Thursday, April 16, 2009

ಅಂತರ್ಯಾತ್ರೆ

ಎಲ್ಲಾ ಅಂದುಕೊಂಡಂತಯೇ ಆಗಿದ್ದರೆ "ಕಟ್ಟು ಕಥೆಯ ಕಟ್ಟು" ಎಂಬ ಹೆಸರಿನ ನನ್ನದೆ ಕಥಾಸಂಕಲನವೊಂದು ಇದೇ ಏಪ್ರಿಲ್ ನಲ್ಲಿ ಹೊರಬರಬೇಕಾಗಿತ್ತು. ಹಿಂದೆಯೇ ಬ್ಲಾಗ್ ನಲ್ಲಿ ಹಾಗೆ ಬರೆದಿದ್ದೆ ಕೂಡ. ನಮ್ಮ ಕಥೆಯನ್ನು ನಾವೇ ಪ್ರಕಟಿಸಿಕೊಳ್ಳಬೇಕು ಹಾಗು ನಾವೇ...! ಓದಿಕೊಳ್ಳಬೇಕು ಎಂದು. ಆದರೆ ಎಲ್ಲಾ ಅಂದುಕೊಂಡಂತೆ ಆಗಲಿಲ್ಲ. ಹಾಗಾಗಿ ಕಥಾ ಸಂಕಲನ ಹೊರಬರಲಿಲ್ಲ. ಕಾರಣ..? ನೂರಾರು ಹೇಳಬಹುದು.
ಕಳೆದ ಎರಡು ತಿಂಗಳಿನಿಂದ ನನ್ನ ಬರವಣಿಗೆ ಅಪೂಟ್ ಬಂದ್ ಆಗಿದೆ. ದಿನಕ್ಕೊಂದು ಬ್ಲಾಗ್ ವಾರಕ್ಕೊಂದು ಕಥೆ ಹದಿನೈದು ದಿನಕ್ಕೊಂದು ಲೇಖನ ಅಂತೆಲ್ಲಾ ಬರೆಯುತ್ತಿದ್ದವನು ಅದೇಕೋ ಮಂಕಾಗಿಬಿಟ್ಟೆ. ಓದುವ ಹವ್ಯಾಸವನ್ನು ನಿಲ್ಲಿಸಿಬಿಟ್ಟೆ. ಯಾವಾಗಲೋ ಬರೆದ ಕಥೆಗಳನ್ನು ಬ್ಲಾಗ್ ಗೆ ಅಪ್ ಲೋಡ್ ಮಾಡುವುದನ್ನು ಬಿಟ್ಟರೆ ಮತ್ತಿನ್ನೇನೂ ಮಾಡಲಿಲ್ಲ. ಪರಿಚಯ ಇರುವ ಬರಹಗಾರರಿಗೆ ಪೋನ್ ಹಚ್ಚುವುದನ್ನೂ ಬಿಟ್ಟೆ. ಅದಕ್ಕೆ ಮುಖ್ಯ ಸಬೂಬು ಎಂದರೆ ನನ್ನೊಳಗೆ ನಾನು ಇಳಿಯುವ ಯತ್ನಕ್ಕೆ ಕೈ ಹಾಕಿದ್ದು. ವೇದ ಶಾಸ್ತ್ರಗಳ ಹಂಗಿಲ್ಲದೆ, ಪುರಾಣ ಪುಣ್ಯ ಕಥೆಗಳ ಮಾರ್ಗದರ್ಶನವಿಲ್ಲದೆ, ಇತಿಹಾಸದ ಅವಲೋಕನವಿಲ್ಲದೆ, ಪೂರ್ವಾಗ್ರಹದ ಯೋಚನೆಯಿಲ್ಲದೆ ನನ್ನೊಳಗೆ ನಾನು ಮುಳುಗಿದೆ. ಮತ್ತು ಇನ್ನು ಮುಳುಗುತ್ತಲೇ ಇದ್ದೇನೆ. ಅದೇನೋ ಸಿಕ್ಕಂತಾಗುತ್ತಿದೆ. ಮತ್ತೆ ಮರೀಚಿಕೆ. ಹಾಗೆ ಇಳಿಯುತ್ತಾ ಸಾಗುತ್ತಾ ಇರುವ ಅಂತರ್ಯಾತ್ರೆ ಅದ್ಬುತವನ್ನು ಕಲ್ಪಿಸಿದೆ. ಅದನ್ನು ಎಲ್ಲಾ ಹೇಳಬೇಕು ಅಂತ ಅನ್ನಿಸುತ್ತದೆ ಆದರೆ ಅದಕ್ಕೆ ಪಕ್ವವಾದ ಕಾಲ ಇನ್ನೂ ಬಂದಿಲ್ಲ ಅಂತಲೂ ಹೆದರಿಸುತ್ತದೆ ಒಳಮನಸ್ಸು.

