಬಿರನೆ ಕುಂಬ್ರಿಗುಡ್ಡ ಏರಿ ಗುಡ್ಡದ ನೆತ್ತಿಯಲ್ಲಿ ಪೂರ್ವದತ್ತ ಮುಖ ಮಾಡಿ ಕೈಮುಗಿದು ನಿಂತು. " ಹೇ ಭಗವಂತ ನೀನು ಯಾರು? ಎಲ್ಲಿದ್ದೀ ಹೇಗಿದ್ದೀ ನಿನ್ನ ಹೆಸರೇನು ಅಂತ ನನಗೆ ಗೊತ್ತಿಲ್ಲ, ನನಗೆ ಮಂತ್ರ ತಂತ್ರ ತಿಳಿಯದು, ನಾನೊಬ್ಬ ಬಡವ, ನನಗೆ ಮಳೆ ಬೇಕು, ನಾನು ನನ್ನ ಹೆಂಡತಿ ಮಕ್ಕಳು ಹಾಗೂ ನನ್ನ ಜಾನುವಾರುಗಳು ಮಳೆಯಿಲ್ಲದೆ ಬೆಳೆಯಿಲ್ಲದೆ ನೀರಿಲ್ಲದೆ ಬದುಕಲಾರೆವು, ನೀನು ನನಗೋಸ್ಕರ ಕಣ್ಣುಬಿಡು" ಎಂದು ಆಕಾಶದತ್ತ ಮುಖಮಾಡಿ ಕೂಗಿ ಹೇಳತೊಡಗಿದ. ಪರ್ಜನ್ಯದ ಸಭೆ ನಡೆಯದ್ದಕ್ಕೋ, ಮಳೆಬಾರದ್ದಕ್ಕೋ ಅಥವಾ ಪ್ರಾರ್ಥನೆಯ ಭಾವಕ್ಕೋ ಭರಮನ ಕಣ್ಣಂಚಿಲ್ಲಿ ನೀರು ಉಕ್ಕಿಬರತೊಡಗಿತು. ಆಗ ಇದ್ದಕ್ಕಿಂದಂತೆ ಪಡುವಣದಲ್ಲಿ ಕಪ್ಪನೆಯ ಮೊಡಗಳು ಒಂದರ ಹಿಂದೆ ಒಂದಂತೆ ಮೇಲೇರಿಬರತೊಡಗಿತು. ಮರುಕ್ಷಣ ಬಾನಲ್ಲಿ ಅಬ್ಬರದ ಗುಡುಗು ಆರಂಭವಾಯಿತು . ಭರಮನ ಕಣ್ಣಲ್ಲಿ ತುಂಬಿದ್ದ ನೀರನ್ನು ಮಳೆನೀರು ಕೊಚ್ಚಿಕೊಂಡು ಹೋಗಲಾರಂಬಿಸಿತು.
ಗುಡುಗಿನ ಶಬ್ದಕ್ಕೆ ಮಳೆಹನಿಗಳ ತಂಪಿಗೆ ಊರಿನ ಸಮಸ್ತ ಜನರು ಭರಮ ಏರಿದ್ದ ಕುಂಬ್ರಿ ಗುಡ್ಡದತ್ತ ಅಚ್ಚರಿಯಿಂದ ನೋಡತೊಡಗಿದರು. ಭರಮ ಗತ್ತಿನಲ್ಲಿ, ದೇವರನ್ನು ಗೆದ್ದು ಸ್ವಂತ ಪರ್ಜನ್ಯದಿಂದ ಮಳೆ ತಂದ ಭಾವದೊಂದಿಗೆ ಕಣ್ಬಿಟ್ಟ.

ನೋಡಿ ಹೀಗೆಲ್ಲ ide

1. Life isn't fair, but it's still good.
2. When in doubt, just take the next small step.
3. Life is too short to waste time hating anyone.
4. Your job won't take care of you when you are sick. Your friends and parents will. Stay in touch.
5. Pay off your credit cards every month.
6. You don't have to win every argument. Agree to disagree.
7. Cry with someone. It's more healing than crying alone.
8. It's OK to get angry with God. He can take it.
9. Save for retirement starting with your first pay check.
10. When it comes to chocolate, resistance is futile.
11. Make peace with your past so it won't screw up the present.
12. It's OK to let your children see you cry.
13. Don't compare your life to others. You have no idea what their journey is all about.
14. If a relationship has to be a secret, you shouldn't be in it.
15. Everything can change in the blink of an eye. But don't worry; God never blinks.
16. Take a deep breath. It calms the mind.
17. Get rid of anything that isn't useful, beautiful or joyful.
18. Whatever doesn't kill you really does make you stronger.
19. It's never too late to have a happy childhood. But the second one is up to you and no one else.
20. When it comes to going after what you love in life, don't take no for an answer.
21. Burn the candles, use the nice sheets, wear the fancy lingerie. Don't save it for a special occasion. Today is special.
22. Over prepare, then go with the flow.
23. Be eccentric now. Don't wait for old age to wear purple.
24. The most important sex organ is the brain.
25. No one is in charge of your happiness but you.
26. Frame every so-called disaster with these words: 'In five years, will this matter?'
27. Always choose life.
28. Forgive everyone everything.
29. What other people think of you is none of your business.
30. Time heals almost everything. Give time time.
31. However good or bad a situation is, it will change.
32. Don't take yourself so seriously. No one else does.
33. Believe in miracles.
34. God loves you because of who God is, not because of anything you did or didn't do.
35. Don't audit life. Show up and make the most of it now.
36. Growing old beats the alternative -- dying young.
37. Your children get only one childhood.
38. All that truly matters in the end is that you loved.
39. Get outside every day. Miracles are waiting everywhere.
40. If we all threw our problems in a pile and saw everyone else's, we'd grab ours back.
41. Envy is a waste of time. You already have all you need.
42. The best is yet to come.
43. No matter how you feel, get up, dress up and show up.
44. Yield.
45. Life isn't tied with a bow, but it's still a gift."

Its estimated 93% won't forward this. If you are one of the 7% who will, forward this with the title '7%'. I'm in the 7%. Remember that I will always share my spoon with you!

Wednesday, July 15, 2009

ಎಣಿಸಿ ಹೇಳಿ.

ಈ ಕೆಳಗಿನ ವಾಕ್ಯದಲ್ಲಿ ಎಷ್ಟು " ಎಫ್" ಇದೆ ಎಂಬುದನ್ನು ಎಣಿಸಿ ಹೇಳಿ.
ಷರತ್ತುಗಳು. ಒಂದೇ ಬಾರಿ ಓದಬೇಕು ಹಾಗೂ ಎಣಿಸಬೇಕು ಮತ್ತು ಹೇಳಬೇಕು. ಎರಡನೇ ಬಾರಿ ಓದಿದರೆ ಅಡ್ಡಿಯಿಲ್ಲ ಆದರೆ ಆವಾಗ ಎಷ್ಟು ಎಫ್ ಇದೆ ಅಂಬುದನ್ನು ಹಾಗೆಯೇ ಹೇಳಬೇಕು. ನೋಡಿ ಎಣಿಸಿ. ಸರಿ ಉತ್ತರಕ್ಕೆ ಬಹುಮಾನ................!
FINISHED FILES ARE THE RE
SULT OF YEARS OF SCIENTI
FIC STUDY COMBINED WITH
THE EXPERIENCE OF YEARS...


Sunday, July 12, 2009

"ಹೌದಾಯಿಕ್ಕಲ, ಹಲ್ಲುನೋವಿಗೆಲ್ಲ ಬಾವಿ ಹಾರನ ಅಂತ ......




"ಮೊನ್ನೆಯಷ್ಟೆ ಭಾನುವಾರ ಕಳೆದಿತ್ತು ಅಬ್ಬಾ ಅದೆಷ್ಟು ಬೇಗ ಮತ್ತೊಂದು ಭಾನುವಾರ, ದಿನ ಅದೆಷ್ಟು ಬೇಗ ಓಡುತ್ತಿದೆ" ಎನ್ನುವ ಮಾತು ಯಾರ ಬಾಯಿಂದ ಬಂತೋ ಅವರು ಸುಖದಿಂದ ಇದ್ದಾರೆ ಅಂತ ಅರ್ಥ. ಯಾವುದು ವೇಗದಿಂದ ಬೇಗನೆ ಕಳೆಯುತ್ತಿದೆ ಎಂಬ ಭಾವನೆ ಹುಟ್ಟಿಸುತ್ತದೆಯೋ ಅದು ಸುಖ.

ಅದೇ ಹಲ್ಲುನೋವು ಬಂದ ರಾತ್ರಿಯನ್ನು ನೆನಪಿಸಿಕೊಳ್ಳಿ ಒಂದು ರಾತ್ರಿ ಎಂದರೆ ಶುರುವಾಗಿ ಸುಮಾರು ವರ್ಷಗಳೇ ಸಂದವೇನೋ ಎಂಬ ಭಾವ ಹುಟ್ಟಿಸುತ್ತದೆ. ಇಡೀ ಪ್ರಪಂಚ ನಿದ್ರೆಗೆ ಜಾರಿರುತ್ತದೆ, ನೀರವ ವಾತವರಣ, ಆದರೆ ನಾವು ದಿಂಬಿಗೆ ತಲೆ ಕೊಟ್ಟರೆ ಮೂಲೆಯಲ್ಲಿರುವ ದವಡೆ ಹಲ್ಲು ತಣತಣ ಅಂತ ಶುರುವಾಗಿ ಚುಳ್ ಅಂತ ಬೆಚ್ಚಿಬೀಳಿಸುತ್ತದೆ. ಅಮ್ಮಾ ಯಾವುದನ್ನಾದರೂ ತಡೆದುಕೊಳ್ಳಬಹುದು ಈ ಹಲ್ಲುನೋವನ್ನೊಂದನ್ನು ಬಿಟ್ಟು ಅಂತ ಅನ್ನಿಸಿದರೂ ಹಲ್ಲೇನು? ಯಾವ ನೋವು ಬಂದಾಗಲೂ ಮತ್ತೊಂದರತ್ತ ಬೆಟ್ಟು ಸಹಜ ಅಷ್ಟೆ.

ಹಲ್ಲೆಂಬ ಹಲ್ಲಿನೊಳಗಿನ ಗುಳು ಬೃಹದಾಕಾರದ ಬಾವಿಯಂತೆ ಭಾಸವಾಗುತ್ತದೆ. ಕನ್ನಡಿ ಹಿಡಿದು ನೋಡಿಕೊಂದರೆ ಛೀ ಇದೇ ಕ್ಷುಲ್ಲಕ ಹಲ್ಲೇ ಇಷ್ಟೊಂದು ನೋವು ನೀಡುತ್ತಿರುವುದು ಅಂತ ಅನ್ನಿಸಿದರೂ ಕನ್ನಡಿ ಪಕ್ಕಕ್ಕಿಟ್ಟ ಮರುಕ್ಷಣ ಅಮ್ಮಾ ಎಂದು ಅಂಗೈ ತನ್ನಿಂದತಾನೆ ಕೆನ್ನೆಯತ್ತ ಓಡುತ್ತದೆ. ಮನಸ್ಸು ಹಲ್ಲುನೋವನ್ನೊಂದು ಬಿಟ್ಟು ಮತ್ತಿನ್ನೇನೂ ಯೋಚಿಸಲು ಅಸಮರ್ಥವಾಗಿರುತ್ತದೆ. ಎಂತಹ ಸಿನೆಮಾ ಇರಲಿ ಮೈನವಿರೇಳಿಸುವ ಪುಸ್ತಕ ಇರಲಿ ಕಡುಬು ಕಜ್ಜಾಯವಿರಲಿ, ಸಾವಿರದ ನೋಟಿನ ಕಂತೆಯಿರಲಿ, ತ್ರಿಪುರ ಸುಂದರಿಯಿರಲಿ, ಮನ್ಮಥ ಎದ್ದು ಬಂದಿರಲಿ. ಹೇ ಭಗವಂತಾ ಈ ಹಲ್ಲು ನೋವಿನಿಂದ ಮುಕ್ತಿಗೊಳಿಸು ಎಂಬ ಒಂದೇ ಒಂದು ವಿನಂತಿ. ಇಷ್ಟೊತ್ತಿಗೆ ಸುಮಾರು ಬೆಳಕಾಗಿರಬಹುದಾ? ಎಂದು ಗಂಟೆ ನೋಡಿದರೆ ಇನ್ನೂ ಹತ್ತೂ ಕಾಲು. ಮಾಮೂಲಿ ದಿನಗಳಾದರೆ ಹೀಗೆ ಹಾಸಿಗೆಗೆ ತಲೆಯೂರಿದರೆ ಕಣ್ಣು ಬಿಟ್ಟಾಗ ಚುಮುಚುಮು ಬೆಳಗು ಆದರೆ ಇಂದು ಮಾತ್ರಾ ಊಹ್ಞೂ ಬೆಳಗೇ ಆಗದು ಎಂಬ ಭಾವನೆ, ಹಲ್ಲಿನ ಸಂದಿಯಲ್ಲಿ ತಣತಣ ತಡೆಯಲಾರದೇ ಬಾವಿ ಹಾರಿಬಿಡೋಣ ಎಂಬಷ್ಟು ಯೋಚನೆ ಬರುತ್ತದೆ. ಒಮ್ಮೆ ಹಾಗೆ ಆಯಿತು

ರಾತ್ರಿಯೆಲ್ಲಾ ಹಲ್ಲುನೋವು ಸಿಕ್ಕಾಪಟ್ಟೆ ಇತ್ತು. ಬೆಳಿಗ್ಗೆ ನಮ್ಮ ಪಕ್ಕದ ಮನೆ ಗೀತಕ್ಕ ಬಂದಿದ್ದಳು "ಏನೋ ಮುಖ ಎಲ್ಲಾ ಒಂಥರಾ ಇದೆ" ಅಂದಳು. "ರಾತ್ರಿ ಎಲ್ಲಾ ಹಲ್ಲು ನೋವಿತ್ತು , ಅದೆಷ್ಟು ನೋವಿತ್ತು ಅಂದರೆ ತಡೆಯಲಾರದೆ ಬಾವಿ ಹಾರಿ ಪ್ರಾಣ ಕಳೆದುಕೊಂಡು ಬಿಡೋಣ ಅಂತ ಅನ್ನಿಸ್ತು" ಅಂತ ಅಂದೆ "ಹೌದಾಯಿಕ್ಕಲ, ಹಲ್ಲುನೋವಿಗೆಲ್ಲ ಬಾವಿ ಹಾರನ ಅಂತ ಕಂಡ್ರೆ ಇನ್ನು ಮಿಕ್ಕಿದ್ದಕ್ಕೆಲ್ಲಾ ಹ್ಯಾಂಗೋ" ಅಂತ ನಕ್ಕು ಹೊರಟು ಹೋದಳು. ಆನಂತರದ ದಿನಗಳಲ್ಲಿ ನಾನು ಅದನ್ನ ಮರೆತಿದ್ದೆ. ಮತ್ತೊಂದು ದಿವಸ ಹಾಗೆಯೇ ಬಂದ ಗೀತಕ್ಕ" ರಾಘು ಹೌದೋ ಅವತ್ತು ನೀನು ಹೇಳಿದ್ದು, ಬಾವಿಗೆ ಹಾರಿಬಿಡಣ ಅಂತ ಕಾಂಬ್ದು ಸುಳ್ಳಲ್ಲ ಮಾರಾಯ" ಅಂತ ಅಲವತ್ತುಕೊಂಡಳು. ಹಾಗಿರುತ್ತೇ ಹಲ್ಲುನೋವಿನ ಮಹಿಮೆ.

ಹುಳುಕು ಹಲ್ಲನ್ನು ಕಿತ್ತು ಎಸೆದಾಗ ಮತ್ತೆ ಆಸೆ ಚಿಗುರುತ್ತದೆ, ಸಿಟ್ಟು ಸಡಾಕು ಮರಳುತ್ತದೆ, ಉಪದೇಶ ಉಪದ್ವಾಪ ಅರಳುತ್ತದೆ. ಪ್ರೀತಿ ಪ್ರೇಮ ರಾಗ ಭಯ ಭಕ್ತಿ ದ್ವೇಷ ಎಲ್ಲಾ ಮಾಮೂಲಿ, ಅಯ್ಯ ದಿನಗಳು ಎಷ್ಟು ಬೇಗ ಕಳೆಯುತ್ತಿದೆ ಎಂಬ ಡೈಲಾಗೂ.....

Friday, July 10, 2009

"ತಬಕಲು ತಗ ಬಾರಾ"



"ತಬಕಲು ತಗ ಬಾರಾ" ಅಂತ ಅಂದ್ರೆ ಈಗಿನ ತಲೆ ಮಾರಿನವರಿಗೆ ಅರ್ಥವೇ ಆಗಲಿಕ್ಕಿಲ್ಲ. ಹೌದು ಹಾಗಂದರೆ ಏನು? ಅಂದಿರಾ. ಎಲೆಅಡಿಕೆ ಹರಿವಾಣ ಕಣ್ರಿ. ಅದೇ ಕವಳದ ಸಿಬಿಲು. ಎಲೆ ಅಡಿಕೆ ಅಂದ್ರೆ ಗೊತ್ತಾಯಿತು ಅದೇನು ಹರಿವಾಣ? ಅದೆಂತದು ಕವಳದ ಸಿಬಿಲು?. ಎಂಬ ಪ್ರಶ್ನೆ ನಿಮ್ಮಿಂದ ಅಂತ ನನಗೆ ಗೊತ್ತು. ಹರಿವಾಣ ಅಂದ್ರೆ ಅಚ್ಚ ಕನ್ನಡ...! ದಲ್ಲಿ ಪ್ಲೇಟ್ ಅಂತ....!


"ಓಹೋ ಪ್ಲೇಟಾ ... ಹಾಗೆ ಹೇಳಿ ಮತ್ತೆ ಅದೇನೋ ಹರಿವಾಣ ತಬಕಲು ಅಂತೆಲ್ಲಾ ಹೇಳಿದರೆ ನಮಗೆ ಹೇಗೆ ತಿಳಿಯಬೇಕು?. ಆಮೇಲೆ ಕವಳದ ಸಿಬಿಲು.. ಅಂದ್ರೆ ? ಎಂದು ನೀವು ಉದ್ಗಾರ ತೆಗಯಬಹುದು. ಅದೂ ಅದೆ. ಅವೆಲ್ಲಾ ಆಡು ಸ್ಥಳೀಯ ಭಾಷೆಗಳು. ಇರಲಿಬಿಡಿ ಈಗ ಅರ್ಥ ಆಯಿತಲ್ಲ ಮುಂದೆ ಹೋಗೋಣ.


ನಮ್ಮ ಕೃಷಿಕರ ಮನೆಗಳಲ್ಲಿ ಜಗುಲಿ( ಎದುರಿನ ಹಜಾರ) ಯ ಮೇಜಿನ ಮೇಲೆ ಹೀಗೊಂದು ಬಟ್ಟಲು ಎಲೆ ಅಡಿಕೆ ಸುಣ್ಣ ಗಳಿಂದ ಸಾಲಂಕೃತಗೊಂಡು ತಣ್ಣಗೆ ಕುಳಿತಿರುತ್ತದೆ. ಈಗೆಲ್ಲಾ ಸ್ಟೀಲ್ ಪ್ಲೇಟ್ ಸಾಮಾನ್ಯವಾಗಿದೆ. ಆದರೆ ಸುಮಾರು ಮೂವತ್ತು ವರ್ಷಗಳ ಹಿಂದೆ ಈ ತಬಕಲು ಎನ್ನುವ ಬಟ್ಟಲು ಒಂದು ಘನಗಂಭೀರತೆಯನ್ನು ಹೊಂದಿರುತ್ತಿತ್ತು. ಮರದಿಂದ ಮಾಡಿದ ಸಾಲಂಕೃತ ಬಟ್ಟಲು, ಹಿತ್ತಾಳೆಯ ಅಂದದ ಬಟ್ಟಲು. ಪಂಚಲೋಹದ ಬಟ್ಟಲು ತಾಮ್ರದ ಕವಳದ ಸಿಬ್ಲು. ಹೀಗೆ ಅವರವರ ಮಟ್ಟಕ್ಕೆ ತಕ್ಕುದಾದ ನಾನಾ ತರಹದ ಬಟ್ಟಲು ಕಾಣಸಿಗುತ್ತಿತ್ತು. ಈಗಲೂ ಹಲವಾರು ಮನೆಗಳಲ್ಲಿ ಹಲವಾರು ತರಹದ ಹರಿವಾಣಗಳು ಸಿಗುತ್ತವೆ. ಆದರೆ ಮೊದಲಿನಷ್ಟು ವಿವಿಧತೆ ಕಡಿಮೆಯಾಗಿದೆ.


ನನ್ನ ಆಪ್ತರಾದ ಪೆಜತ್ತಾಯರ ಬೆಂಗಳೂರಿನ ಮನೆಯಲ್ಲಿದ್ದ ಅಂತಹ ಒಂದು ಪಂಚಲೋಹದ ಎಲೆಅಡಿಕೆ ಹರಿವಾಣವನ್ನು ನಮ್ಮ ಮನೆಗೆ ತಂದು ತಂದೆಯವರಿಗೆ ಕೊಟ್ಟೆ. ಪೆಜತ್ತಾಯರು ಅಡಿಕೆ ಬೆಳೆಗಾರರು ಆದರೆ ಎಲೆಅಡಿಕೆ ಹಾಕರು ಹಾಗಾಗಿ ಅದು ಅಲ್ಲಿ ತನ್ನ ಕುಲಕಸುಬನ್ನು ಮಾಡದೆ ಮೂಲೆಯಲ್ಲಿ ಕುಳಿತಿತ್ತು. ಪೆಜತ್ತಾಯರ ಕೊಡುಗೆ ಈಗ ನಮ್ಮ ಮನೆಯಲ್ಲಿ ತನ್ನ ಡ್ಯೂಟಿ ಮಾಡುತ್ತಿದೆ. ಆಮೆಯ ರೂಪದ ಈ ಪಂಚಲೋಹದ ತಬಕಲು ತೂಕವೂ ಇರುವುದರಿಂದ ಹಾಗೂ ನೋಡಲೂ ಅಪರೂಪದ ರಚನೆ ಇರುವುದರಿಂದ ನಮ್ಮ ಮನೆಗೆ ಬರುವ ಅತಿಥಿಗಳ ಕಣ್ಣು ಒಮ್ಮೆ ತಬಕಲಿನತ್ತ ಹೋಗಿ ಅಬ್ಬಾ...! ಎಂಬ ಉದ್ಗಾರವನ್ನು ಹೊರಡಿಸುತ್ತಿದೆ. ಹಾಗೆಯೇ ಅವರ ಬಾಯನ್ನೂ ಕೆಂಪಗಾಗಿಸುತ್ತಿದೆ.


ಒಮ್ಮೆ ಬರ್ರಲಾ... ತಬಕು ನೋಡಿಕೊಂಡು ಎಲೆ ಅಡಿಕೆಹಾಕಿ ಹೋಗುವಿರಂತೆ.


ಹಾಗೆಯೇ ಇನ್ನು ಮಲೆನಾಡಿನ ಮನೆಗಳಿಗೆ ಹೋದಾಗ ಒಮ್ಮೆ ಮೇಜಿನಮೇಲೆ ಕುಳಿತಿರುವ ತಬಕಿನತ್ತ ಕಣ್ಣಾಡಿಸಿ ಎಂತೆಂತಹ ಹರಿವಾಣಗಳು ನಿಮ್ಮನ್ನು ಅಚ್ಚರಿಗೆ ತಳ್ಳಿಬಿಡಬಹುದು.

Tuesday, July 7, 2009

ಅನ್ನದಾತೋ ಸುಖೀ ಭವ


ವರುಣ ತಡವಾಗಿಬಂದ ಹಾಗಾಗಿ ನಮ್ಮೂರ ಧೀರೆಯರು ಈ ವರ್ಷ ತಡವಾಗಿ ಕೆಸರಿಗೆ ಇಳಿದಿದ್ದಾರೆ. ಕೈಕೆಸರಾದರೆ ಬಾಯಿ ಮೊಸರಂತೆ ಎಂಬ ಗಾದೆ ಸತ್ಯ ಇರಬಹುದು. ಆದರೆ ಇವರಿಗೆ ಅದು ಅನ್ವಯ ಆಗೋದು ಯಾವಾಗ ಅಂಬ ಪ್ರಶ್ನೆ ನನಗೆ ಯಾವಾಗಲೂ ಕಾಡುತ್ತಿರುತ್ತದೆ. ವೈಟ್ ಕಾಲರ್ ಜನ ಎಂಬ ಮನುಷ್ಯರಿಗೆ ಮೊಸರುಣಿಸಲು ಜೀವಮಾನಪೂರ್ತಿ ಕೈಕೆಸರು ಮಾಡಿಕೊಳ್ಳುವ ಈ ರೈತರುಗಳು ಮಹಾನ್ ಎಂಬುದು ನನ್ನ ವೈಯಕ್ತಿಕ ಅಭಿಮತ. ಬಹುಪಾಲು ಜನರು ಒಂದೇ ಒಂದು ಹನಿ ಕಾಲಿನ ಮೇಲೆ ಬಿದ್ದರೂ ಡೆಟ್ಟಾಲ್ ಹಾಕಿ ಗಂಟೆಗಟ್ಟಲೆ ತೊಳೆದು ಅದೇನೋ ಮಹಾನ್ ರೋಗ ಬಂದುಬಿಟ್ಟಿತೇನೋ ಎಂದು ಹಲುಬುವ ಮಂದಿಯ ಹೊಟ್ಟೆ ತಂಪಾಗಿರಿಸಲು ಇವರು ಕೆಸರಿನಲ್ಲಿ ವರ್ಷಾನುಗಟ್ಟಲೆಯಿಂದ ಮುಳುಗೇಳುತ್ತಿದ್ದಾರೆ. ದೇಶದ ಆಹಾರ ಕಣಜಕ್ಕೆ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಕಾಲವಾಗುತ್ತಿದ್ದಾರೆ. ಅವರುಗಳಿಗೆ ನಮ್ಮ ಶುಭ ಹಾರೈಕೆ ಬೇಕು. ನಾವಿಲ್ಲದಿದ್ದರೆ ಅವರು ಇರಬಲ್ಲರು ಆದರೆ ಅವರಿಲ್ಲದಿದ್ದರೆ ನಮ್ಮನ್ನು ಊಹಿಸಿಕೊಳ್ಳಲ್ಲೂ ಸಾದ್ಯವಾಗದು.
ಅನ್ನದಾತೋ ಸುಖೀ ಭವ. ಅಂತ ಒಂದು ಸಣ್ಣ ಹಾರೈಕೆಯನ್ನಾದರೂ ಹಾಕುವ ತಾಳ್ಮೆ ಸಮಯ ನಮ್ಮದಾಗಲಿ.