ಅಷ್ಟರೊಳಗೆ ಕಥಾಸಂಕಲನ ಹೊರ ತರಬೇಕು. ಏಪ್ರಿಲ್ ತಿಂಗಳಿನಲ್ಲಿ ಕಥಾಸಂಕಲನ ಹೊರತರಲಾಗದ್ದಕ್ಕೆ ಮೇಲಿನ ಕಾರಣ ಯಾವುದೂ ಅಲ್ಲ. ಜೇಬಿನದ್ದು ಮುಖ್ಯ ಕಾರಣ. ಕನಿಷ್ಟ ಇಪ್ಪತ್ತು ಸಾವಿರ ರೂಪಾಯಿ ಬೇಡುವ ಕಥಾಸಂಕಲನದ ಕೆಲಸ ತುಸು ಕಷ್ಟಕರ ಅಂತ ಮೇಲ್ಮನಸ್ಸಿಗೆ ಅನ್ನಿಸುತ್ತಿದೆ. ಆದರೆ ಅಂತರ್ಯಾತ್ರೆಯ ಸಮಯದಲ್ಲಿ ಅದಕ್ಕೊಂದು ಖಚಿತ ಉತ್ತರ ಸಿಕ್ಕಿದೆ. ನಡಯಲೇಬೇಕಾದ್ದು ನಡದೇ ನಡೆಯುತ್ತದೆ. ಅದು ಸರಿ ಆದರೆ ಅದು ಹೇಗೆ? ಎಂಬುದು ಮೆಲ್ಮನಸ್ಸಿನ ಪ್ರಶ್ನೆ?. ಉತ್ತರ ಇಂದು ಗೊತ್ತಿಲ್ಲ. ನಾಳೆ...? ನೋಡೋಣ.

Wednesday, April 15, 2009

ಕಾಲೊಳಗೆ ಬೂಟೋ ಬೂಟೊಳಗೆ ಕಾಲೋ


ಅಂತ ನೀವೆ ನಿರ್ಧರಿಸಬೇಕು?.

Monday, April 13, 2009

ರಿಂಗ್ ರಿಂಗ್ ರಿಂಗ್


ಹಾ ಇದು ಉಂಗುರ ಅಂತ ನೋಡಿದಕೂಡಲೆ ತಿಳಿಯುತ್ತದೆ. ಸ್ವಲ್ಪ ಹೊಸ ತರಹದ್ದು ಅಂತ ಅನ್ನಿಸಲೂ ಬಹುದು. ನಾನು ಹಾಗೆ ಅಂತ ಅಂದುಕೊಂಡು ನೋಡಿದ್ದೆ. ಆದರೆ ಅದರ ಅರ್ಥ...! ಬೇರೆಯೇ ಇದೆಯಂತೆ. ಇದು ನಿಶ್ಚಿತಾರ್ಥದ ಉಂಗುರವಂತೆ ವರನ ಉಂಗುರ ವಧುವಿನ ಉಂಗುರ ಯಾವುದೆಂಬ ಆಯ್ಕೆ ಹಾಗೂ ಅದರ ಒಳಮರ್ಮ ನಿಮಗೆ ಬಿಟ್ಟದ್ದು.
ಈಗ ನಿಮ್ಮ ತುಟಿಯಂಚಲಿ ಒಂದು ನಗು ಮಿಂಚಿರಬಹುದು. ಹೇಗಿದೆ ನೋಡಿ ಐಡಿಯಾ....! ಜನರದ್ದು.