Wednesday, July 1, 2009

ಕೃಷಿಕ ಬಾಂಧವರೇ ಟ್ರೈ ಮಾಡಿ ನೋಡಿ

ವೆನಿಲಾ ನಿಮಗೆ ನೆನಪಿರಬಹುದು. ನನ್ನದು ಇಷ್ಟು ವೆನಿಲಾ ಬಳ್ಳಿಯಿದೆ ಅಂದರೆ ಅದಕ್ಕೊಂದು ಲೆವಲ್ ಇತ್ತು. ಅದರ ಪಾಲಿನೇಷನ್, ಅದರ ಹಬ್ಬುವಿಕೆ ಅದರ ಕೃಷಿ ಅಬ್ಬಬ್ಬಾ ಅದೇನು ಡೈಲಾಗ್ ಅದೇನು ಸ್ಟೈಲ್ . ಕೆಜಿಗೆ ಬರೊಬ್ಬರಿ ನಾಲ್ಕುಸಾವಿರ ಮುಟ್ಟಿದಾಗಲಂತೂ ಕೇಳಬಾರದು ಬಿಡಿ. ಇರಲಿ ಅವೆಲ್ಲಾಕನಸಿನಂತೆ ಕರಗಿ ಹೋಯಿತು. ಆನಂತರ ಅಂತಹ ದುಡ್ಡಿನ ಥೈಲಿಯ ಬೆಳೆ ಬರಲಿಲ್ಲ. ಮುಂದೆ ಗೊತ್ತಿಲ್ಲ.
ಆದರೆ ಸತ್ಯವೋ ಸುಳ್ಳೋ ಗೊತ್ತಿಲ್ಲ ಬೀಜಕ್ಕೆ ಕೆಜಿಗೆ ಲಕ್ಷ ರೂಪಾಯಿಯಂತೆ ಅಕೋ ಅಲ್ಲೊಬ್ಬರು ಬೆಳೆಯುತ್ತಾರಂತೆ ಅದಕ್ಕೂ ಹ್ಯಾಂಡ್ ಪಾಲಿನೇಶನ್ ಆಗಬೇಕಂತೆ ಎಂಬ ಅಂತಕಂತೆಗಳ ಸುದ್ದಿಯೊಂದು ಆರ್ಕಿಡ್ ಜಾತಿಗೆ ಸೇರಿದ ಮತ್ತೊಂದು ಗಿಡದ ಸುತ್ತ ಸುದ್ದಿ ಹರಡುತ್ತಿದೆ.
ಚೌತಿ ಹಬ್ಬದಲ್ಲಿ ಗಣೇಶನ ಮುಂದೆ ಪಳೆಯುಳಿಗೆ(ಸರಿಯಾದ ಶಬ್ಧ ಗೊತ್ತಿಲ್ಲ) ಅಂತ ದೇವರ ಮುಂದೆ ಒಂದಿಷ್ಟು ತರಕಾರಿ ಹಾಗೂ ಕಾಡ ಹಣ್ಣುಗಳು ಹಾಗೂ ಹೂವು ಕಟ್ಟುವ ಸಂಪ್ರದಾಯ ನಮ್ಮ ಮಲೆನಾಡಿನಲ್ಲಿದೆ. ಅದಕ್ಕೆ ಗೌರಿ ಹೂವು ಎಂಬ ಅತ್ಯಂತ ಸುಂದರ ಕೆಂಪು ಅರಿಶಿನ ಬಣ್ಣದ ಹೂವನ್ನು ಕಾಡಿನಿಂದ ತಂದು ಬಳಸುತ್ತಾರೆ. ಈಗ ಸುದ್ಧಿ ಹಬ್ಬುತ್ತಿರುವುದು ಆ ಹೂವಿನ ಸುತ್ತ. ನಾನೂ ಆ ಹೂವಿನ ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಂಡು (ಅದರ ಇಂಗ್ಲೀಷ್ ಹೆಸರು ಗೊತ್ತಿಲ್ಲ) ನೆಟ್ ನಲ್ಲಿ ಗೂಗ್ಲಿಸಿದೆ. ಸಿಕ್ಕಿತು ಸಿಕ್ಕಿಯೇ ಬಿಟ್ಟಿತು. ಇಂಗ್ಲೀಷ್ ನಲ್ಲಿ ಅದಕ್ಕೆ Gloriosa superba ಎನ್ನುತ್ತಾರೆ. ಹೌದು ಅದರ ಬೀಜದ ಕುರಿತು ಏನೇನೋ ನಡೆಯುತ್ತಿದೆ. ಆದರೆ ಇನ್ನೂ ದರ ಮಾತ್ರಾ ಸಿಕ್ಕಿಲ್ಲ ನನಗೆ. ಹಾಗಂತ ಇದೇನೂ ಸಂಪೂರ್ಣ ಹಣ ಲೂಟ್ ಮಾಡುವ ಕೃಷಿ ಅಂತೇನೂ ತಿಳಿಯಬೇಕಾಗಿಲ್ಲ. ವಿವರ ಮಾರ್ಕೆಟ್ ಇನ್ನಷ್ಟು ತಿಳಿಯಬೇಕಿದೆ.
ಹೀಗೆ ಆಸಕ್ತರು ಒಂದಿಷ್ಟು ಮಾಹಿತಿ ಸಂಗ್ರಹಿಸಿ ತಿಳಿಯುವಂತಾಗಲಿ ಎಂದು ಹೇಳುತ್ತಿದ್ದೇನಷ್ಟೆ.
Gloriosa superba ಗೂಗ್ಲ್ ಮಾಡಿದರೆ ಹತ್ತಾರು ವೆಬ್ ಸೈಟ್ ಓಪನ್ ಆಗುತ್ತದೆ. ಮುಂದಿನದು ಶಿವನೇ ಬಲ್ಲ. ಟ್ರೈ ಮಾಡಿ ನೋಡಿ ಕೃಷಿಕ ಬಾಂಧವರೇ. ಹೆಚ್ಚಿನ ಮಾಹಿತಿ ಸಿಕ್ಕರೆ ನನಗೂ ತಿಳಿಸಿ.

Tuesday, June 30, 2009

ಲವ್ ಮತ್ತು ಮ್ಯಾರೇಜ್


(ನೆಟ್ ನಿಂದ ಕದ್ದ ಬರಹ)

A student asks a teacher, "What is love?"
The teacher said, "in order to answer your question, go to the wheat field and choose the biggest wheat and come back.
But the rule is: you can go through them only once and cannot turn back to pick."
The student went to the field, go thru first row, he saw one big wheat, but he wonders....may be there is a bigger one later.
Then he saw another bigger one... But may be there is an even bigger one waiting for him.
Later, when he finished more than half of the wheat field, he start to realize that the wheat is not as big as the previous one he saw, he know he has missed the biggest one, and he regretted.
So, he ended up went back to the teacher with empty hand.
The teacher told him, "...this is love... You keep looking for a better one, but when later you realise, you have already miss the person...."

"What is marriage then?" the student asked.
The teacher said, "in order to answer your question, go to the corn field and choose the biggest corn and come back. But the rule is: you can go through them only once and cannot turn back to pick."
The student went to the corn field, this time he is careful not to repeat the previous mistake, when he reach the middle of the field, he has picked one medium corn that he feel satisfy, and come back to the teacher.
The teacher told him, "this time you bring back a corn.... You look for one that is just nice, and you have faith and believe this is the best one you get.... This is marriage."

ಗೊತ್ತಾ ನಿಮಗೆ..? ಸಿಟ್ಟೊಂದು ಶಕ್ತಿ.

ನಿಮ್ಮಷ್ಟಕ್ಕೆ ನೀವು ಒಂಟಿಯಾಗಿ ಕುಳಿತುಕೊಂಡಾಗ ಇಲ್ಲವೆ ರಾತ್ರಿ ನಿದ್ರೆಗೆ ಮುನ್ನ, ಬಸ್ಸಿನಲ್ಲಿ ಪ್ರಯಾಣಿಸುವಾಗ ಒಟ್ಟಿನಲ್ಲಿ ಯಾವಾಗಲಾದರೂ ಆದೀತು ನಿಮ್ಮನ್ನೆ ನೀವು ಬಯ್ದುಕೊಳ್ಳಿ. ಆ ಬಯ್ಗಳ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರಬೇಕು. "ಏ ಹಲ್ಕಟ್ ನೀನು ನಾಲಾಯಕ್, ದರಿದ್ರ ಪೀಡೆ ನಿನ್ನ ಮುಖಕ್ಕೆ ಬೆಂಕಿ ಹಾಕ" ಹೀಗೆಲ್ಲಾ ಇರಲಿ ಬೇಕಾದರೆ ನಿಮಗೆ ಗೊತ್ತಿದ್ದರೆ ಇನ್ನಷ್ಟು ಬೈಯ್ಗಳ ಕೆಟ್ಟದಾಗಿ ಇರಲಿ. ಬೈಗಳ ಮುಗಿದ ಕೂಡಲೆ ನಿಮಗೆ ಬ್ರಹ್ಮೇತಿ ಸಿಟ್ಟು ಬರಬೇಕಿತ್ತು. ಆದರೆ ಬರಲಿಲ್ಲ ಕಾರಣ ನಿಮಗೆ ನೀವು ಬಯ್ದುಕೊಂಡಿದ್ದು ಮತ್ತು ಅದು ಬೇರೆ ಯಾರೋ ಹೇಳಿದ್ದಲ್ಲ ಹಾಗೂ ಇದೊಂದು ಸುಮ್ಮನೆ ಸುಮ್ಮನೆ ನಾಟಕ ಅಂತ ಒಳಮನಸ್ಸು ಹೇಳಿದೆ. ಆದರೆ ಆ ಬಯ್ಗಳದಷ್ಟು ಸ್ಟ್ರಾಂಗ್ ಬೇಡ ಅದಕ್ಕಿಂತ ಬಹಳಾ ಅಂದರೆ ಬಹಳ ಲೈಟ್ "ಏಯ್ ಯಾಕ್ರಿ..? ಮ್ಯಾನರ್ಸ್ ಇಲ್ವಾ?' ಈ ಮಟ್ಟದ ಮಾತು ಬೇರೆಯವರಿಂದ ಬಂತು ಅಂತಾದರೆ ನಿಮ್ಮನ್ನು ಹಿಡಿಯಲು ಮೂರ್ನಾಲ್ಕು ಜನ ಸಾಕಾಗದು. ನಿಮ್ಮದೇ ಅಧಿಪತ್ಯದ ಕ್ಷೇತ್ರವಾದರಂತೂ ಹಾರಾಟ ಚೀರಾಟ ಎಲ್ಲಾ ಸಿಕ್ಕಾಪಟ್ಟೆ ಜೋರು.
ಎಲ್ಲಿತ್ತು ? ಆ ಸಿಟ್ಟು ಕೇವಲ ಒಂದೆರಡು ಶಬ್ದಗಳ ಆ ಮಾತುಗಳು ನಿಮ್ಮನ್ನು ಆ ಮಟ್ಟಿಗೆ ಪ್ರಚೋದಿಸಿ ಬಿಟ್ಟಿತಲ್ಲ. ...!
ಇತ್ತು ಅದು ನಿಮ್ಮಲ್ಲಿ ಅಡಗಿತ್ತು. ನಿತ್ಯದ ಅಸಹನೆ, ಮುಟ್ಟಲಾಗದ ಗುರಿ, ಸಣ್ಣಮಟ್ಟದ ಅಸೂಯೆ, ಅಸಹಾಯಕತೆ ಹೀಗೆ ಏನೆನೆಲ್ಲಾ ಸೇರಿ ದುಬುಲ್ ನೆ ಆಚೆ ಬಂದಿದೆ. ಅದಕ್ಕೆ ಎದುರಿನ ವ್ಯಕ್ತಿಯ ಮಾತುಗಳು ನೆಪ ಅಷ್ಟೆ. ಎದುರಿನ ವ್ಯಕ್ತಿ ನಿಮಗಿಂತ ಸ್ಟ್ರಾಂಗ್ ಆಗಿದ್ದರೆ ಬಂದಂತಹ ಸಿಟ್ಟು ಮನಸ್ಸಿನಲ್ಲಿಯೇ ಅಡಗಿ ಕುಳಿತು ಕಾದು ನಂತರ ನಿಮಗಿಂತ ಅಸಾಹಯಕರನ್ನೋ ಅಥವಾ ಅವಲಂಬಿತರನ್ನೋ ಹುಡುಕಿ ತೀರಿಸಿಕೊಳ್ಳುತ್ತದೆ. ಇರಲಿ ಅವೆಲ್ಲಾ ಇರಬೇಕು ಇದೆ. ಆದರೆ ಅಲ್ಲೊಂದು ಮಜ ಅನುಭವಿಸ ಬಹುದು ನಾನು ಈಗ ಹೇಳಹೊರಟಿರುವುದು ಅದನ್ನೇ.
ಹಾಗೆ ಪ್ರಚಂಡ ಕೋಪ ಬರುತ್ತದಲ್ಲ, ಆ ಉತ್ತುಂಗ ಕ್ಷಣದಲ್ಲಿ ನೂರಕ್ಕೆ ತೊಭತ್ತೊಂಬತ್ತು ಜನ ವಿವೇಚನೆ ಕಳೆದುಕೊಳ್ಳುತ್ತಾರೆ. ಆವಾಗ ಅನಾಹುತಗಳಾಗುತ್ತವೆ. ಆದರೆ ಇನ್ನು ನೀವು ಆ ತೊಂಬತ್ತೊಂಬತ್ತರ ಸಾಲಿಗೆ ಸೇರುವುದಿಲ್ಲ. ಅದಕ್ಕೆ ಈ ಉಪಾಯ . ಆ ಸಿಟ್ಟಿನ ಭರಾಟೆ ಹಂತ ತಲುಪಿದಾಗ ನಿಮ್ಮ ಮಹತ್ವಾಕಾಂಕ್ಷೆ ಯ ಆಸೆ ಅಂತ ಒಂದಿರುತ್ತಲ್ಲ ಅದನ್ನು ನೆನಪಿಸಿಕೊಳ್ಳಿ. ಅದು ಕಾರ್ ಕೊಳ್ಳುವುದಿರಬಹುದು ಮನೆ ಕಟ್ಟುವುದಿರಬಹುದು ಅಥವಾ ಮತ್ತಿನ್ನೇನೋ ಇರಬಹುದು. ಇದು ತುಂಬಾ ಕಷ್ಟವಾದದ್ದೇನಲ್ಲ. ನಿಜವಾಗಿಯೂ ನಮಗೆ ಸಿಟ್ಟನ್ನು ತರಿಸಲು ಜನ ಸಿಗುವುದು ಕಷ್ಟ. ಹಾಗೆ ಸಿಕ್ಕಾಗ ನಾನು ಹೇಳಿದ್ದು ಗಮನವಿಟ್ಟು ಆಚರಣೆಗೆ ತನ್ನಿ . ಮಜ ನೋಡಿ. ಸಿಟ್ಟಿನ್ನು ಶಕ್ತಿಯಾಗಿ ಹೇಗೆ ಪರಿವರ್ತ್ಸಿಕೊಳ್ಳಬಹುದೆಂದು ಹಾಗೂ ಆ ಸಿಟ್ಟಿಗೆ ಕಾರಣನಾದ ವ್ಯಕ್ತಿ ಹೇಗೆ ಕುಗ್ಗಿಹೋಗುತ್ತಾನೆಂದು ನಿಮಗೆ ಪ್ರಾಯೋಗಿಕವಾಗಿ ತಿಳಿಯುತ್ತದೆ. ನಿಮ್ಮ ಅನುಭವ ನಿಮಗೆ ನನ್ನದು ನನಗೆ ಅಂತಾದರೂ ಇದು ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಫಲ ನೀಡುವುದು ಖಂಡಿತ.
ಇಷ್ಟು ಸಾಕು. ಇಲ್ಲದಿದ್ದರೆ ಓದುತ್ತಾ ಓದುತ್ತಾ ನಿಮಗೆ ಪಿಥ್ಹ ನೆತ್ತಿಗೇರಬಹುದು... ಅದೂ ಒಂಥರಾ ಒಳ್ಳೆಯದೆನ್ನಿ...!
ಶೀಘ್ರದಲ್ಲಿ ನಿಮಗೆ ಸಿಟ್ಟು ಬರುವಂತಾಗಲಿ ಹಾಗೂ ನಿಮ್ಮ ಆಸೆ ಈಡೇರಲಿ ಎಂದು ಹಾರೈಸುತ್ತಾ.....
-ಆರ್.ಶರ್ಮಾ

Monday, June 29, 2009

ಜೈ ಬ್ಲಾಗೇಶ್ವರರೇ...!

ವಿಶ್ವೇಶ್ವರ ಭಟ್ಟರು ವಿಜಯಕರ್ನಾಟಕದ ಬರೆಯುವ ಯಂತ್ರ. ಪ್ರತಾಪ ಸಿಂಹ, ರಾಧಾಕೃಷ್ಣ ಭಡ್ತಿ, ಮುಂತಾದವರೂ ಮರಿಯಂತ್ರಗಳು, ರವಿ ಬೆಳೆಗೆರೆ ಹಾಯ್ ಬೆಂಗಳೂರಿನ ರೈಟಿಂಗ್ ಮಷೀನ್, ಶ್ರೀ ಪಡ್ರೆ ಅಡಿಕೆ ಪತ್ರಿಕೆಗೆ ಪೆನ್ನು , ಹಾಗೆಯೇ ಪ್ರತೀ ಪತ್ರಿಕೆಗಳಲ್ಲಿಯೂ ಹಾಗೆ ನೂರಾರು ಯಂತ್ರಗಳಿವೆ. ಎಲ್ಲರೂ ಬರೆಯುತ್ತಾ ಬರೆಯುತ್ತಾ ಹಣ್ಣಾಗುತ್ತಿದ್ದಾರೆ. ಓದುಗರು ಓದುತ್ತಾ ಓದುತ್ತಾ ಏನಾಗುತ್ತಿದ್ದಾರೆ ಎಂದುಗೊತ್ತಿಲ್ಲ?. ಯಾರು ಏನೆ ಹೇಳಲಿ ಹಾಗೆ ಪತ್ರಿಕೆಗಳಲ್ಲಿ ನಿತ್ಯಬರೆಯುವವರು ಇದ್ದಾರಲ್ಲ ಅವರದು ಜೀವನ. ಎಲ್ಲೆಲ್ಲಿಂದಲೂ ಹುಡುಕುತ್ತಾರೆ ಎತ್ತುತ್ತಾರೆ ಬರೆಯುತ್ತಾರೆ ಮತ್ತುಮರೆಯುತ್ತಾರೆ. ಓದುಗರು ಹಲವರು ಮರೆತರೂ ಕೆಲವರು ಮರೆಯಲಾರರು. ಇರಲಿ ಅದು ಆಕತೆಯಾಯಿತು. ಅವರಿಗೆ ಬರೆಯದಿದ್ದರೆ ಆ ತಿಂಗಳಿನಿಂದ ಸಂಬಳವಿಲ್ಲ ಅವರುಗಳು ಅದಕ್ಕಾಗಿಯಾದರೂ ಓದುತ್ತಾರೆ ನಿದ್ರೆಗೆಡುತ್ತಾರೆ ಬರೆಯುತ್ತಾರೆ ಅನ್ನಬಹುದು.. ಆದರೆ ನನಗೆ ಅಚ್ಚರಿಯಾಗುವುದು ಈ ಬ್ಲಾಗಿಗಳನ್ನು ನೋಡಿದಾಗ. ಇವರುಗಳು ಬರೆಯುವ ವೇಗಕ್ಕೋಸ್ಕರ. ಕಂಡಿದ್ದನ್ನು ಸಿಕ್ಕಿದ್ದನ್ನು ಬರೆಯುವ ನನ್ನ ಹಾಗಿನ ಬ್ಲಾಗ್ ಬಿಡಿ, ಬರಾಪ್ಪೂರ್ ಮಾಹಿತಿ, ಯಡ್ಡಾದಿಡ್ಡಿ ಶ್ರಮದ ಬರಹಗಳಿಗಾಗಿಯೇ ಹಲವಾರು ತಮ್ಮ ಸಮಯವನ್ನುಮೀಸಲಿಟ್ಟಿದ್ದಾರೆ.

ಮೊನ್ನೆ ವಿನಾಯಕ ಕೋಡ್ಸರ ತಾಳಗುಪ್ಪದಲ್ಲಿ ಸಿಕ್ಕಾಗ ಹೇಳಿದ್ದ . ಈಗ ಬ್ಲಾಗಿಂಗ್ ಸ್ವಲ್ಪ ಹಳೆಯದಾಯಿತು ಅಂತ ಅನ್ನಿಸುತ್ತದೆ ಎಂದು. ಆದರೆನಿತ್ಯ ನೂರಾರು ಬ್ಲಾಗುಗಳು ಅಪ್ ಡೇಟ್ ಆಗುತ್ತಿರುವುದನ್ನು ನೋಡಿದಾಗ ನನಗೆ ಹಾಗೆ ಅನ್ನಿಸುವುದಿಲ್ಲ. ಅದೆಷ್ಟು ಜನರು ಕಟಕಟ ಕೀಲಿಮಣೆ ಕುಟ್ಟುತ್ತಾ ಪುಗ್ಸಟ್ಟೆ ತಮ್ಮಿಂದಾದ ಅಳಿಲು ಸೇವೆಯನ್ನು ಅಕ್ಷರ ಲೋಕಕ್ಕೆ ಸಲ್ಲಿಸುತ್ತಿದ್ದಾರೆ. ಮಾಹಿತಿಯ ಕಣಜವನ್ನು ತುಂಬುತ್ತಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ನಿತ್ಯ ಪ್ರಕಟವಾಗುವ ಹೊಸ ಬ್ಲಾಗ್ ಲೋಕ ಗಮನಿಸಿದರೆ ಅದು ಬೆಳೆಯುತ್ತಿರುವ ಗತಿ ತಿಳಿಯುತ್ತದೆ. ನಮಗೆ ಓದಲು ಕುಂತರೆ ದಿನಪೂರ್ತಿ ಓದಬಹುದಾದಷ್ಟು ಬ್ಲಾಗ್ ಗಳಲ್ಲಿ ಇವೆ. ಕತೆಗಳು ಮಾಹಿತಿಗಳು ವಿಜ್ಞಾನ ತಂತ್ರಜ್ಞಾನ ಕವನ ಹಾಡು ಹೀಗೆ ಏನೇನು ಬೇಕೋ ಅದು ಬ್ಲಾಗ್ ಗಳ ಮುಖಾಂತರ ಹರಿದಾಡುತ್ತಿದೆ. ಹಾಗಂತ ಹೀಗೆಲ್ಲ ತಮ್ಮ ಅಮೂಲ್ಯ ಸಮಯವನ್ನು ಈ ಬ್ಲಾಗ್ ಬರಹಗಳಿಗಾಗಿ ಮೀಸಲಿಡುವ ಯಾರಿಗೂ ಆರ್ಥಿಕ ಲಾಭ ಇಲ್ಲ ಎಂದು ಹೇಳಬಹುದು. ಆದರೂ ಶ್ರದ್ಧೆಯಿಂದ ಬರೆಯುತ್ತಲೇ ಇದ್ದಾರೆ ಮತ್ತು ನನ್ನ ಬ್ಲಾಗ್ ನಲ್ಲಿ ಹೊಸತೊಂದು..................ಇದೆ ನೋಡಿ ಎಂದು ಮೈಲಿಸುತ್ತಲೇ ಇದ್ದಾರೆ. ಓದುಗರು ಓದಿದರಾ ? ಕಾಮೆಂಟಿಸಿದರಾ? ಎಂದು ದಿನಕ್ಕೊಮ್ಮೆ ಹಣಿಕಿ ಮತ್ತೆ ಮುಂದಿನ ಬರಹಕ್ಕೆ ಮುನ್ನುಗ್ಗುತ್ತಿದ್ದಾರೆ.

ಇದಕ್ಕೆ ಶ್ರೀ ಕೃಷ್ಣ ಹೇಳಿದ್ದು " ಕರ್ಮಣ್ಯೇ ವಾಧಿಕಾರಸ್ಥೆ......." ಎಲ್ಲ ಬ್ಲಾಗಿಗಳು ಹಾಗೆ . ಹಾಗಾಗಿ ಜೈ ಬ್ಲಾಗೇಶ್ವರರೇ...! ನಿಮಗಿದೋ ವಂದನೆ ಅಭಿವಂದನೆ.

Tuesday, June 23, 2009

ಗೋವಿಂದಂ ಆದಿಪುರುಷಂ...ತಮಹಂ ಸ್ಮರಾಮಿ

ನಿರಾಶೆಯೆಂಬ ಕಾರ್ಮೋಡ ಕವಿದಾಗ, ಕೆಲಸಗಳು ಕೈಕೊಟ್ಟಾಗ. ಸರಣಿ ಸೋಲುಗಳು ಎದುರಾದಾಗ ಮನುಷ್ಯ ಉತ್ತರ ಹುಡುಕಿಕೊಳ್ಳಲು ದೇವರ ಮೊರೆಹೋಗುತ್ತಾನೆ. ಆದರೆ ದೇವರೆಂಬ ದೇವರನ್ನು ಮನುಷ್ಯ ಕೇವಲ ಇದೇ ಉದ್ದೇಶಕ್ಕೆ ಸೃಷ್ಟಿ ಮಾಡಿಕೊಳ್ಳಲಿಲ್ಲ. ಕಣ್ಣಿಗೆ ಕಾಣುವ, ಹಸಿವನ್ನಿಂಗಿಸುವ, ಫಲಿತಾಂಶ ನೀಡುವ ಕೈಂಕರ್ಯಗಳು ಮುಗಿದಾಗ ಮಿಕ್ಕ ಸಮಯವನ್ನು ಕಳೆಯಲು ದೇವರನ್ನು ಸೃಷ್ಟಿಸಿಕೊಂಡ. ಆವಾಗ ಪ್ರಪಂಚಾದ್ಯಂತ ಅವರವರ ಮನಸ್ಸಿನ,ಯೋಚನೆಯ ಹಂತಕ್ಕನುಗುಣವಾಗಿ ನಾನಾ ತರಹದ ದೈವಗಳು ಹುಟ್ಟಿಕೊಂಡವು. ಇದಂ ಇಥ್ಹಂ ಎಂಬ ಉತ್ತರಗಳು ದೇವರಕಡೆಯಿಂದ ಸಮರ್ಪಕವಾಗಿ ಸಿಗದ ಕಾರಣ ಮನುಷ್ಯನಿಂದ ದೇವರ ಸೃಷ್ಟಿ ಹೆಚ್ಚುತ್ತಾ ಹೋಯಿತು. ಇನ್ನೂ ಹೆಚ್ಚಾಗುತ್ತಲೇ ಇದೆ. ಪ್ರಾರ್ಥನೆಯ ಮೂಲಕ ಭಜನೆಯ ಮೂಲಕ ಮಂತ್ರದ ಮೂಲಕ ತಂತ್ರದ ಮೂಲಕ ಆ ಅನಾಮಿಕ ಶಕ್ತಿಯನ್ನು ಒಲಿಸಿಕೊಳ್ಳಲು ಮನುಷ್ಯನ ಪ್ರಯತ್ನ ನಿರಂತರ. ಉತ್ತರ ಸಿಗದೆ ಸಾಯುವ ಈ ಮನುಷ್ಯ ಮತ್ತೆ ಮುಮ್ದಿನ ತಲೆಮಾರಿಗೆ ತನ್ನ ನಂಬಿಕೆಗಳನ್ನು ಬಿತ್ತುತ್ತಾ ಸಾಗಿದ್ದಾನೆ. ಮತ್ತು ಸಾಗುತ್ತಲೇ ಇದ್ದಾನೆ. ಅಂತಹ ಒಂದು ದೈವ ಸೃಷ್ಟಿ ಇಸ್ಕಾನ್ ನಿಂದಾದ ಗೋವಿಂದಂ.
ಕೃಷ್ಣ...ಕೃಷ್ಣ...ಕೃಷ್ಣ. ಕೃಷ್ಣವಿನಾ ತೃಣಮಪಿ ನಚಲತಿ ಅಂತ ಅಂದುಕೊಂಡಿದ್ದಾರೆ ಇಸ್ಕಾನಿಗಳು. ಕೇವಲ ಏನೇನೋ ಹೇಳಿ ಕೃಷ್ಣನಿದ್ದಾನೆ ಎನ್ನುವುದಕ್ಕಿಂತ ವ್ಯವಸ್ಥಿತವಾಗಿ ಮನುಷ್ಯನ ಮನಸ್ಸಿಗೆ ಆಹ್ಲಾದಕರ ಸಂಗೀತ ನೀಡಿ ಹೇಳಿದರೆ, ಕುಣಿದು ಪ್ರಾರ್ಥಿಸಿದರೆ ದೈವವನ್ನು ತಲುಪಬಹುದು ಎಂಬುದು ಪ್ರಭುಪಾದರ ತತ್ವ. ಅದು ಮೇಧಾವಿಗಳನ್ನೂ ಕೂಡ ಆ ಕಾರಣಕ್ಕಾಗಿಯೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. "ಅಕ್ಷಯ ಪಾತ್ರ" ದಂತಹ ಅದ್ಭುತ ಕಾರ್ಯಕ್ರಮವನ್ನು "ಕೃಷ್ಣ ಜಪ" ದ ಮೂಲಕ ಸಮರ್ಪಕವಾಗಿ ನಡೆಸಿಕೊಂಡು ಬರುತ್ತಿದೆ. ಸಾವಯವ ಕೃಷಿಯಲ್ಲಿಯೂ ಎತ್ತಿದ ಕೈ.
ಇರಲಿ ಈಗ ನಾನು ಹೇಳಹೊರಟಿರುವ ವಿಷಯಕ್ಕೆ ಬರೋಣ.
ಚುಮು ಚುಮು ಬೆಳಕಿನಲ್ಲಿ ಇಸ್ಕಾನಿಗಳು ಕೃಷ್ಣ ಪೂಜೆ ಮಾಡುತ್ತಾರೆ. ಪೂಜೆ ಮುಗಿದ ನಂತರ ಪ್ರಾಂಗಣದಲ್ಲಿ ನಿಧಾನ ದೂಪದ ಹೋಗೆ ಆವರಿಸಿಕೊಳ್ಳುತ್ತದೆ. ದಟ್ಟವಾದ ಪರಿಮಳಯುಕ್ತ ದೂಪದ ಹೊಗೆ ಮನಸ್ಸಿಗೆ ಅದೇನೋ ಹಿತವನ್ನುನೀಡುತ್ತದೆ. ಸಾಲಂಕೃತ ಕೃಷ್ಣನ ವಿಗ್ರಹದ ಪರದೆ ನಿಧಾನ ಪಕ್ಕಕ್ಕೆ ಸರಿಯುತ್ತದೆ. ನಿಮಗೆ ದೂಪದ ಹೊಗೆಯ ನಡುವೆ ಕೃಷ್ಣ ದರ್ಷನ ಪ್ರಾರಂಬ. ಆವಾಗ ನಿಧಾನಗತಿಯಲ್ಲಿ " ಗೋವಿಂದಂ ಆದಿಪುರುಷಂ" ಹಾಡು ಶುರುವಾಗುತ್ತದೆ (ಬೇಕಾದರೆ ಹಾಡು ಇಲ್ಲಿದೆ ಕೇಳಿ http://www.youtube.com/watch?v=5GIQTuUJwwA ) ಅಕ್ಕಪಕ್ಕದ ಕೃಷ್ಣ ಭಕ್ತರು ಕೈ ಮೇಲೆತ್ತಿ ನಿಧಾನ ಹೆಜ್ಜೆ ಹಾಕತೊಡಗುತ್ತಾರೆ. ಪಾಶ್ಚಾತ್ಯ ಶೈಲಿಯ ಸಂಗೀತ ಸಂಯೋಜನೆಯ ಈ ಹಾಡು ನಮ್ಮ ನಿಮ್ಮನ್ನು ಅಮಲಿಗೇರಿಸುತ್ತದೆ. ನಿಧಾನ ಶುರುವಾದ ಹಾಡಿನ ಲಯ ಚುರುಕಾಗಿದ್ದು ನಿಮಗೆ ತಿಳಿಯುವುದೇ ಇಲ್ಲ. ಲಯ ಚುರುಕಾದಂತೆ ಹೆಜ್ಜೆಯೂ ಚುರುಕು. ಹಾಗೆ ಹತ್ತು ನಿಮಿಷಗಳ ದೇಹದ ಸುಸ್ತಿಗೆ ಮನಸ್ಸಿನ ಮುದಕ್ಕೆ ಈಡಾಗಿ ನೀವುಗಳು ಅದೇನೋ ಒಂದು ಹಿತವಾದ ಅನುಭವನ್ನು ಹೊಂದುತ್ತೀರಿ. ಅದೇ ಅನುಭವವನ್ನು ದೈವ ಸಾನ್ನಿದ್ಯ ಅನ್ನುತ್ತಾರೆ ಅವರು.
ಅಂತಹ ಅನುಭವವನ್ನು ಪದೇ ಪದೇ ಹೊಂದಲು ಮನಸ್ಸು ಬಯಸುತ್ತದೆ . ಮಾಡುವ ಕೆಲಸ ಸುಂದರ ಸಂಸಾರ ಮನೆ ಮಠ ಬಿಟ್ಟು ಅಲ್ಲಿಗೆ ಹೋಗಿಬಿಟ್ಟೀರಿ ಮತ್ತೆ. ಸಾಕು ಈಗ ನಾವಿರುವ ಸಂಸಾರ ಅಲ್ಲಿಲ್ಲ , ಆದರೆ ಅಲ್ಲಿರುವ ವಾತಾವರಣ ನಮ್ಮ ಮನೆಯಲ್ಲಿಯೂ ತಂದುಕೊಳ್ಳಬಹುದು. ಹ್ಯಾಪಿ ಕೃಷ್ಣ ಡೆ.

Monday, June 22, 2009

ಹುಯ್ಯೋ ಹುಯ್ಯೋ ಮಳೆರಾಯ


ಬಾಳೆ ತೋಟಕೆ ನೀರಿಲ್ಲ ಅನ್ನೋದು ಹಳ್ಳಿಯ ಹಳೇ ಹಾಡು. ಈಗ ಹುಯ್ಯೋ ಹುಯ್ಯೋ ಮಳೆರಾಯ ಲಿಂಗನಮಕ್ಕಿ ಡ್ಯಾಮಿಗೆ ನೀರಿಲ್ಲ ಅಂತ ಬದಲಾಯಿಸಬೇಕಿದೆ. ಈ ವರ್ಷ ಅದೇಕೋ ಗೊತ್ತಿಲ್ಲ ನಮ್ಮ ಮಲೆನಾಡಿನಲ್ಲಿ ಮಳೆಗಾಲ ಇನ್ನೂ ಶುರುವಾಗಿಲ್ಲ. ಜೂನ್ ಎಂದರೆ ಜಿರ್ರೋ ಎಂದು ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ ಸುರಿಯಬೇಕಾಗಿದ್ದ ಮಳೆ ಮುಗುಮ್ಮಾಗಿ ಮಲಗಿದೆ. ಕಳೆದ ವರ್ಷ ಇಷ್ಟೊತ್ತಿಗೆ ಲಿಂಗನಮಕ್ಕಿ ಡ್ಯಾಮ್ ಭಾಗಶ: ತುಂಬಿ ಹೋಗಿತ್ತು. ಜುಲೈ ಅಂತ್ಯದಲ್ಲಿ ಡ್ಯಾಮಿಂದ ಯರ್ರಾಬಿರ್ರಿ ನೀರು ಬಿಟ್ಟಿದ್ದರು. ಈ ವರ್ಷ ಡ್ಯಾಂ ಖಾಲಿ ಖಾಲಿ.
ಹೊನ್ನೆಮರಡು ಹಿನ್ನೀರಿಗೆ ಹೋಗಿ ನಿಂತರೆ ನೂರಾರು ಬೋಳು ಮರಗಳು ಸಾಲುಸಾಲಾಗಿ ಕಾಣಿಸುತ್ತವೆ. ನಡುಗುಡ್ಡೆಗಳು ಎಣಿಸಲಾರದಷ್ಟು ಇದೆ. ಅವೆಲ್ಲಾ ವರುಣನ ಅವಕೃಪೆಗೆ ಒಳಗಾದ್ದರಿಂದ ನೀರಿಲ್ಲದೆ ನಗ್ನ ನೃತ್ಯ.
ಆಣೆಕಟ್ಟಿನಲ್ಲಿ ಇನ್ನುಹೆಚ್ಚೆಂದರೆ ಹತ್ತು ದಿವಸಕ್ಕಾಗುವಷ್ಟು ನೀರು ಇದೆ. ಆಮೇಲೆ ಕರೆಂಟ್ ಕತೆ ದೇವರೇ ಬಲ್ಲ. ಅಂಬೋದು ನೆಗೇಟೀವ್ ವಾಕ್ಯ ಅಂತ ಅನ್ನಿಸಿದರೂ ಸತ್ಯದ ಮಾತು.
ಆದರೂ ಏನೋ ಒಂದು ಆಗುತ್ತದೆ ಮತ್ತೇನೋ ಸಂಭವಿಸುತ್ತದೆ ಕಡಿದು ಗುಡ್ಡೆ ಹಾಕಬೇಕು ಎನ್ನುವ ಅದಮ್ಯ ಉತ್ಸಾಹದಲ್ಲಿ ನಮ್ಮೆಲ್ಲರ ದಿನಗಳು ಕಡಿಮೆಯಾಗುತ್ತಿವೆ.
ಆದರೂ ಮಳೆ ಇಲ್ಲದಕುರಿತು ಒಂದಿಷ್ಟು ಮಾತುಗಳು ಹೊರ ಬೀಳುತ್ತವ್. ಅವು ಯಾರ್ಯಾರು ಆಡಿದ್ದು ಅಂತ ತಳಕು ಹಾಕಿಕೊಳ್ಳುವ ಕೆಲಸ ನಿಮಗೆ ಬಿಟ್ಟದ್ದು.
"ಕಾಲ ಕೆಟ್ಟೊತು.. ಈಗಿನ ಕಾಲದವು ಪೂಜೆ ಪುನಸ್ಕಾರ ಬಿಟ್ಟಿದ್ದ, ಹಂಗಾಗಿ ಹಿಂಗೆಲ್ಲ ಆಗ್ದೆ ಮಣ್ಣು ಹೊಯ್ಕ್ಯತ್ತ ಮತೆ"
ನಮ್ಮ ಕಾಲದಲ್ಲಿ ಸುಭೀಕ್ಷ ಇತ್ತಪ ಅನಾಚಾರ ಅತ್ಯಾಚಾರ ಹೆಚ್ಚಾಗಿದ್ದಕ್ಕಾಗಿ ಮಳೆ ಬೆಳೆ ಹೀಗೆ
"ಮಳೆಯ ಈ ಅವತಾರಕ್ಕೆ ಅತಿಯಾದ ಕಾಡು ನಾಶ ಕಾರಣ"
ಮಳೆ ಇಲ್ಲದ್ದಕ್ಕೆ ಅಕೆಶಿಯಾ ಬೆಳಸಿದ್ದೆ ಕಾರಣ
ನೀಲಗಿರಿ ಬೆಳಸಿದ್ದೆ ಕಾರಣ
ಹುಡುಗ್ರು ಸಂಧ್ಯಾವಂದನೆ ಬಿಟ್ಟಿದ್ದೆ ಮಳೆ ಹೀಗಾಗಲು ಕಾರಣ
ಇವಕ್ಕೆಲ್ಲ ಬಿಜೆಪಿ ಯ ಆಪರೇಷನ್ ಕಮಲವೇ ಕಾರಣ ಹಾಗಾಗಿ ಯಡಯೂರಪ್ಪ ರಾಜಿನಾಮೆ ಕೊಡಬೇಕು
ಮಳೆ ಹೀಗಾಗಲು ಐವತ್ತು ವರ್ಷದಿಂದ ಆಳಿದ ಕಾಂಗ್ರೆಸ್ ದುರಾಡಳಿತವೇ ಕಾರಣ
ಶುಕ್ರ ವಕ್ರನಾದ್ದರಿಂದ ಮಳೆ ಕಡಿಮೆಯಾಗಿದೆ ನೆಟ್ಟಗಾದಮೇಲೆ ಎಲ್ಲಾ ಸರಿಯಾಗುತ್ತದೆ
ರಾಹು ಗುರುವಿನ ಮೇಲೆ ವಕ್ರನಾಗಿದ್ದಾನೆ ಅದು ನಿಜವಾದ ಕಾರಣ
ಬಳ್ಳಾರಿಯಲ್ಲಿ ಗಣಿ ದೊರೆಗಳು ಇದಕ್ಕೆ ನೇರ ಹೊಣೆ
ಮದುವೆ ಸಾಂಗೋಪಸಾಂಗವಾಗಿ ನಡೆಯಲಿ ಎಂದು ಹರಕೆ ಹೇಳಿಕೊಂಡದ್ದೇ ಮಳೆ ಇಲ್ಲದ್ದಕ್ಕೆ ಕಾರಣ
ಪ್ರಕೃತಿಯ ಮೇಲೆ ಮನುಷ್ಯನ ಅತಿಯಾದ ಹಲ್ಲೆ ಇದಕ್ಕೆ ಮೂಲ
ಹೀಗೆ ತಮ್ಮನ್ನೊಂದು ಬಿಟ್ಟು ಮಿಕ್ಕೆಲ್ಲವರೂ ಕಾರಣ ಎಂಬಂತಹ ಹೇಳಿಕೆಯೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಹೇಳಿಕೆ ಮುಗಿಸೋಣ.
ಒಟ್ಟಿನಲ್ಲಿ "ಅಯ್ಯೋ ಮಳೆಯ ರಭಸಲ್ಲಿ ನಾವು ಕೊಚ್ಚಿ ಹೋಗುತ್ತಿದ್ದೇವೆ" ಎಂದು ಬರೆಯಬೇಕಾಗಿದ್ದ ಜಾಗದಲ್ಲಿ "ಹುಯ್ಯೋ...." ಅಂತ ಬರೆಯಬೇಕಾಗಿದ್ದು ತೀರಾ ಖುಷಿಯಲ್ಲದ ಸಂಗತಿ ಅನ್ನುವುದಂತೂ ಸತ್ಯ.

Wednesday, June 17, 2009

ಇದು ಪ್ರಪಂಚ ಇದುವೇ ಪ್ರಪಂಚ..!


ಟಿವಿಯಲ್ಲಿ ಕ್ರಿಕೆಟ್ ನೋಡುತ್ತಿರುವಾಗಲೋ, ಅತ್ಯಂತ ಇಷ್ಟವಾದ ಸೀರಿಯಲ್ ನೋಡುತ್ತಿರುವಾಗಲೋ, ಊಟ ಮಾಡುತ್ತಿರುವಾಗಲೋ , ಪಟ್ಟಂತ ವಿದ್ಯುತ್ ಹೋಗುತ್ತದೆ. ಸರಿ ಆವಾಗ ಮನೆಮಂದಿಯೆಲ್ಲ ಸೇರಿ ಕರೆಂಟ್ ಕಂಪನಿಯವರಿಗೆ ಒಂದಿಷ್ಟು ಹಿಡಿಶಾಪ ಹಾಕುತ್ತೇವೆ. ಐದತ್ತು ನಿಮಿಷದೊಳಗೆ ಕರೆಂಟ್ ಬಂತೋ ಅಷ್ಟಕ್ಕೆ ನಿಲ್ಲುತ್ತದೆ ಆದರೆ ಗಂಟೆ ಕಳೆದರೂ ಬರಲಿಲ್ಲ ಅಂತಾದರೆ ಯಡ್ಯೂರಪ್ಪನಿಂದ ಶುರುವಾಗಿ ರಾಜಕೀಯ ನಾಯಕರೆಲ್ಲಾ ಮುಗಿಸಿ ಹುರಿದು ಮುಕ್ಕುತ್ತೇವೆ. ಆ ನಡುವೆ ಓಟು ಹಾಕಿ ಮುಗುಮ್ಮಾಗಿ ಕುಳಿತ ನಮ್ಮನ್ನೊಂದು ಬಯ್ದುಕೊಳ್ಳುವುದಿಲ್ಲ ಎಂಬುದನ್ನು ಬಿಟ್ಟರೆ ಮಿಕ್ಕವರೆಲ್ಲಾ ಸರಿ ಇಲ್ಲ ಎಂಬ ವಾಗ್ದಾಳಿ ಅವ್ಯಾಹತವಾಗಿ ಮುಂದುವರೆಯುತ್ತದೆ. ಇರಲಿ ಅದರ ಕತೆ ಬದಲಾಗುವುದಿಲ್ಲ ಆಗುವುದೂ ಬೇಡ. ಈಗ ಫೋಟೋ ಸುದ್ದಿಗೆ ಬರೋಣ.

ಜೋಗ ಜಲಪಾತ ನೀವು ನೋಡಿರುತ್ತೀರಿ ಅಥವಾ ಅದ್ಭುತವಾಗಿದೆ ಎಂಬ ಸುದ್ಧಿಯನ್ನು ಕೇಳಿರುತ್ತೀರಿ. ಈ ಜಲಪಾತ ಸೃಷ್ಟಿಮಾಡಿದ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಹಾಕಿದ್ದಾರೆ. ಆ ಆಣೆಕಟ್ಟಿನ ನೀರಿನಿಂದ ಜಲವಿದ್ಯುತ್ ಮೂರುಕಡೆ ಉತ್ಪಾದಿಸುತ್ತಾರೆ(ಅಯ್ಯೋ ಅವೆಲ್ಲಾ ಗೊತ್ತು ಕೊರೆಯಬೇಡ, ಎಂದಿರಾ?. ಇದು ಗೊತ್ತಿಲ್ಲದವರಿಗಾಗಿ..!) ಅಂತಹ ಒಂದು ನಿಮಗೆ ಕಾಣಿಸುತ್ತಿರುವ ತಳಕಳಲೆ ಡ್ಯಾಮ್. ಹತ್ತು ಬೃಹತ್ ಗಾತ್ರದ ಪೈಪ್ ಗಳು ಕೆಳಗಿಳಿದಿವೆ ಹಾಗೆಯೇ ಹತ್ತು ತಂತಿಗಳು ಮೇಲೇರಿವೆ. ಹೊರನೋಟಕ್ಕೆ ಸುಂದರ ದೃಶ್ಯವಾಗಿ ಗೋಚರಿಸುವ ಈ ನೋಟ ಒಳಗೆ ಇಳಿದಂತೆಲ್ಲಾ ಮನುಷ್ಯನ ಇಚ್ಛಾ ಶಕ್ತಿಯನ್ನು ಬಿಚ್ಚಿಡುತ್ತವೆ. ಅಲ್ಲಿಂದಲೇ ನಮ್ಮ ಊಟ ಟಿವಿ ಕ್ರಿಕೆಟ್ ಗಳ ಮಜ ಹಾಗೂ ಗೊಣಗಾಟ ದ ಮೂಲ ಉತ್ಪಾದನೆಯಾಗುತ್ತದೆ. ಹತ್ತು ಪೈಪ್ ಗಳಲ್ಲಿ ರಭಸವಾಗಿ ನುಗ್ಗುವ ನೀರು ಟರ್ಬೈನ್ ತಿರುಗಿಸಿ ತಂತಿಯ ಮೂಲಕ ಚರ್ ಚರ್ ಎಂಬ ಶಬ್ಧದೊಂದಿಗೆ ತಲುಪುವಲ್ಲಿಗೆ ತಲುಪಿ ಬೆಳಗುತ್ತದೆ ಮತ್ತು ಮಿನುಗುತ್ತದೆ. ಸಹಸ್ರ ಸಹಸ್ರ ಕೈಗಳ ಶ್ರಮದ ಫಲ ಅದು. ಐವತ್ತು ವರ್ಷಗಳ ಹಿಂದೆ ಅದೆಷ್ಟು ಕುಟುಂಬಗಳು ಅಲ್ಲಿ ಪ್ರಾಣ ತೆತ್ತವೋ ಅವೆಷ್ಟು ಕುಟುಂಬಗಳು ಬೀದಿ ಪಾಲದವೋ ಕೇಳುಗರೇ ಇಲ್ಲದ ಅವರ ಗೊಣಗಾಟ ಅದೆಲ್ಲಿ ಕರಗಿ ಹೋಯಿತೋ ಬಲ್ಲವರ್ಯಾರು? . ಪೈಪಿನೊಳಗೆ ಹರಿದು ಬರುವ ನೀರು ಲಿಂಗನ ಮಕ್ಕಿ ಆಣೆಕಟ್ಟಿನಲ್ಲಿ ನಿಂತಾಗ ಅದೆಷ್ಟು ಸಹಸ್ರ ಜನ ಮನೆ ಮಠ ಸಂಸ್ಕೃತಿ ಕಳೆದುಕೊಂಡರೋ..? ಲೆಕ್ಕ ಇಟ್ಟವರ್ಯಾರು..? . ಕೇವಲ ಮನುಷ್ಯ ಮಾತ್ರ ಇಳಿಯುವುದು ಕಷ್ಟ ಎಂಬಂತಹ ಜಾಗಗಳಲ್ಲಿ ಆನೆಗಾತ್ರದ ಪೈಪ್ ಗಳು ಇಳಿಸುವಾಗ ಅದೆಷ್ಟು ಅನಾಹುತಗಳಾಯಿತೋ..? ಎಷ್ಟು ಜೀವಗಳು ಅಲ್ಲಿ ನಲುಗಿ ಹೋಯಿತೋ..?. ಅದೆಷ್ಟು ಮರ ಗಿಡ ಪ್ರಾಣಿ ಪಕ್ಷಿಗಳು ಅಕಾಲ ಮೃತ್ಯುವಿಗೆ ತುತ್ತಾದವೋ ಬಲ್ಲವರ್ಯಾರು?. ಅವರುಗಳ ಶ್ರಮದ ಪ್ರತಿಫಲ ನಾವು ಅನುಭವಿಸುತ್ತಿದ್ದೇವೆ.

ಆದರೂ ಹತ್ತೆ ಹತ್ತು ನಿಮಿಷ ಕರೆಂಟು ಹೋದಾಗ ಮುಳುಗಿ ಹೋಗುವುದು ಎನೂ ಇಲ್ಲದಿದ್ದರೂ " ತತ್ತ್ ಈ ದರಿದ್ರ ಕೆಇಬಿ ಯವರ ಹಣೇಬರಹವೇ ಇಷ್ಟು " ಎಂಬ ನಮ್ಮ ಹಿಡಿ ಶಾಪ ಮುಂದುವರೆಯುತ್ತದೆ.

ಅಯ್ಯೋ ಹಾಗೆ ಆಲೋಚಿಸುತ್ತಾ ಹೋದರೆ ಬದುಕಿನ ಮಜವೇ ಇಲ್ಲ ಎಂದಿರಾ.? ಓ ಕೆ ಒಂಥರಾ ಅದೂ ಸರೀನೆ. ಯಾಕೆಂದರೆ

ಇದು ಪ್ರಪಂಚ ಇದುವೇ ಪ್ರಪಂಚ..! ಅಲ್ಲವೇ?

Sunday, June 14, 2009

ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ:

"ಇಡಾದೇವಹೂರ್ಮನುರ್ಯಜ್ಞನೀಬೃಹಸ್ಪತಿರುಕ್ಥಾಮದಾನಿಶಗುಂಸಿಷದ್ವಿಶ್ವೇದೇವಾ: "
ಹೀಗೊಂದು ವಾಕ್ಯ ಓದಲು ಕೊಟ್ಟು ಸ್ವರಸಹಿತ ಹೇಳಿ ಎಂದರೆ ತಲೆಕೆಟ್ಟು ಮೈಪರಚಿಕೊಳ್ಳುವಂತಾಗುತ್ತದೆ ಮೊದಲನೇ ದಿನ. ಎರಡನೇ ದಿನ ಎದ್ದು ಬಿದ್ದು ಓದಿದರೆ ಅಲ್ಪಸ್ವಲ್ಪ ತಡವರಿಸಿಕೊಳ್ಳುತ್ತಾ ಓದಬಲ್ಲೆ ಅನ್ನು ವಿಶ್ವಾಸ ಬರುತ್ತದೆ. ಹದಿನೈದನೇ ದಿನ ಅಸ್ಖಲಿತವಾಗಿ ಓದಬಹುದು ನೋಡಿಕೊಳ್ಳದೇ ಹೇಳಬಹುದು ಈ ವಾಕ್ಯವನ್ನ ಆದರೆ ಮುಂದಿನ ವಾಕ್ಯ ಮತ್ತೆ ಹಳೆಯದರಂತೆ. ಇದು ಸಹಜ ಮನುಷ್ಯನ ತಾಕತ್ತು. ಆ ವಿಷಯ ಈ ವಿಷಯ ಅಂತಲ್ಲ ಪ್ರಪಂಚದ ಎಲ್ಲಾ ವಿಷಯವೂ ಕಲಿಯುವವರೆಗೆ ಕಷ್ಟ ಕಲಿತಮೇಲೆ ಲೀಲಾಜಾಲ. ಬೇರೆಯವರು ತಡವರಿಸಿದಾಗ ಇವರೇಕೆ ಇಷ್ಟು ಒದ್ದಾಡುತ್ತಾರೆ ಅಂತ ಅನ್ನಿಸದಿರದು. ಇರಲಿ ಈಗ ಅದು ಎಲ್ಲಿಯ ವಾಕ್ಯ ಅಂತ ನೋಡೊಣ.
ಶ್ರೀ ಮಠದ ಭಕ್ತರಿಗೆ ಶ್ರೀಗಳು "ರುದ್ರ" ಕಲಿಯಲು ಹೇಳಿದ್ದಾರೆ. ಒಂದು ವರ್ಷಗಳ ಕಾಲ ಗೋಕರ್ಣದಲ್ಲಿ ನಡೆಯುವ ರುದ್ರ ಪಾರಾಯಣಕ್ಕೆ ಜನ ಬೇಕು. ಹಾಗಾಗಿ ಗ್ರೃಹಸ್ಥರು ರುದ್ರ ಕಲಿಯಲಿ ಎಂಬುದು ಶ್ರೀಗಳ ಆಶಯ. ಹತ್ತರಿಂದ ಐವತ್ತರವರೆಗಿನ ವಯಸ್ಸಿನ ಬೇಧವಿಲ್ಲದೆ ಹಳ್ಳಿಯ ಹವ್ಯಕರು ಸಂಜೆ ಶಲ್ಯ ಹೊದ್ದು "ಇಡಾದೇವಹೂ...." ಎಂದು ಸಂಜೆ ಸರಿ ಸುಮಾರು ಒಂದೂವರೆ ತಾಸು ಬಾಯಿಪಾಠ ಶುರುಮಾಡಿದ್ದಾರೆ. ಬರೊಬ್ಬರಿ ಪುರೋಹಿತರ ಮಗನಾದ ನಾನು ಬಾಲ್ಯದಲ್ಲೆಲ್ಲೋ "ಓಂ ಗಣಾನಾಂತ್ವಾ..." ಎಂಬ ಗಣಪತಿ ಉಪನಿಷತ್ ಹಾಗೂ " ನಾದಶಬ್ಧ ಮಹೀಂ ಘಂಟಾಂ..." ಎಂಬ ದೇವರ ಪೂಜೆ ಮಂತ್ರ ಕಲಿತದ್ದು ಬಿಟ್ಟರೆ ಮತ್ತೆ ಅತ್ತ ಕಡೆ ತಲೆಹಾಕಿ ಮಲಗಲಿಲ್ಲ. ಹಾಗಾಗಿ ನಾಲಿಗೆಗೆ ಅವೆಲ್ಲಾ ಹೊಚ್ಚ ಹೊಸತು. ಇನ್ನು ಮಿದುಳಿಗೆ ಅರ್ಥವಾಗದ ಆ ಸಂಸ್ಕೃತ ಶಭ್ದಗಳು ಕೇವಲ ಸ್ವರಸಹಿತ ಪದಪುಂಜಗಳಷ್ಟೆ. ಆದರೂ ಹದಿನೈದು ಜನ ನಿತ್ಯ ಸಂಜೆ ಒಂದೂಕಾಲು ತಾಸು ಹೇಳಿ ಬಂದಾಗ ಮನಸ್ಸಿಗೆ ಅದೇನೋ ಒಂಥರಾ ಹಿತವನ್ನು ಕೊಡುತ್ತದೆ. ಅಬ್ಬಾ ಇವತ್ತು ಮುಗಿಯಿತು ಎಂಬ ನಿರಾಳ ಭಾವವೋ ಅಥವಾ ಸಂಸ್ಕೃತ ಮಂತ್ರಗಳಲ್ಲಿನ ಅಂತ:ಶಕ್ತಿಯೋ..? ಉತ್ತರ ಖಚಿತವಾಗಿ ಗೊತ್ತಿಲ್ಲ. ಆದರೂ ಏನೋ ಒಂದು ಮಜ ಇದೆ. ಹೊಸತಲ್ಲವೇ ಮಿದುಳಿಗೆ ಅದೇ ಇದ್ದರೂ ಇರಬಹುದು.
ರುದ್ರದಲ್ಲಿರುವ ಶಬ್ದಗಳು ಸಂಸ್ಕೃತದಲ್ಲಿರುವುದರಿಂದ ಅರ್ಥ ಗೊತ್ತಿಲ್ಲ ಬಿಡಿ. ಆದರೆ ಅಲ್ಲಿ ಕಲಿಯಲು ಬರುತ್ತಾರಲ್ಲ ಆವಾಗ ಒಂದಿಷ್ಟು ಕನ್ನಡದ ಅರ್ಥಕ್ಕೆ ಹೋಲುತ್ತವೆ . ಪಠಿಸುವುದು ಸಂಸ್ಕೃತ ಅರ್ಥ ಕನ್ನಡ ಆವಾಗ ಮುಸಿಮುಸಿ ನಗು ಪಠಣದ ಗಂಭೀರತೆಗೆ ಬೇಡ ಬೇಡ ಅಂದರೂ ಧಕ್ಕೆತಂದುಬಿಡುತ್ತವೆ. "ಹೇತಿರ್ಮೀಢುಷ್ಟಮ, ಹೇತಿರ್ವಣಕ್ತು, ಕಾಪ್ಯಾಯ ಚಾ, ವಟ್ಯಾಯ ಚ, ಕಾಟ್ಯಾಯ ಚಾ, " ಮುಂತಾದ ಶಬ್ದಗಳೆಲ್ಲಾ ಕನ್ನಡಕ್ಕೆ ತಿರುಗಿ ಅನರ್ಥಕ್ಕೆ ಕಾರಣವಾಗಿ ನಗುತರಿಸಿಬಿಡುತ್ತವೆ. (ಇನ್ನೂ ಬಹಳಷ್ಟಿವೆ ಕೆಂಗಣ್ಣಿಗೆ ಗುರಿಯಾಗುವ ಇಷ್ಟವಿಲ್ಲದ್ದರಿಂದ ಇಷ್ಟು ಸಾಕು)
ಇರಲಿ ನಮಗೆ ಮೂಲ ಅರ್ಥ ಗೊತ್ತಿಲ್ಲ ಮುಂದೆ ತಿಳಿದಂತೆ ಈ ಅನರ್ಥ ಮಾಯವಾಗಿ ಘನಗಂಬೀರತೆ ಮೂಡುತ್ತದೆ ಅಂಬುದು ನಂಬಿಕೆಯಲ್ಲ ಪರಮ ಸತ್ಯ.
ಹೀಗೆ ರುದ್ರ ಕಲಿತು ನಂತರ ಚಮಕ ಕಲಿತು ಒಂಚೂರು ಪುರುಷ ಸೂಕ್ತ ಆಮೇಲೆ ಗಣಾನಾಂತ್ವ ಗಣಪತೀಂ ಬಾಯಿಗಟ್ಟು ಆಯಿತೆಂದರೆ ಸಾಕು ನಂತರ ಪುರೋಹಿತನಾದಂತಯೇ. ಅಲ್ಲಿ ಇಲ್ಲಿ ಸಣ್ಣಪುಟ್ಟ ಸತ್ಯನಾರಾಯಣ ಕತೆ ನಂತರ ಪ್ರತಿಷ್ಠೆ...! ಗೆ ಸೀದಾ ಜಂಪ್ ಆನಂತರ ಒಣಪ್ರತಿಷ್ಠೆ ಹೇಗೂ ಇದ್ದೇ ಇದೆ.
ಆದರೂ ಕೊನೆಯ ಸಾಲು ಇನ್ನೂ ಕಷ್ಟ ಅಂತ ಭಾಸವಾಗುತ್ತಿದೆ. "ದಶಪ್ರಾಚೀರ್ದಶದಕ್ಷಿಣಾದಶಪ್ರತೀಚೀರ್ದಶೋದೀಚೀರ್ದಶೋರ್ಧ್ವಾಸ್ತೇಭ್ಯೋ ನಮ ಸ್ತೇನೋ ಮೃಡಯಂತು ತೇ.." ಮುಂದೆ ಅಭ್ಯಾಸವಾಗುತ್ತದೆ ಆವಾಗ ಮತ್ತೆ ನಿಮಗೆ ಕೊರೆಯುತ್ತೇನೆ.
ಅಲ್ಲಿಯವರೆಗೆ ರುದ್ರಾಯ ನಮ:.

Friday, June 12, 2009

ಅದೊಂದು ಗುಟ್ಟು

ಅರ್ಥವಾಯಿತೆಂದರೆ ಜೀವನ "ಜಿಂಗಲಾಲ" ಅಂತ ಅರ್ಥ. ಅವನು ಹಾಗೆ ಇವಳು ಹೀಗೆ ಅದು ಸರಿ ಇಲ್ಲ ಇದು ಉದ್ದ ಮತ್ತೊಂದು ಗಿಡ್ದ ಮಗದೊಂದು ಉದ್ದ ಎಂಬಂತಹ ಗೊಣಗಾಟದ ಮೂಲ. ಆ ಮೂಲ ಎಲ್ಲಿದೆ ? ಎಂಬ ಗುಟ್ಟು ಅರ್ಥವಾಯಿತೆಂದರೆ ತನ್ಮೂಲಕ ನಿತ್ಯ ಬಯಸುತ್ತಿರುವ ಶಾಂತಿ ಎಂಬುದು ಮನಸ್ಸಿಗೆ ದೊರಕಿತು ಎಂದರೆ ಅವರ ಜೀವನ ಜಿಂಗಲಾಲ. ಅದನ್ನು ಅರ್ಥಮಾಡಿಸಿಕೊಡಲು ಸಂತರು ದಾರ್ಶನಿಕರು ಬಾಬಾಗಳು ಕೂಪಿಟ್ಟುಕೊಂಡು ಲಾಗಾಯ್ತಿನಿಂದ ಕುಂತಿರುತ್ತಾರೆ. ಇಂದೂ ಹಾಗೆಯೇ ಮುಂದೂ ಹಾಗೆಯೇ. ಒಬ್ಬರು ಮೂರ್ತಿ ಪೂಜೆ ಮಾಡಿರಿ ಎಂದರು ಮತ್ತೊಬ್ಬರು ಮೂರ್ತಿ ಪೂಜೆ ಅವಶ್ಯಕತೆ ಇಲ್ಲ ಎಂದರು ಮಗದೊಬ್ಬರು ಹತ್ತಾರು ಮೂರ್ತಿ ಮಡಗಿ ಎಂದರು ಹೀಗೆ ನಾನಾ ಅವತಾರ ಎತ್ತಿದರು. ಎಲ್ಲವೂ ಇರುವುದ ಬಿಟ್ಟು ಇರದುದರೆಡೆಗೆ ತುಡಿವ ಜೀವನ ತೋರಿಸುವವರೆ. ಇರಲಿ ಅದು ಅವರವ ನಂಬಿಕೆಗೆ ಬಿಟ್ಟ ವಿಚಾರ. ನಾವು ಗುಟ್ಟಿನ ಬಗ್ಗೆ ನೋಡೋಣ.
ಮೊನ್ನೆ ನಾನು ಹೊಸತಾಗಿ ಕೊಂಡ ಮಾರುತಿ ೮೦೦ ನಲ್ಲಿ ಲಹರಿಯಲ್ಲಿ ಡ್ರೈವ್ ಮಾಡಿಕೊಂಡು ಬರುತ್ತಾ ಇದ್ದೆ. ಅಷ್ಟೊತ್ತಿಗೆ ಮೊಬೈಲ್ ರಿಂಗಣಿಸಿತು. ಗಮನ ಅತ್ತ ಹರಿಯಿತು. ನೇರವಾದ ರಸ್ತೆಯಾಗಿದ್ದರಿಂದ ಮೊಬೈಲ್ ಯಾರಿದ್ದಿರಬಹುದೆಂದು ನೋಡುತ್ತಾ ಸಾಗಿದೆ. ಹಿಂದಿನಿಂದ ಒಂದು ಕೆ ಎಸ್ ಆರ್ ಟಿಸಿ ಬಸ್ಸು ಬರುತ್ತಿತ್ತು. ನನ್ನ ಗಮನಕ್ಕೆ ಬರಲಿಲ್ಲ. ಆತ ಸ್ವಲ್ಪ ದೂರ ನನ್ನ ಹಿಂದೆಯೇ ಬಂದ. ಅವನಿಗೆ ಹಾರನ್ ಇರಲಿಲ್ಲವೆಂದೆನಿಸುತ್ತದೆ ಹಾಗಾಗಿ ಬಜಾಯಿಸಲಿಲ್ಲ. ಇರಲಿ ಅದು ಅವನ ತಪ್ಪಲ್ಲ ಬಿಡಿ. ನನಗೆ ಬಸ್ಸಿನ ಸದ್ದು ಕೇಳಿ ಎಡಬದಿಗೆ ಹೊರಳಿದೆ. ನನ್ನನ್ನು ದಾಟಿಕೊಂಡ ಹೋದ ಬಸ್ಸು ರಸ್ತೆಗೆ ಪೂರ್ಣ ಅಡ್ದವಾಗಿ ನಿಂತಿತು. ಇದೇನಪ್ಪಾ ಅಂತ ನಾನೂ ಅದರ ಹಿಂದೆ ಕಾರು ನಿಲ್ಲಿಸಿದೆ. ಆತ ಯಾಕೆ ಹಾಗೆ ನಿಲ್ಲಿಸಿದ್ದು ಅಂತ ನನಗೆ ಅರ್ಥವಾಗಲಿಲ್ಲ. ಅಷ್ಟರಲ್ಲಿ ಬೈಕ್ ಸವಾರನೊಬ್ಬ ಬಂದವ ನನ್ನ ಬಳಿ" ನೀವು ಅವನಿಗೆ ಸೈಡ್ ಕೊಡಲಿಲ್ಲವಂತೆ ಹಾಗಾಗಿ ಆತ ಹಾಗೆ ನಿಲ್ಲಿಸಿದ್ದಾನೆ" ಎಂದ ಓಹೋ ಹೀಗೋ ಸಮಾಚಾರ ಅಂತ ನಾನೂ ಸುಮ್ಮನೆ ನಿಲ್ಲಿಸಿಕೊಂಡೆ. ಡ್ರೈವರ್ ಇಳಿದುಬಂದ. ಹರೆಯದವ ಆತ ಬಹುಶಃ ಅಷ್ಟೇ ಕೆಲಸಕ್ಕೆ ಸೇರಿದ್ದಿರಬೇಕು ಬಹಳ ಉಮ್ಮೇದಿನಲ್ಲಿದ್ದ. ಕಾರಿನ ಬಳಿ ಬಂದವನು ಲಾಟ್ ಪೂಟ್ ಅಂತ ಕೂಗಲು ಶುರುಮಾಡಿದ. ನನಗೆ ಧಾವಂತ ಇರಲಿಲ್ಲ. ನಾನು ಒಂದೂ ಮಾತಾಡಲಿಲ್ಲ ಅವನ ಬಳಿ ಮಾತನಾಡುವ ಅಗತ್ಯವೂ ಇರಲಿಲ್ಲ ಅವಶ್ಯಕತೆಯೂ ಇರಲಿಲ್ಲ ಮತ್ತು ಮಾತನಾಡಿ ಪ್ರಯೋಜನವೂ ಇರಲಿಲ್ಲ. ಆತ ಒಬ್ಬನೇ ಏನೇನೋ ಕೂಗುತ್ತಿದ್ದ ನನ್ನ ತಲೆಯೊಳಗೆ ಅದು ಹೋಗುತ್ತಿರಲಿಲ್ಲ ನಾನು ಗದ್ದೆಯಲ್ಲಿ ಗದ್ದೆ ಹೂಟಿ ಮಾಡುತ್ತಿದ್ದ ರೈತನೊಬ್ಬನ ಕೆಲಸವನ್ನು ನೋಡತೊಡಗಿದ್ದೆ. ನನ್ನ ಈ ವರ್ತನೆ ಆತನಿಗೆ ಅನಿರೀಕ್ಷಿತ ಆಗಿದ್ದಿರಬೇಕು. ಪಾಪ ಅವನ ಕೂಗಿಗೆ ಪ್ರತಿಕ್ರಿಯೆ ಬಾರದ್ದರಿಂದ ಒಂಥರಾ ಮರ್ಯಾದೆ ಹೋದವನಂತೆ ಆಡತೊಡಗಿದ. ನಾನು ಏನೂ ನಡದೇ ಇಲ್ಲವೇನೋ ಏಂಬಂತೆ ನಿಧಾನ ಕಾರು ಓಡಿಸಿಕೊಂಡು ಮುನ್ನಡೆದೆ. ಆತ ತಬ್ಬಿಬ್ಬಾಗಿ ತಬ್ಬಿಬ್ಬಾಗಿ ನೋಡುತ್ತಲೇ ಇದ್ದ. ಗೋಣಗಾಟ ಕೂಗಾಟ ಮುಂದುವರೆದಿತ್ತೋ ಏನೋ ನನಗೇ ಕೇಳಿಸಲಿಲ್ಲ.
ಇಷ್ಟೆಲ್ಲಾ ಓದಿದರಲ್ಲ ನಾನು ಆರಂಭದಲ್ಲಿ ಹೇಳಿದೆನಲ್ಲ "ಗುಟ್ಟು" ಅಂತ , ಅದು ಇಲ್ಲಿಯೇ ಇದೆ. ಪತ್ತೆಮಾಡಿಕೊಂಡು ಅನುಷ್ಠಾನಕ್ಕೆ ತಂದೀರಾದರೇ ನಿಮ್ಮ ಲೈಫೂ "ಜಿಂಗಲಾಲ".

Friday, May 22, 2009

ಕಬೂತರ್ . ಬಾ... ಬಾ....ಬಾ..




ಬೆಕ್ಕು ನಾಯಿ ದನ ಜೇನು ಹಲವರು ಸಾಕುತ್ತಾರೆ. ಇವುಗಳನ್ನು ಸಾಕುವಲ್ಲಿ ನಮ್ಮ ಸ್ವಾರ್ಥವಿದೆ. ಇಲಿ ಹೆಗ್ಗಣ ವರ್ಲೆ ಜಿರ್ಲೆ ಅವಾಗಿಯೇ ನಮ್ಮೊಂದಿಗೆ ಇರುತ್ತವೆ. ನಮಗೆ ಬೇಡದಿದ್ದರೂ ನಮ್ಮ ಅತಿಥಿಗಳು. ಆದರೆ ಗಿಳಿ ಪಾರಿವಾಳ ನವಿಲು ಗಳನ್ನು ಸಾಕುವವರು ಕಡಿಮೆ. ಆದರೆ ಒಮ್ಮೆ ಆ ಪಕ್ಷಿಗಳ ಒಡನಾಟ ಶುರುವಾಯಿತೆಂದರೆ ನಂತರ ಬಿಡುವುದು ಕಷ್ಟ. ನೋಡಲು ಮುದ್ದು ಹಾಗೂ ಒಡನಾಟ ಖುಷ್ ಕೊಡುತ್ತದೆ.
ಇಪ್ಪತ್ತೈದು ವರ್ಷದ ಹಿಂದೆ ತಾಳಗುಪ್ಪದಲ್ಲಿ ಜೂಜನ ಹಿಟ್ಟಿನ ಮಿಲ್ಲಿನಲ್ಲಿ ಒಂದು ಗಿಳಿಯನ್ನು ಸಾಕಿದ್ದರು. ಅದು ಮುದ್ದಾಗಿ ಒಂದಿಷ್ಟು ಮಾತುಗಳನ್ನಾಡುತ್ತಿತ್ತು. ಕನ್ನಡಿಯನ್ನು ಅದಕ್ಕೆ ತೊರಿಸಿದರೆ ತನ್ನದೇ ಪ್ರತಿಬಿಂಬವನ್ನು ನೋಡಿ, ಕೋಣ್ತು..?(ಯಾರೂ..?) ಎನ್ನುತ್ತಿತ್ತು. ಪಕ್ಕಾ ಕಿರಿಸ್ತಾನರ ಮನೆಯ ಗಿಳಿಯಾದರೂ "ರಾಮಾ" ರಾಮಾ' ಎನ್ನುತ್ತಿತ್ತು. ಕಾಲಾನಂತರ ಅದರ ಆಯುಷ್ಯ ಮುಗಿಯಿತು.
ಕಳೆದ ವರ್ಷ ಹೊಸಬಾಳೆಯಲ್ಲಿ ದಾರಿ ಪಕ್ಕದ ಶೆಟ್ಟಿ ಬಿದಾರದಲ್ಲಿ ಒಂದುಮನೆಯಲ್ಲಿ ಗಿಳಿ ಕಂಡೆ. ಹತ್ತಿರ ಹೋಗಿ ಇಣುಕಿದೆ. ಮನೆಯಾತನಿಗೆ ಖುಷ್ ಆಯಿತು. ಬನ್ನಿ ಸ್ವಾಮಿ ಅಂದ ಗಿಳಿಯೂ ಒಂದಿಷ್ಟು ಮಾತುಗಳನ್ನು ಉಲಿಯಿತು. ಮೊನ್ನೆ ಮತ್ತೆ ಹೋದಾಗ ಹಣುಕಿದೆ. ಆ ಜಾಗದವನಿಗೂ ಮನೆಯವರಿಗೂ ಕಿರಿಕ್ ಆಗಿ ಆ ಮನೆಯನ್ನು ಕೆಡವಿದ್ದರು. ಮನೆಯೇ ಇಲ್ಲದ ಮೇಲೆ ಗಿಳಿ ಎಲ್ಲಿ?
ಆರೆಂಟು ತಿಂಗಳ ಹಿಂದೆ ಕೆರೇಕೈ ಪ್ರಶಾಂತನಿಗೆ ಪಾರಿವಾಳ ಸಾಕುವ ತಲುಬು ಬಂದಿತ್ತು. ಕೊಟ ಕೊಟ ಕೆತ್ತುವ ಕೃಷ್ಟಾಚಾರಿ ಹಿಡಿದು ಒಂದು ಬೋನ್ ತಯಾರಿಸಿದ. ಬೈಕ್ ಕುಂಡೆಗೆ ಹಾಕಿಕೊಂಡು ಪಡವಗೊಡಿಗೆ ಹೋಗಿ ಜೊತೆಗೆ ಇನ್ನೂರು ರೂಪಾಯಿ ಪೀಕಿ ಎರಡು ಜೊತೆ ಅಚ್ಚ ಬಿಳಿಯ ಪಾರಿವಾಳ ತಂದ "ರಾಗಣ್ಣ ಪಾರಿವಾಳ ತೈಂದಿ ಗೂಡೀಗೆ ಬಿಡ್ತಿ ಈಗ ಬತ್ಯಾ..?" ಅಂದ. ತಡಬಡ ಮಾಡಲಿಲ್ಲ ಬೈಕನ್ನೇರಿದೆ.
ಪ್ರಶಾಂತ ಆಗಲೇ ಚೀಲದಿಂದ ಪಾರಿವಾಳ ತೆಗೆದು ಅದರ ರಕ್ಕೆಗೆ ಗಮ್ ಟೇಪ್ ಅಂಟಿಸುತ್ತಿದ್ದ. ನಾನೂ ಜತೆಗೂಡಿದೆ. ಪಾರಿವಾಳ ಮುಟ್ಟಿದೆ ಆಹಾ ಎಂತಹ ಮುದ್ದಾದ ಪಕ್ಷಿ ಅಂತ ಅನ್ನಿಸಿತು. ಹೊಸ ಗೂಡಿಗೆ ಪಾರಿವಾಳ ಬಿಡುವಾಗ ಹಾರಿ ಹೋಗದಂತೆ ಒಂದೆರಡು ವಾರಗಳ ಮಟ್ಟಿಗೆ ಗಮ್ ಟೇಪ್ ಹಚ್ಚಿಡಬೇಕೆಂದು ಪಾರಿವಾಳ ಕೊಟ್ಟವನು ಹೇಳಿದ್ದನಂತೆ. ಹಾಗಾಗಿ ಟೇಪ್ ಹಚ್ಚಿ ಗೂಡಿನ ಬಳಿ ಬಿಟ್ಟ. ಒಂದೆರಡು ಕ್ಷಣ ನಾಲ್ಕೂ ಪಾರಿವಾಳಗಳು ಅತ್ತಿತ್ತ ಓಡಾಡಿದವು. ಮತ್ತೆ ಅವುಕ್ಕೆ ಏನನಿಸಿತೋ ಗಮ್ ಟೇಪ್ ಇದ್ದಂತಯೇ ಪಟಪಟ ಹಾರಿ ಪಕ್ಕ ದ ಮನೆಯ ಮಾಡಿನಲ್ಲಿಕುಳಿತುಕೊಂಡವು. ಒಂದು ಪಾರಿವಾಳಕ್ಕೆ ಸರಿಯಾಗಿ ಹಾರಲಾಗಲಿಲ್ಲ. ರಸ್ತೆಯ ಮೇಲೆ ಬಿತ್ತು. ಪ್ರಶಾಂತ ಅದನ್ನು ಎತ್ತಿಕೊಳ್ಳಲು ಓಡುವ ಹೊತ್ತಿಗೆ ಅದೆಲ್ಲಿತ್ತೋ ಬೀದಿನಾಯಿ ಅದನ್ನು ಆಹುತಿ ತೆಗೆದುಕೊಂಡೇ ಬಿಟ್ಟಿತು. ನಮ್ಮ ಕೂಗಾಟ ಹಾರಾಟ ಚೀರಾಟ ಲೆಕ್ಕಿಸದೆ ನಾಯಿ ರೈಟ್. ಮತ್ತೆ ಮೂರು ಪಾರಿವಾಳಗಳು ಮೂರು ದಿಕ್ಕಿಗೆ ಹಾರಿ ಹೋದವು. " ಇಲ್ಲೆ ಅವು ಸಾಯಂಕಲ ವಾಪಾಸ್ ಬತ್ವಡ ಪಾರಿವಾಳ ಕೊಟ್ಟವ ಹೇಳಿದ್ದ" ಎಂದ. ಇಂದಿನವರೆಗೂ ಸಾಯಂಕಾಲ ಬರಲೇ ಇಲ್ಲ. ಕೆಲವರು ಹೇಳಿದರು ಅವು ವಾಪಾಸು ತಂದಲ್ಲಿಗೆ ಹೋದವು ಎಂದು. ನಿಜವಾಗಿಯೂ ಅಲ್ಲಿಗೇ ಹೋದವೋ ಅಥವಾ ಗಿಡುಗನ ಪಾಲಾದವೋ ಗೊತ್ತಾಗಲೇ ಇಲ್ಲ. ಆದರೆ ಬಹಳ ಅಂದರೆ ಬಹಳ ಮುದ್ದಾಗಿತ್ತು.
ಈಗ ನನಗೆ ಅದೊಂದು ಅವತಾರ ಮಾಡಿಬಿಡುವ ಮನಸ್ಸಾಗಿದೆ. ಮನಮನೆಯ ಪಾಂಚುವಿಗೆ ಒಂದು ಜೋಡಿ ಕೊಡಲು ಹೇಳಿದ್ದೇನೆ. ಮಳೆಗಾಲ ಮುಗಿಯುವವರೆಗೆ ಕಾಯಬೇಕು. ನಾನು ಪಾರಿವಾಳ ಹಾಗೂ ಗಿಳಿ ತಂದಮೇಲೆ ಹೇಳುತ್ತೇನೆ. ಆವಾಗ ಬನ್ನಿ ಮಜ ಇರುತ್ತೆ ಅಥವಾ ಮಜ ಇದ್ದರೂ ಇರಬಹುದು..!.

Thursday, May 21, 2009

ಕಾಡು ನೇರ್ಲೆ


ನೇರಲೆ ಹಣ್ಣು ಯಾರಿಗೆ ಗೊತ್ತಿಲ್ಲ, ಪೇಟೆಯಲ್ಲಿ ಸಿಗುವ ಹೈಬ್ರಿಡ್ ನೇರಲೆ ಹಣ್ಣಿನಿಂದಾಗಿ ಇದು ಎಲ್ಲರಿಗೆ ಚಿರಪರಿಚಿತ. ಆದರೆ ಈ ಕಾಡುನೇರ್ಲೆ ರುಚಿಯಲ್ಲಿ ಅದ್ಬುತ. ತಿನ್ನಲು ಕುಳಿತರೆ ಮುಷ್ಟಿಗಟ್ಟಲೆ ಖಾಲಿ ಮಾಡಿಬಿಡಬಹುದು,ಕಾಡು ನೇರ್ಲೆ ಅಷ್ಟೊಂದು ಸಿಹಿ. ಆನಂತರ ಬಾಯಿ ನಾಲಿಗೆ ಸಮೇತ ನೇರಲೆ ಬಣ್ಣಕ್ಕೆ ತಿರುಗುತ್ತದೆ. ಬೆಳಿಗ್ಗೆ ಹಣ್ಣುತಿಂದರೆ ಮಧ್ಯಾಹ್ನದವರೆಗೂ ನಾಲಿಗೆ ಹೊರಚಾಚಿ ಬದಲಾದ ಬಣ್ಣ ನೋಡಿಕೊಳ್ಳುವುದೇ ಒಂದು ಮೋಜು ಮಜ. ಇದು ಅತ್ಯುತ್ತಮ ಔಷಧೀಯ ಗುಣವನ್ನು ಹೊಂದಿದ್ದು ಅತಿಬೇಧಿ ನಿಯಂತ್ರಣಕ್ಕೆ ಇದರ ರಸವನ್ನು ಬಳಸುತ್ತಾರೆ. ಮಲೆನಾಡ ಮಕ್ಕಳ ಇಂಕ್ ಹಣ್ಣು ಎಂದೂ ಕರೆಸಿಕೊಂಡಿದೆ .